Followers

Thursday, 4 June 2020

ಗರುಡ ಪುರಾಣ ಅಧ್ಯಾಯ 5 ಭಾಗ 1

ಗ  ಪು ಅಧ್ಯಾಯ 5 ಭಾಗ 1

         ಪಾಪಚಿಹ್ನನಿರೂಪಣಮ್                                                         ಪಾಪಚಿಹ್ನೆಗಳ ನಿರೂಪಣೆ

 

ಗರುಡ ಉವಾಚ

ಯೇನ ಯೇನ ಚ ಪಾಪೇನ ಯದ್ಯಚ್ಚಿಹ್ನಂ ಪ್ರಜಾಯತೇ ।

ಯಾಂ ಯಾಂ ಯೋನಿಂ ಚ ಗಚ್ಛಂತಿ ತನ್ಮೇ ಕಥಯ ಕೇಶವ ॥೦೧॥


ಗರುಡ° ಹೇಳುತ್ತ°- ಹೇ ಕೇಶವ!, ಏವ ಏವ ಪಾಪಗಳಿಂದ ಏವ ಏವ ಚಿಹ್ನೆಗಳು ಉಂಟಾದವು ಯಾವ ಯಾವ  ಯೋನಿಗೆ (ಗರ್ಭಕ್ಕೆ) ಹೋಗುವವು . ಅದರ ಬಗ್ಗೆ ನನಗೆ ಹೇಳು.


ಶ್ರೀಭಗವಾನುವಾಚ


ಯೈಃ ಪಾಪೈರ್ಯಾಂತಿ ಯಾಂ ಯೋನಿಂ ಪಾಪಿನೋ ನರಕಾಗತಾಃ ।

ಯೇನ ಪಾಪೇನ ಯಚ್ಚಿಹ್ನಂ ಜಾಯತೇ ಮಮ ತಚ್ಛೃಣು ॥೦೨॥


ಭಗವಂತ° ಹೇಳಿದ° – ನರಕದಿಂದ  ಬಂದ ಪಾಪಿಗಳು ಯಾವ ಪಾಪಗಳಿಂದ ಯಾವ ಗರ್ಭಕ್ಕೆ ಹೋಗುವವು, ಯಾವ ಪಾಪಕ್ಕೆ ಯಾವ ಚಿಹ್ನೆ ಉಂಟಾದವು  ಹೇಳುತ್ತೇನೆ ಕೇಳು.


ಬ್ರಹ್ಮ ಹಾ ಕ್ಷಯಾರೋಗೀ ಸ್ಯಾದ್ಗೋಘ್ನಃ ಸ್ಯಾತ್ಕುಬ್ಜಕೋ ಜಡಃ ।

ಕನ್ಯಾಘಾತೀ ಭವೇತ್ಕುಷ್ಠೀ ತ್ರಯಶ್ಚಾಂಡಾಲಯೋನಿಷು ॥೦೩॥


ಬ್ರಹ್ಮಹತ್ಯೆ ಮಾಡಿದವ° ಕ್ಷಯರೋಗಿಯೂ, ಗೋಹತ್ಯೆ ಮಾಡಿದವ  ಗೂನು ಬೆನ್ನಿನವನಾಗಿ ಜಡನೂ, ಕನ್ಯಾಹತ್ಯೆ ಮಾಡಿದವ ಕುಷ್ಠರೋಗಿಯೂ ಆಗುತ್ತಾನೆ ಈ ಮೂವರೂ ಚಾಂಡಾಲರಾಗಿ ಹುಟ್ಟುತ್ತಾರೆ 


ಸ್ತ್ರೀಘಾತೀ ಗರ್ಭಪಾತೀ ಚ ಪುಲಿಂದೋ ರೋಗವಾನ್ಭವೇತ್ ।

ಅಗಮ್ಯಾಗಮನಾತ್ಷಂಢೋ ದುಶ್ಚರ್ಮಾ ಗುರುತಲ್ಪಗಃ ॥೦೪॥


ಸ್ತ್ರೀಹತ್ಯೆ ಮಾಡಿದವ ಮತ್ತೆ ಗರ್ಭಪಾತ ಮಾಡಿಸಿದವ ಅನಾಗರಿಕನಾಗಿ (ಬೇಡನಾಗಿ) ರೋಗಿಯಾಗಿ ಹುಟ್ಟುತ್ತ  ಅಗಮ್ಯಸ್ತ್ರೀಯರಲ್ಲಿ ಗಮನ ಮಾಡಿದವ ಷಂಡನಾಗಿಯೂ, ಗುರುಪತ್ನಿಯ ಗಮನ ಮಾಡಿದವ ಕೆಟ್ಟ ಚರ್ಮರೋಗಿಯಾಗಿಯೂ ಹುಟ್ಟುತ್ತಾನೆ .


ಮಾಂಸಭೋಕ್ತಾsತಿರಕ್ತಾಂಗಃ ಶ್ಯಾಮದಂತಸ್ತು ಮದ್ಯಪಃ ।

ಅಭಕ್ಷ್ಯಭಕ್ಷಕೋ ಲೌಲ್ಯಾದ್ಬ್ರಾಹ್ಮಣಃ ಸ್ಯಾನ್ಮಹೋದರಃ ॥೦೫॥


ಮಾಂಸ ತಿನ್ನುವವನು  ಅತಿ ಕೆಂಪು ಬಣ್ಣದ ಶರೀರವುಳ್ಳವನೂ, ಮದ್ಯಪಾನ ಮಾಡುವವ  ಕಪ್ಪು ಹಲ್ಲುಗಳುಳ್ಳವನೂ, ತಿನ್ನಲಾಗದಿದ್ದರು ಚಪಲತೆಯಿಂದ ತಿನ್ನುವ  ಬ್ರಾಹ್ಮಣ ಮಹೋದರ (ಜಲೋದರ) ರೋಗಿಯೂ ಆಗುತ್ತಾನೆ 


ಅದತ್ತ್ವಾಮಿಷ್ಟಮಶ್ನಾತಿ ಸ ಭವೇದ್ಗಲಗಂಡವಾನ್ ।

ಶ್ರಾದ್ಧೇsನ್ನಮಶುಚಿಂ ದತ್ತ್ವಾಚಿತ್ರಕುಷ್ಠಿ ಪ್ರಜಾಯತೇ ॥೦೬॥


ಇಷ್ಟವಾದ ತಿಂಡಿಯ ಇನ್ನೊಬ್ರಿಗೆ ಕೊಡದೆ  ತಿನ್ನುವವ ಗಳಗಂಡ ರೋಗಿ ಆಗುತ್ತಾನೆ . ಶ್ರಾದ್ಧಲ್ಲಿ ಅಶುಚಿ ಅನ್ನವ ಕೊಡುವವರು ಚಿತ್ರಕುಷ್ಠರೋಗಿ ಆಗುತ್ತಾನೆ 

.

ಗುರೋರ್ಗರ್ವೇಣಾವಮಾನಾದಪಸ್ಮಾರೀ ಭವೇನ್ನರಃ ।

ನಿಂದಕೋ ವೇದಶಾಸ್ತ್ರಾಣಾಂ ಪಾಂಡುರೋಗಿ ಭವೇದ್ಧ್ರುವಮ್ ॥೦೭॥


ಗರ್ವದಿಂದ ಗುರುಗಳಿಗೆ  ಅವಮಾನ ಮಾಡಿದ ಮನುಷ್ಯ ಅಪಸ್ಮಾರ ರೋಗವನ್ನು ಆನುಭವಿಸುತ್ತಾನೆ  ವೇದಶಾಸ್ತ್ರಗಳ ನ್ನು ನಿಂದಿಸಿದವನು ಖಂಡಿತವಾಗಿಯೂ ಪಾಂಡುರೋಗಿ ಆಗುತ್ತಾನೆ 


ಕೂಟಸಾಕ್ಷೀ ಭವೇನ್ಮೂಕಃ ಕಾಣಃ ಸ್ಯಾತ್ಪಂಕ್ತಿಭೇದಕಃ ।

ಅನೋಷ್ಠಃ ಸ್ಯಾದ್ವಿವಾಹಘ್ನೋ ಜನ್ಮಾಂಧಃ ಪುಸ್ತಕಂ ಹರೇತ್ ॥೦೮॥


ಸುಳ್ಳುಸಾಕ್ಷಿ ಹೇಳುವವ ಮೂಕನಾವುತ್ತ. ಪಂಕ್ತಿಭೇದ ಮಾಡುವವ ಒಂದು ಕಣ್ಣು ಕುರುಡನೂ, ವಿವಾಹಕ್ಕೆ ವಿಘ್ನತಂದವ  ತುಟಿ ಇಲ್ಲದವನಾಗಿಯೂ, ಪುಸ್ತಕ ಕಳ್ಳತನ ಮಾಡುವವನು ಹುಟ್ಟುಕುರುಡನೂ ಆಗುತ್ತಾನೆ 

.

ಗೋಬ್ರಾಹ್ಮಣಪದಾಘಾತಾತ್ಖಂಜಃ ಪಂಗುಶ್ಚ ಜಾಯತೇ ।

ಗದ್ಗದೋsನೃತವಾದೀ ಸ್ಯಾತ್ತಚ್ಛ್ರೋತಾ ಬಧಿರೋ ಭವೇತ್ ॥೦೯॥


ಗೋವಿನ ಮೆಟ್ಟುವವನು ಒಂದು ಕಾಲಿಲ್ಲದವನಾಗಿಯೂ, ಬ್ರಾಹ್ಮಣನ ಮೆಟ್ಟುವವನು ಎರಡು ಕಾಲಿಲ್ಲದವನಾಗಿಯೂ ಆಗುತ್ತಾನೆ  ಸುಳ್ಳು ಹೇಳುವವನು ಕೊಕ್ಕಳಿಕೆ ಬಾಯಿಯವನೂ, ಅದರ ಕೇಳುವವ ಕಿವುಡನೂ ಆಗುತ್ತಾನೆ 


ಗರದಃ ಸ್ಯಾಜ್ಜಡೋನ್ಮತ್ತಃ ಖಲ್ವಾಟೋsಗ್ನಿ ಪ್ರದಾಯಕಃ ।

ದುರ್ಭಗಃ ಪಲವಿಕ್ರೇತಾ ರೋಗವಾನ್ಪರಮಾಂಸಭುಕ್  ॥೧೦॥


ವಿಷಕೊಡುವವನು  ಮರ್ಳನೂ, ಕಿಚ್ಚು ಹಚ್ಚುವವನು ಬೋಳು ತಲೆಯವನೂ, ಮಾಂಸ ಮಾರುವವನು  ಅದೃಷ್ಟಹೀನನೂ, ಇತರ ಜೀವಿಗಳ ಮಾಂಸ ತಿನ್ನುವವ ರೋಗಿಯೂ ಆಗುತ್ತಾನೆ 


ಹೀನಜಾತೌ ಪ್ರಜಾಯೇತ ರತ್ನಾನಾಮಪಹಾರಕಃ ।

ಕುನಖೀ ಸ್ವರ್ಣಹರ್ತಾಸ್ಯಾದ್ಧಾತುಮಾತ್ರ ಹರೋsಧನಃ ॥೧೧॥


ರತ್ನಗಳನ್ನು  ಅಪಹರುಸುವವ ಹೀನ ಜಾತಿಲಿ ಹುಟ್ಟುತ್ತನೆ . ಚಿನ್ನವ ಅಪಹರುಸುವವನು ಕೆಟ್ಟ ಉಗುರು ಇರು ವವನಾಗಿಯೂ, ಬೆಳ್ಳಿ ತಾಮ್ರ ಮುಂತಾದವನ್ನು ಅಪಹರುಸುವವ ನಿರ್ಧನನೂ ಆಗುತ್ತಾನೆ 

.

ಅನ್ನಹರ್ತಾ ಭವೇದಾಖುಃ ಶಲಭೋ ಧಾನ್ಯಹಾರಕಃ ।

ಚಾತಕೋ ಜಲಹರ್ತಾ ಸ್ಯಾದ್ವಿಷಹರ್ತಾ ಚ ವೃಶ್ಚಿಕಃ ॥೧೨॥


ಅನ್ನವನ್ನು ಕಳ್ಳತನ ವ ಇಲಿಯೂ, ಧಾನ್ಯಗಳನ್ನು  ಕಳ್ಳತ್ತನವನು ಮಿಡತೆಯೂ, ನೀರ ಕಳ್ಳತನ ಮಾಡುವವನು  ಚಾತಕ ಹಕ್ಕಿಯೂ, ವಿಷವ ಕಳ್ಳತನ ಮಾಡುವನು ಚೇಳೂ ಆಗುತ್ತಾನೆ 

.

ಶಾಕಂ ಪತ್ರಂ ಶಿಖೀ ಹೃತ್ವಾ ಗಂಧಾಂಶ್ಛುಂಛುಂದರೀ ಶುಭಾನ್ ।

ಮಧು ದಂಶಃ ಪಲಂ ಗೃಧ್ರೋ ಲವಣಂ ಚ ಪಿಪೀಲಿಕಾ ॥೧೩॥


ತರಕಾರಿ, ಸೊಪ್ಪುಗಳ ಕಳ್ಳತನ ಮಾಡುವನು ನವನವಿಲಾಗಿಯೂ, ಶುಭವಸ್ತುವಾದ ಗಂಧವ ಕಳ್ಳತನ ಮಾಡು ವ ಮೂಗಿಲಿಯಾಗಿಯೂ, ಜೇನ ಕಳ್ಳತನ ಮಾಡುವನು ನೆಳವಾಗಿಯೂ, ಮಾಂಸ ಕಳ್ಳತನ ಮಾಡುವನು  ಹದ್ದು ಆಗಿಯೂ, ಉಪ್ಪು ಕಳ್ಳತನ ಮಾಡುವನು ಎರುಗು ಆಗಿಯೂ ಹುಟ್ಟುತ್ತಾನೆ 


ತಾಂಬೂಲಫಲಪುಷ್ಪಾದಿಹರ್ತಾ ಸ್ಯಾದ್ವಾನರೋವನೇ ।

ಉಪಾನತ್ತೃಣಕಾರ್ಪಾಸಹರ್ತಾ ಸ್ಯಾನ್ಮೇಷಯೋನಿಷು ॥೧೪॥


ತಾಂಬೂಲ, ಹಣ್ಣು, ಹೂವು ಇತ್ಯಾದಿಗಳ ಅಪಹರಿಸುವವ ಕಾಡಿಲ್ಲಿ ವಾನರನಾಗುತ್ತನೆ . ಮೆಟ್ಟು, ಹುಲ್ಲು, ಹತ್ತಿಮರ ಇವುಗಳ ಅಪಹರಿಸುವವನು ಕುರಿಯ ಗರ್ಭಲ್ಲಿ ಹುಟ್ಟುತ್ತಾನೆ 


ಯಶ್ಚ ರೌದ್ರೋಪಜೀವೀ ಚ ಮಾರ್ಗೇ ಸಾರ್ಥಾನ್ವಿಲುಂಪತಿ ।

ಮೃಗಯಾವ್ಯಸನೀ ಯಸ್ತು ಛಾಗಃ ಸ್ಯಾದ್ವಧಿಕಗೃಹೇ ॥೧೫॥


ಯಾವಾತನು  ಹಿಂಸಾಕೃತ್ಯಗಳಿಂದ ಜೀವನ ನಡೆಸುತ್ತನೋ, ಯಾವಾತನು  ಮಾರ್ಗಲ್ಲಿ ಯಾತ್ರಿಕರ ಧನವ ಲೂಟಿಮಾಡುತ್ತನೋ, ಯಾವಾತ ಬೇಟೆ ಆಡುತ್ತಾನೋ ದುರ್ಗುಣವುಳ್ಳವನೋ, ಅವ ಕಟುಕನ ಮನೆಲಿ ಕುರಿಯಾಗಿ ಜನ್ಮ ತಾಳುತ್ತನೆ 

.

ಯೋ ಮೃತೋ ವಿಷಪಾನೇನ ಕೃಷ್ಣ ಸರ್ಪೋ ಭವೇದ್ಗಿರೌ ।

ನಿರಂಕುಶಸ್ವಭಾವಃ ಸ್ಯಾತ್ಕುಂಜರೋ ನಿರ್ಜನೇ ವನೇ ॥೧೬॥


ವಿಷ ಸೇವಿಸಿ ಮರಣ ಹೊಂದುವನು ಪರ್ವತಲ್ಲಿ ಕೃಷ್ಣಸರ್ಪ ಆಗುತ್ತಾನೆ . ನಿರಂಕುಶ ಸ್ವಭಾವದವನು (ಅಮರ್ಯಾದಿತ ಸ್ವಭಾವದಂವ), ನಿರ್ಜನ ಅರಣ್ಯಲ್ಲಿ ಆನೆ ಆಗಿ ಹುಟ್ಟುತ್ತಾನೆ 


ವೈಶ್ವದೇವಮಕರ್ತಾರಃ ಸರ್ವಭಕ್ಷಾಶ್ಚ ಯೇ ದ್ವಿಜಾಃ ।

ಅಪರೀಕ್ಷಿತಭೋಕ್ತಾರೋ ವ್ಯಾಘ್ರಾಃ ಸ್ಯುರ್ನಿರ್ಜನೇ ವನೇ ॥೧೭॥


ದ್ವಿಜನಾದ ಯಾವಾತನು  (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ವೈಶ್ವದೇವ ಪೂಜೆ (ವೈಶ್ವದೇವಬಲಿ) ಮಾಡದೆ ಎಲ್ಲ ಅನ್ನವನ್ನು ಉಣ್ತನೋ, ಪರೀಕ್ಷಣೆ (ಪರಿಷಿಂಚನೆ) ಮಾಡದೆ  ಊಟ ಮಾಡ್ತನೋ, ಅವನು ನಿರ್ಜನ ಕಾಡಿಲ್ಲಿ ಹುಲಿಯಾಗಿ ಹುಟ್ಟುತ್ತಾನೆ 


ಗಾಯತ್ರೀಂ ನ ಸ್ಮರೇದ್ಯಸ್ತು ಯೋ ನ ಸಂಧ್ಯಾಮುಪಾಸತೇ ।

ಅಂತರ್ದುಷ್ಟೋ ಬಹಿಃಸಾಧುಃ ಸ ಭವೇದ್ಬ್ರಾಹ್ಮಣೋ ಬಕಃ ॥೧೮॥


ಗಾಯತ್ರಿ ಸ್ಮರಣೆ ಮಾಡದದೆ ಇರುವವನು , ಸಂಧ್ಯೋಪಾಸನೆ ಮಾಡದೆ ಇರುವವನು , ಅಂತರಂಗದಲ್ಲಿ ದುಷ್ಟನಾಗಿಯೂ, ಬಹಿರಂಗದಲ್ಲಿ ಸಾಧುವಾಗಿಯೂ ಇರುವ ಬ್ರಾಹ್ಮಣ ಬಕಪಕ್ಷಿ ಆಗುತ್ತಾನೆ 


ಅಯಾಜ್ಯ ಯಾಜಕೋ ವಿಪ್ರಃ ಸ ಭದೇದ್ದ್ರಾಮಸೂಕರಃ ।

ಖರೋ ವೈ ಬಹುಯಾಜಿತ್ವಾತ್ಕಾಕೋ ನಿರ್ಮಂತ್ರ ಭೋಜನಾತ್ ॥೧೯॥


ಯಜ್ಞಮಾಡದೆ ಹಾಗೂ  ಅನರ್ಹನಾಗಿರುವವನಿಂದ ಯಜ್ಞಮಾಡುಸುವ ಬ್ರಾಹ್ಮಣ ಹಳ್ಳಿಲಿ ಹಂದಿಯಾಗಿ ಹುಟ್ಟುತ್ತಾನೆ ಹಣಕ್ಕಾಗಿ ಹೆಚ್ಚಿಗೆ ಯಜ್ಞ ಮಾಡುಸುವವ ನಿಶ್ಚಯವಾಗಿಯೂ ಕತ್ತೆ ಆಗಿ ಹುಟ್ಟುತ್ತಾನೆ  ಆಮಂತ್ರಣ ಇಲ್ಲದೆ ಊಟ ಉಣ್ಣುವವ ಕಾಗೆ ಆಗುತ್ತಾನೆ 

.

ಪಾತ್ರೇ ವಿದ್ಯಾಮದಾತಾ ಚ ಬಲೀವರ್ದೋ ಭವೇದ್ದ್ವಿಜಃ ।

ಗುರುಸೇವಾಮಕರ್ತಾ ಚ ಶಿಷ್ಯಃ ಸ್ಯಾದ್ಗೋಖರ ಪಶುಃ ॥೨೦॥


ಸತ್ಪಾತ್ರಗೆ ವಿದ್ಯೆಯ ಹೇಳಿ ಕೊಡದ ದ್ವಿಜ ಗೂಳಿ (ಎತ್ತು/ಹೋರಿ)ಆಗಿ ಹುಟ್ಟುತ್ತಾನೆ ಗುರುಸೇವೆಯ ಮಾಡದಿದ್ದ  ಶಿಷ್ಯ ಗೋಗಾರ್ದಭ (ಎತ್ತು ಮತ್ತೆ ಕತ್ತೆ) ಪಶು ಆಗುತ್ತಾನೆ 


ಗುರುಂ ಹುಂಕೃತ್ಯ ತುಂಕೃತ್ಯ ವಿಪ್ರಂ ನಿರ್ಜಿತ್ಯ ವಾದತಃ ।

ಅರಣ್ಯೇ ನಿರ್ಜಲೇ ದೇಶೇ ಜಾಯತೇ ಬ್ರಹ್ಮ ರಾಕ್ಷಸಃ ॥೨೧॥


ಗುರುವಿನ ಹೆದರಿಸುವವ, ತಿರಸ್ಕರಿಸುವವ ( ಹುಮ್ಮ್  ಹೂಮ್ಮ್ಮ್ ಎಂದು ದುರುಗುಟ್ಟಿ ಹೆದರುಸುವವ), ವಿಪ್ರನ ವಾದಲ್ಲಿ ಮುಖಭಂಗ ಮಾಡುವವ ನೀರಿಲ್ಲದ್ದ ಅರಣ್ಯಪ್ರದೇಶಲ್ಲಿ ಬ್ರಹ್ಮರಾಕ್ಷಸನಾವುತ್ತನೆ 


ಪ್ರತಿಶ್ರುತಂ ದ್ವಿಜೇ ದಾನಮದತ್ತ್ವಾ ಜಂಬುಕೋ ಭವೇತ್ ।

ಸತಾಮಸತ್ಕಾರಕರಃ ಫೇತ್ಕಾರೋsಗ್ನಿ ಮುಖೋ ಭವೇತ್ ॥೨೨॥


ಪ್ರತಿಜ್ಞೆಮಾಡಿ ದ್ವಿಜನಿಗೆ ದಾನವ ಕೊಡದ್ದೆ ಇದ್ದವನು ನರಿಯಾಗಿ ಹುಟ್ಟುತ್ತಾನೆ , ಸಜ್ಜನರಿಗೆ ಸತ್ಕಾರ ಮಾಡದೆ  ಇದ್ದವನು ಫೇತ್ಕಾರ ಮಾಡುವ ಅಗ್ನಿಮುಖ ಹೇಳವ ದುಷ್ಟ ಶಕ್ತಿ ಆಗುತ್ತಾನೆ (ಅಗ್ನಿಮುಖ ನರಿಯಾಗುತ್ತನೆ ).


ಮಿತ್ರಧ್ರುಗ್ಗಿರಿಗೃಧ್ರಃ ಸ್ಯಾದುಲೂಕಃ ಕ್ರಯವಂಚನಾತ್ ।

ವರ್ಣಾಶ್ರಮಪರೀವಾದಾತ್ಕಪೋತೋ ಜಾಯತೇ ವನೇ ॥೨೩॥


ಮಿತ್ರದ್ರೋಹಿಯಾದವ  ಪರ್ವತದ ಹದ್ದು ಆಗಿ ಹುಟ್ಟುತ್ತಾನೆ  ಕೊಟ್ಟು ತಗೋಳ್ಳೋದರಲ್ಲಿ (ವ್ಯಾಪಾರಲ್ಲಿ) ಮೋಸ ಮಾಡುವವ ಗೂಬೆ ಆಗುತ್ತಾನೆ  ವರ್ಣಾಶ್ರಮವ ನಿಂದುಸುವವ ಕಾಡಿಲ್ಲಿ ಪಾರಿವಾಳವಾಗಿ ಹುಟ್ಟುತ್ತನೆ 

.ಆಶಾಚ್ಛೇದಕರೋ ಯಸ್ತು ಸ್ನೇಹಚ್ಛೇದಕರಸ್ತು ಯಃ ।

ಯೋ ದ್ವೇಷಾತ್ ಸ್ತ್ರೀಪರಿತ್ಯಾಗೀ ಚಕ್ರವಾಕಶ್ಚಿರಂ ಭವೇತ್ ॥೨೪॥

ಆಶಾಭಂಗ ಮಾಡುವವ, ಸ್ನೇಹವ ಒಡವವ, ದ್ವೇಷದ ಸ್ತ್ರೀಯ ಪರಿತ್ಯಜಿಸುವವ  ಬಹುಕಾಲದವರೆಗೆ ಚಕ್ರವಾಕ ಪಕ್ಷಿಯಾಗಿ ಇರುತ್ತನೆ 

ಮಾತಾಪಿತೃಗುರುದ್ವೇಷೀ ಭಗಿನೀಭ್ರಾತೃವೈರಕೃತ್ ।

ಗರ್ಭೇ ಯೋನೌ ವಿನಷ್ಟಃ ಸ್ಯಾದ್ಯಾವದ್ಯೋನಿಸಹಸ್ರಶಃ ॥೨೫॥

ಅಮ್ಮ ಅಪ್ಪ ಗುರುಗಳ ದ್ವೇಷುಸುವವ , ಸೋದರ ಸೋದರಿಯರ ಹತ್ತಿರ ವೈರತ್ವವ ತೋರುಸುವವ  ಸಾವಿರಾರು ಜನ್ಮಗಳ ಹೊಂದಿದರೂ ಗರ್ಭದಲ್ಲೇ ನಷ್ಟಹೊಂದುತ್ತನೆ 

ಶ್ವಶ್ರ್ವೋರ್ಗಾಲಿಪ್ರದಾ ನಾರೀ ನಿತ್ಯಂ ಕಲಹಕಾರಿಣೀ ।

ಸಾ ಜಲೌಕಾ ಚ ಯೂಕಾ ಸ್ಯಾದ್ಭರ್ತಾರಂ ಭರ್ತ್ಸತೇ ಚ ಯಾ ॥೨೬॥

ಅತ್ತೆ ಮಾವನೋರ ನಿಂದುಸುವ, ನಿತ್ಯವೂ ಕಲಹ ಮಾಡುವ ನಾರಿ ಜಿಗಣೆಯಾಗುತ್ತನೆ  ತನ್ನ ಗಂಡನನ್ನೇ ಹೀಯಾಳುಸುವ ಸ್ತ್ರೀ ಹೇನಗುತ್ತಾಳೆ 

ಸ್ವಪತಿಂ ಚ ಪರಿತ್ಯಜ್ಯ ಪರಪುಂಸಾನುವರ್ತಿನೀ ।

ವಲ್ಗುಲೀ ಗೃಹಗೋಧಾ ಸ್ಯಾದ್ದ್ವಿಮುಖೀವಾsಥ ಸರ್ಪಿಣೀ ॥೨೭॥

ತನ್ನ ಪತಿಯ ಬಿಟ್ಟ  ಪರಪುರುಷನ ಅನುಸರಿಸಲು, ಬಾವಲಿ, ಹಲ್ಲಿ ಅಥವಾ ಎರುಡು ಮೋರೆಯ ಹೆಣ್ಣು ಸರ್ಪವಾಗುತ್ತಾರೆ 

ಯಃ ಸ್ವಗೋತೋಪಘಾತೀ ಚ ಸ್ವಗೋತ್ರಸ್ತ್ರೀ ನಿಷೇವಣಾತ್ ।

ತರಕ್ಷುಃ ಶಲ್ಲಕೋ ಭೂತ್ವಾ ಋಕ್ಷಯೋನಿಷು ಜಾಯತೇ ॥೨೮॥


ತನ್ನ ಗೋತ್ರವ ನಾಶಮಾಡುವವ, ಮತ್ತ ತನ್ನ ಗೋತ್ರದ ಸ್ತ್ರೀಯನ್ನೇ ಸೇರುವವನು  ಕಿರುಬನಾಗಿ, ಮುಳ್ಳಂದಿಯಾಗಿ, ಕರಡಿಯಾಗಿ ಹುಟ್ಟುತ್ತನೆ 

ತಾಪಸೀಗಮನಾಕ್ಕಾಮೀ ಭವೇನ್ಮರುಪಿಶಾಚಕಃ ।

ಅಪ್ರಾಪ್ತ ಯೌವನಾಸಂಗಾದ್ಭವೇದಜಗರೋ ವನೇ ॥೨೯॥

ತಾಪಸೀ ಸ್ತ್ರೀಲಿ ಗಮನಮಾಡುವ ಕಾಮೀ ಪುರುಷ ಮರುಭೂಮಿಲಿ ಪಿಶಾಚಿಯಾಗಿ ಇರುತ್ತನೆ ಯೌವ್ವನಪ್ರಾಪ್ತವಾಗದ ಕೂಸಿನ (ಸ್ತ್ರೀಯ) ಸೇರುವವ  ಕಾಡಿಲ್ಲಿ ಹೆಬ್ಬಾವಾಗಿ ಹುಟ್ಟುತ್ತಾನೇ 

ಗುರುದಾರಾಭಿಲಾಷೀ ಚ ಕೃಕಲಾಸೋ ಭವೇನ್ನರಃ ।

ರಾಜ್ಞೀಂ ಗತ್ವಾ ಭವೇದ್ದುಷ್ಟ್ರೋ ಮಿತ್ರಪತ್ನೀಂ ಚ ಗರ್ದಭಃ ॥೩೦॥

ಗುರುಪತ್ನಿಯ ಇಚ್ಚಿಸುವವ ನರ ಓಂತಿಯಾಗಿ . ರಾಜಪತ್ನಿಯ ಸೇರುವವ ಒಂಟೆ ಆಗುತ್ತಾನೆ  ಮಿತ್ರನ ಪತ್ನಿಯ ಸೇರುವವ ಕತ್ತೆ ಆಗುತ್ತಾನೆ 

ಗುದಗೋ ವಿಡ್ವರಾಹಃ ಸ್ಯಾದ್ವೃಷಸ್ಯಾದ್ವೃಷಲೀಪತಿ ।

ಮಹಾಕಾಮೀ ಭವೇದ್ಯಸ್ತು ಸ್ಯಾದಶ್ವಃ ಕಾಮಲಂಪಟಃ ॥೩೧॥

ಗುದಾಗಮನ ಮಾಡುವವ  ಮಲಭೋಗಿ ಹಂದಿ ಹಾಗೂ ಮಲಿನಗಾಮಿ ಎತ್ತು ಆಗುತ್ತಾನೆ  ಮಹಾಕಾಮಿಯಾಗಿದ್ದ ಮನುಷ್ಯ ಕಾಮಲಂಪಟ ಕುದುರೆ ಆಗುತ್ತಾನೆ 

ಮೃತಸ್ಯೇಕಾದಶಾಹಂ ತು ಭುಂಜಾನಃ ಶ್ವಾ ವಿಜಾಯತೇ ।

ಲಭೇದ್ದೇವಲಕೋ ವಿಪ್ರೋಯೋನಿಂ ಕುಕ್ಕುಟಸಂಜ್ಞಕಾಮ್ ॥೩೨॥

ಮರಣಸೂತಕಲ್ಲಿ ಮೃತನ ಹನ್ನೊಂದನೇ ದಿನದ ಆಹಾರವ ತಿನ್ನುವವ  ನಾಯಿಯಾಗುಟ್ಟತ್ತಾನೆ . ದೇವದ್ರವ್ಯವ ಭೋಗಿಸುವ ವಿಪ್ರ ಕೋಳಿ ಜನ್ಮವಾಗಿ ಹುಟ್ಟುತ್ತಾನೆ 

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...