ಗರುಡ ಪುರಾಣ ಅಧ್ಯಾಯ – 8
ಆತುರದಾನನಿರೂಪಣಮ್
ಮರಣಕಾಲದಲ್ಲಿ ಮಾಡಬೇಕಾದ ದಾನಗಳ ನಿರೂಪಣೆ
ಗರುಡ ಉವಾಚ
ಆಮುಷ್ಮಿ ಕೀಂ ಕ್ರಿಯಾಂ ಸರ್ವಾಂ ವದ ಸುಕೃತಿನಾಂ ಮಮ ।
ಕರ್ತವ್ಯಾ ಸಾ ಯಥಾ ಪುತ್ರೈಸ್ತಥಾ ಚ ಕಥಯ ಪ್ರಭೋ ॥೦೧॥
ಗರುಡ ಹೇಳಿದ – ಹೇ ಪ್ರಭೋ!, ಸತ್ಕಾರ್ಯಗಳ ಮಾಡಿದವರ ಪರಲೋಕ ಕ್ರಿಯೆಗಳು ಎಲ್ಲವನ್ನೂ ನನಗೆ ಹೇಳು. ಅವರ ಮಕ್ಕಳಿಂದ ಆ ಕ್ರಿಯೆಗಳನ್ನು ಯಾವರೀತಿಯೆಲ್ಲ ಮಾಡಬೇಕು ಹೇಳುವುದೆಲ್ಲವನ್ನೂ ಯಥಾವತ್ತಾಗಿ ಎನಗೆ ಹೇಳು.
ಶ್ರೀ ಭಗವಾನುವಾಚ
ಸಾಧು ಪೃಷ್ಟಂ ತ್ವಯಾ ತಾರ್ಕ್ಷ್ಯ ಮಾನುಷಾಣಾಂ ಹಿತಾಯ ವೈ ।
ಧಾರ್ಮಿಕಾರ್ಹಂ ಚ ಯತ್ಕೃತ್ಯಂ ತತ್ಸರ್ವಂ ಕಥಯಾಮಿ ತೇ ॥೦೨॥
ಭಗವಂತ ಹೇಳಿದ – ಏ ಗರುಡನೇ!, ಮಾನವರ ಹಿತಕ್ಕಾಗಿ ನಿನ್ನಂದ ಒಳ್ಳೆದನ್ನೇ ಕೇಳಿದ್ದಿಯ ಯಾವ ಕಾರ್ಯಗಳನ್ನು ಧರ್ಮಾತ್ಮನಾದವ ಮಾಡಲು ಯೋಗ್ಯವೋ ಅವುಗಳೆಲ್ಲವನ್ನೂ ನಿನಗೆ ಹೇಳುತ್ತೆನೆ
ಸುಕೃತೀ ವಾರ್ದ್ಧಕೇ ದೃಷ್ಟ್ವಾ ಶರೀರಂ ವ್ಯಾಧಿ ಸಂಯುತಮ್ ।
ಪ್ರತಿಕೂಲನ್ದ್ರಹಾಂಶ್ಚೈವ ಪ್ರಾಣಘೋಷಸ್ಯ ಚಾಶ್ರುತಿಮ್ ॥೦೩॥
ಧರ್ಮಾತ್ಮನು ಮುಪ್ಪಿಲ್ಲಿ ರೋಗಪೀಡಿತವಾದ ತನ್ನ ಶರೀರವ ನೋಡಿ ಗ್ರಹಗಳ ಪ್ರತಿಕೂಲವಾಗಿದರ ಅರಿತು ಪ್ರಾಣವಾಯುವಿನ ನಾದ ಕೇಳಿದೆ
ತದಾ ಸ್ವಮರಣಂ ಜ್ಞಾತ್ವಾ ನಿರ್ಭಯಃ ಸ್ಯಾದತಂದ್ರಿತಃ ।
ಅಜ್ಞಾತಜ್ಞಾತಪಾಪಾನಂ ಪ್ರಾಯಶ್ಚಿತ್ತಂ ಸಮಾಚರೇತ್ ॥೦೪॥
ಆವಾಗ, ತನ್ನ ಮರಣ ಸಮೀಪಿಸಿದ್ದರ ತಿಳಿದು ನಿರ್ಭಯನಾಗಿ, ಆಲಸ್ಯ ರಹಿತನಾಗಿ, ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳ ಪ್ರಾಯಶ್ಚಿತ್ತವ ಮಾಡಿಕೊಳ್ಳಬೇಕು.
ಯದಾ ಸ್ಯಾದಾತುರಃ ಕಾಲಸ್ತದಾ ಸ್ನಾನಂ ಸಮಾರಭೇತ್ ।
ಪೂಜನಂ ಕಾರಯೇದ್ವಿಷ್ಣೋಃ ಶಾಲಗ್ರಾಮಸ್ವರೂಪಿಣಃ ॥೦೫॥
ಏವಾಗ ಅವನ ಅಂತ್ಯಕಾಲ ಸಮೀಪಿಸುತ್ತೋ ಅವಗ ಶಾಲಗ್ರಾಮ ಸ್ವರೂಪನಾದ ವಿಷ್ಣುವ ಪೂಜೆಯ ಮಾಡಿಸಬೇಕು.
ಅರ್ಚಯೇದ್ಗಂಧಪುಷ್ಪೈಶ್ಚ ಕುಂಕುಮೈಸ್ತುಲಸೀದಲೈಃ ।
ಧೂಪೈರ್ದೀಪೈಶ್ಚ ನೈವೇದ್ಯೈರ್ಬಹುಭಿರ್ಮೋದಕಾದಿಭಿಃ ॥೦೬॥
ಗಂಧಪುಷ್ಪಗಳಿಂದ, ಕುಂಕುಮ ತುಳಸೀದಳಗಳಿಂದ, ಧೂಪದೀಪಗಳಿಂದ, ವಿವಿಧ ಮೋದಕಾದಿ ನೈವೇದ್ಯಗಳಿಂದ ಪೂಜಿಸಬೇಕು.
ದತ್ವಾ ಚ ದಕ್ಷಿಣಾಂ ವಿಪ್ರಾನ್ನೈ ವೇದ್ಯಾದೇವ ಭೋಜಯೇತ್ ।
ಅಷ್ಟಾಕ್ಷರಂ ಜಪೇನ್ಮಂತ್ರಂ ದ್ವಾದಶಾಕ್ಷರಮೇವ ಚ ॥೦೭॥
ಬ್ರಾಹ್ಮಣರಿಗೆ ದಕ್ಷಿಣೆಯ ಕೊಟ್ಟು, ನೈವೇದ್ಯದಲ್ಲೇ ಭೋಜನಮಾಡಿಸಿ, ಅಷ್ಟಾಕ್ಷರೀ ಮಂತ್ರ (ಓಂ ನಮೋ ನಾರಾಯಣಾಯ)ವ ಮತ್ತು ದ್ವಾದಶಾಕ್ಷರೀ ಮಂತ್ರ (ಓಂ ನಮೋ ಭಗವತೇ ವಾಸುದೇವಾಯ)ವನ್ನೂ ಜಪಿಸಬೇಕು.
ಸಂಸ್ಮರೇಚ್ಛೃಣುಯಾಚ್ಚೈವ ವಿಷ್ಣೋರ್ನಾಮ ಶಿವಸ್ಯ ಚ ।
ಹರೇರ್ನಾಮ ಹರೇತ್ಪಾಪಂ ನೃಣಾಂ ಶ್ರವಣಗೋಚರಮ್ ॥೦೮॥
ವಿಷ್ಣುವಿನ ಮತ್ತು ಶಿವನ ನಾಮಗಳನ್ನು ಸ್ಮರಿಸಬೇಕು ಮತ್ತು ಕೇಳಬೇಕು ಹರಿಯ ನಾಮವು ಮನುಷ್ಯರ ಕಿವಿಗೆ ಬಿದ್ದರೆ ಸಾಕು ಅವರ ಪಾಪಗಳೆಲ್ಲವೂ ನಾಶವಾಗುತ್ತವೆ
.
ರೋಗಿಣೋಂsತಿಕಮಾಸಾದ್ಯ ಶೋಚನೀಯಂ ನ ಬಾಂಧವೈಃ ।
ಸ್ಮರಣೀಯಂ ಪವಿತ್ರಂ ಮೇ ನಾಮ ಧ್ಯೇಯಂ ಮುಹುರ್ಮುಹುಃ ॥೦೯॥
ರೋಗಿಯ ಹತ್ತಿರ ಬಂದು ಅವನ ಬಂಧುಗಳು ದುಃಖಿಸಲಾಗಿ . ಎನ್ನ ಪವಿತ್ರವಾದ ನಾಮವ ಮತ್ತೆ ಮತ್ತೆ ಸ್ಮರಿಸಬೇಕು
ಮತ್ಸ್ಯಃ ಕೂರ್ಮೋ ವರಾಹಶ್ಚ ನರಸಿಂಹಶ್ಚ ವಾಮನಃ ।
ರಾಮೋ ರಾಮಶ್ಚ ಕೃಷ್ಣಶ್ಚ ಬುದ್ಧಃ ಕಲ್ಕೀ ತಥೈವ ಚ ॥೧೦॥
ಮರ್ತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಹಾಗೂ ಕಲ್ಕಿ
ಏತಾನಿ ದಶ ನಾಮಾನಿ ಸ್ಮರ್ತವ್ಯಾನಿ ಸದಾ ಬುಧೈಃ ।
ಸಮೀಪೇ ರೋಗಿಣೋ ಬ್ರೂಯುರ್ಬಾಂಧವಾಸ್ತೇ ಪ್ರಕೀರ್ತಿತಾಃ ॥೧೧॥
ಈ ಹತ್ತು ನಾಮಗಳ ಬುದ್ಧಿವಂತರು ಯಾವತ್ತೂ ಸ್ಮರಿಸುತ್ತಿರಬೇಕು. ರೋಗಿಯ ಸಮೀಪಲ್ಲಿ ಈ ನಾಮಗಳನ್ನು ಹೇಳುವ ಬಾಂಧವರು ಎಂದು ಹೇಳಲ್ಪಡುತ್ತಿರಬೇಕು
ಕೃಷ್ಣೇತಿ ಮಂಗಲಂ ನಾಮ ಯಸ್ಯ ವಾಚಿ ಪ್ರವರ್ತತೇ ।
ತಸ್ಯ ಭಸ್ಮೀಭವಂತ್ಯಾಶು ಮಹಾಪಾತಕಕೋಟಯಃ ॥೧೨॥
ಕೃಷ್ಣ ಹೇಳುವ ಮಂಗಳ ನಾಮವು ಯಾರ ಬಾಯಿಂದ ಹೊರಡುತ್ತೋ ಅವನ ಕೋಟಿ ಮಹಾ ಪಾತಕಗಳು ಸುಟ್ಟು ಭಸ್ಮವಾಗುವವು
ಮ್ರಿಯಮಾಣೋ ಹರೇರ್ನಾಮ ಗೃಣನ್ಪುತ್ರೋಪಚಾರಿತಮ್ ।
ಅಜಾಮಿಲೋsಪ್ಯಗಾದ್ಧಾಮ ಕಿಂ ಪುನಃ ಶ್ರದ್ಧಯಾ ಗೃಣನ್ ॥೧೩॥
ಸಾಯುತಲಿದ್ದ ಅಜಾಮಿಳ ತನ್ನ ಮಗನ ಹೆಸರಾದ ಹರಿಯ ನಾಮವ ಉಚ್ಛರಿಸಿ ಸ್ವರ್ಗವ ಸೇರಿದ. ಮತ್ತೆ ಶ್ರದ್ಧೆಯಿಂದ ಉಚ್ಛರಿಸಿರೆ ಅದರ ಫಲ (ಶಕ್ತಿ) ಎಷ್ಟ!
ಹರಿರ್ಹರತಿ ಪಾಪಾನಿ ದುಷ್ಟಚಿತ್ತೈರಪಿಸ್ಮೃತಃ ।
ಅನಿಚ್ಛಯಾಪಿ ಸಂಸ್ಪೃಷ್ಟೋ ದಹತ್ಯೇವ ಹಿ ಪಾವಕಃ ॥೧೪॥
ದುಷ್ಟಚಿತ್ತನೂ ಹರಿನಾಮವ ಸ್ಮರಿಸಿರೆ ಹರಿ ಅವನ ಪಾಪಗಳೆಲ್ಲವ ನಾಶ ಮಾಡುತ್ತದೆ . ಅಗ್ನಿಯ ಇಚ್ಛೆಯಿಲ್ಲದ್ದೆ ಮುಟ್ಟಿದರೂ ಅದು ಸುಟ್ಟೇ ಸುಡುತ್ತದೆ
.
ಹರೇರ್ನಾಮಶ್ಚ ಯಾ ಶಕ್ತಿಃ ಪಾಪನಿರ್ಹರಣೇ ದ್ವಿಜ ।
ತಾವತ್ಕರ್ಮ ಸಮರ್ಥೋ ನ ಪಾತಕಂ ಪಾತಕೀ ಜನಃ ॥೧೫॥
ಎಲೈ ಗರುಡನೇ!, ಹರಿಯ ನಾಮದಲ್ಲಿ ಪಾಪಗಳ ನಾಶಮಾಡುವ ಶಕ್ತಿ ಎಷ್ಟು ಇದ್ದೋ ಅಷ್ಟು ಪಾಪಗಳ ಮಾಡಲು ಪಾಪಿಗಳು ಅಸಮರ್ಥರಾಗಿದ್ದವು.
ಕಿಂಕರೇಭ್ಯೋ ಯಮಃ ಪ್ರಾಹಾನಯಧ್ವಂ ನಾಸ್ತಿ ಕಂ ಜನಮ್ ।
ನೈವಾನಯತ ಭೋ ದೂತಾಃ ಹರಿನಾಮಸ್ಮರಂ ನರಮ್ ॥೧೬॥
ಯಮಧರ್ಮರಾಜ ತನ್ನ ದೂತರಿಗೆ ಹೇಳಿದ್ದ – “ಎಲೈ ದೂತರೇ, ನಾಸ್ತಿಕ ಜನರ ಇಲ್ಲಿಗೆ ಕರದುಕ್ಕೊಂಡು ಬನ್ನಿ ಮತ್ತೆ ಹರಿನಾಮಸ್ಮರಣೆ ಮಾಡದ ಜನರ ಇಲ್ಲಿಗೆ ಕರೆದುಕೋಂಡು ಬನ್ನಿ .
ಅಚ್ಯುತಂ ಕೇಶವಂ ರಾಮನಾರಾಯಣಂ ಕೃಷ್ಣದಾಮೋದರಂ ವಾಸುದೇವಂ ಹರಿಮ್ ।
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕೀನಾಯಕಂ ರಾಮಚಂದ್ರಂ ಭಜೇ ॥೧೭॥
ಅಚ್ಯುತ, ಕೇಶವ, ರಾಮ, ನಾರಾಯಣ, ಕೃಷ್ಣ, ದಾಮೋದರ, ವಾಸುದೇವ, ಹರಿ, ಶ್ರೀಧರ, ಮಾಧವ, ಗೋಪಿಕಾವಲ್ಲಭ, ಜಾನಕೀನಾಯಕ, ಶ್ರೀರಾಮಚಂದ್ರ ಹೀಂಗೆ ಭಜಿಸಬೇಕು
ಕಮಲನಯನ ವಾಸುದೇವ ವಿಷ್ಣೋ ಧರಣೀಧರಾಚ್ಯುತ ಶಂಖಚಕ್ರಪಾಣೇ ।
ಭವ ಶರಣಮಿತೀರಯಂತಿ ಯೇ ವೈ ತ್ಯಜ ಭಟ ದೂರತರೇಣ ತಾನಪಾಪಾನ್ ॥೧೮॥
ಎಲೈ ಭಟರೇ, ಯಾವ ಮನುಷ್ಯರು “ಹೇ ಕಮಲನಯನ, ಹೇ ವಾಸುದೇವ, ಹೇ ವಿಷ್ಣೋ, ಹೇ ಧರಣೀಧರ, ಹೇ ಅಚ್ಯುತ, ಹೇ ಶಂಖಚಕ್ರಧಾರಿ, ಈ ಸಂಸಾರಲ್ಲಿ ಎನ್ನ ರಕ್ಷಕನೇ ಎಂದು ಸ್ತುತಿಸಿಗೊಂಡು ಇರುತ್ತರೋ ಅಂತಹ ಪಾಪಹೀನರ ದೂರದಲೇ ಬಿಟ್ಟ ಬಿಡಿ
ತಾನಾನಯಧ್ವಮಸತೋ ವಿಮುಖಾನ್ಮುಕುಂದಪಾದಾರವಿಂದ ಮಕರಂದರಸಾದಜಸ್ರಮ್ ।
ನಿಷ್ಕಿಂಚನೈಃ ಪರಮಹಂಸಕುಲೈ ರಸಜ್ಞೈರ್ಜುಷ್ಟಾದ್ಗೃಹೇ ನಿರಯವರ್ತ್ಮನಿ ಬದ್ಧತೃಷ್ಣಾನ್ ॥೧೯॥
ಪಾಪಕರ್ಮಗಳಿಂದ ವಿಮುಖರಾಗಿ ಸರ್ವವನ್ನೂ ಪರಿತ್ಯಜಿಸಿ, ಬ್ರಹ್ಮರಸಾನುಭವಿಗಳಾದ ಪರಮಹಂಸರ ಕುಲದವರಿಂದ ಸೇವಿಸಲ್ಪಟ್ಟ ಮುಕುಂದನ ಪಾದಾರವಿಂದಗಳ ಮಕರಂದದ ಆಸ್ವಾದನೆಂದ ವಿಮುಖರಾಗಿ ಮತ್ತೆ ನರಕದ ದಾರಿಯಾದ ಸಂಸಾರದ ತೃಷ್ಣೆಯಿಂದ ಬಂಧಿತರಾದ ಆ ಪಾಪಿಗಳ ಕರಕ್ಕೊಂಡು ಬನ್ನಿ.
ಜಿಹ್ವಾ ನ ವಕ್ತಿ ಭಗವದ್ಗುಣನಾಮಧೇಯಂ ಚೇತಶ್ಚನ ಸ್ಮರತಿ ತಚ್ಚರಣಾರವಿಂದಮ್ ।
ಕೃಷ್ಣಾಯ ನೋ ನಮತಿ ಯಚ್ಚಿರ ಏಕದಾಪಿ ತಾನನಯಧ್ವಮಸತೋsಕೃತವಿಷ್ಣುಕೃತ್ಯಾನ್ ॥೨೦॥
ಯಾರ ನಾಲಗೆ ಭಗವಂತನ ಗುಣಗಳನ್ನೂ ನಾಮಗಳನ್ನೂ ಹೇಳುತ್ತಿಲ್ಲವೆಯೋ, ಯಾರ ಮನಸ್ಸು ಆ ಭಗವಂತನ ಚರಣಾರವಿಂದಗಳ ಸ್ಮರಿಸುತ್ತಿಲ್ಲವೊ , ಯಾರ ಶಿರವು ಒಂದು ಸರ್ತಿಯೂ ತಲೆಬಾಗಿ ಕೃಷ್ಣನ ನಮಸ್ಕರಿಸುತ್ತಿಲ್ಲವೊ , ಯಾರು ಈ ವಿಷ್ಣುವಿನ (ಪೂಜಾದಿ) ಕಾರ್ಯಗಳ ಮಾಡುತ್ತಿಲ್ಲವೊ ಅಂತಹ ಪಾಪಿಗಳ ಕರಕ್ಕೊಂಡು ಬನ್ನಿ”.
ತಸ್ಮಾತ್ಸಂಕೀರ್ತನಂ ವಿಷ್ಣೋರ್ಜಗನ್ಮಂಗಲಮಂಹಸಾಮ್ ।
ಮಹತಾಮಪಿ ಪಕ್ಷೀಂದ್ರ ವಿದ್ಧೈಕಾಂತಿಕನಿಷ್ಕೃತಿಮ್ ॥೨೧॥
ಎಲೈ ಪಕ್ಷೀಂದ್ರನೇ!, ಹಾಗಾಗಿ ಭಗವಾನ್ ವಿಷ್ಣುವಿನ ನಾಮ ಸಂಕೀರ್ತನೆ ಜಗತ್ತಿಲ್ಲಿ ಮಂಗಳಕರವಾದ್ದು ಹಾಗೂ ಅತಿ ದೊಡ್ಡ ಪಾಪಕ್ಕೂ ಏಕಮಾತ್ರ ಪ್ರಾಯಶ್ಚಿತ್ತರೂಪವಾದ್ದು.
ಪ್ರಾಯಶ್ಚಿತ್ತಾನಿ ಚೀರ್ಣಾನಿ ನಾರಾಯಣಪರಾಙ್ಮುಖಮ್ ।
ನ ನಿಷ್ಪುನಂತಿ ದುರ್ಬುದ್ಧಿಂ ಸುರಾಕುಂಭಮಿವಾಪಗಾಃ ॥೨೨॥
ಹೆಂಡದ ಗಡಿಗೆ ಹೇಗೆ ನದಿಯುನ್ನು ಪ್ರವಿತ್ರಗೊಳಿಸದೋ, ಹಾಗೇ, ಪಾಪಗಳು ಮಾಡಲ್ಪಟ್ಟ ಪ್ರಾಯಶ್ಚಿತ್ತಗಳೂ ನಾರಾಯಣನಿಂದ ವಿಮುಖನಾದ ದುಷ್ಟಬುದ್ಧಿಯ ಮನುಷ್ಯನ ಪವಿತ್ರತೆಯನ್ನು ಮಾಡಲಾರ
ಕೃಷ್ಣನಾಮ್ನಾ ನ ನರಕಂ ಪಶ್ಯಂತಿ ಗತಕಿಲ್ಬಿಷಾಃ ।
ಯಮಂ ಚ ತದ್ಭಟಾಶ್ಚೈವ ಸ್ವಪ್ನೇsಪಿ ನ ಕದಾಚನ ॥೨೩॥
ಕೃಷ್ಣನ ನಾಮಸ್ಮರಣೆಯಿಂದ ಪಾಪಗಳು ಕಳದು ಹೋಗಿ . ಮತ್ತೆ ಅಂತವು ನರಕವನ್ನ ಆಗಲೀ, ಯಮನನ್ನ ಆಗಲೀ ಅಥವ ಅವನ ಭಟರನ್ನಾಗಲೀ ಏವತ್ತೂ ಸ್ವಪ್ನಲ್ಲಿಯೂ ಕೂಡ ನೋಡುದಿಲ್ಲ
ಮಾಂಸಾಸ್ಥಿ ರಕ್ತವತ್ಕಾಯೇ ವೈತರಣ್ಯಾಂ ಪತೇನ್ನ ಸಃ ।
ಯೋಂsತೇ ದದ್ಯಾದ್ದ್ವಿಜೇಭ್ಯಶ್ಚ ನಂದನಂದನ ಗಾಮಿತಿ ॥೨೪॥
ಯಾರು ಅಂತ್ಯಕಾಲದಲ್ಲಿ ಗೋವಿನ ನಂದನಂದನಗೆ ಎಂದು ದ್ವಿಜನಿಗೆ ದಾನ ಮಾಡುತ್ತರೋ ಅವು ಮಾಂಸ, ಮೂಳೆ, ರಕ್ತಗಳಿಂದ ಉಂಟಾದ ದೇಹವೆಂಬ ವೈತರಿಣಿಲಿ ಬೀಳುವುದಿಲ್ಲ
ಅತಃ ಸ್ಮರೇನ್ಮಹಾವಿಷ್ಣೋರ್ನಾಮ ಪಾಪೌಘನಾಶನಮ್ ।
ಗೀತಾ ಸಹಸ್ರನಾಮಾನಿ ಪಠೇದ್ವಾ ಶ್ರುಣುಯಾದಪಿ ॥೨೫॥
ಹಾಗಾಗಿ, ಪಾಪಗಳ ಸಮೂಹವನ್ನೇ ನಾಶಮಾಡುವಂತಹ ಮಹಾವಿಷ್ಣುವಿನ ನಾಮಗಳನ್ನು ಸ್ಮರಿಸಬೇಕು ಗೀತೆ ಮತ್ತೆ ಸಹಸ್ರನಾಮಗಳ ಪಠಿಸಬೇಕು ಅಥವಾ ಕೇಳಬೇಕು

No comments:
Post a Comment