ಗ ಪು - 4 – ಭಾಗ 2
ನಾಸ್ತಿಕಾ ಭಿನ್ನಮರ್ಯಾದಾಃ ಕದರ್ಯಾ ವಿಷಯಾತ್ಮಕಾಃ ।
ದಾಂಭಿಕಾಶ್ಚ ಕೃತಾಘ್ನಾಶ್ಚ ತೇ ವೈ ನರಕಗಾಮಿನಃ ॥೩೨॥
ನಾಸ್ತಿಕರು, ಮರ್ಯಾದಿಯ ನಿಯಮವ ಮುರಿದವರು ಜಿಪುಣರು, ಇಂದ್ರಿಯ ಭೋಗ ವಿಷಯಲ್ಲಿ ನಿರತರಾದೋರು, ಗರ್ವಿಷ್ಠರು, ಕೃತಘ್ನರು ಇವೆಲ್ಲೋರು ನಿಶ್ಚಯವಾಗಿ ನರಕಕ್ಕೆ ಹೋಗುವರು
ಕೂಪಾನಾಂ ಚ ತಡಾಗಾನಾಂ ವಾಪೀನಾಂ ದೇವಸದ್ಮನಾಮ್ ।
ಪ್ರಜಾಗೃಹಾಣಾಂ ಭೇತ್ತಾರಸ್ತೇ ವೈ ನರಕಗಾಮಿನಃ ॥೩೩॥
ಬಾವಿ, ಕೆರೆ, ಕೊಳ, ದೇವಾಲಯ ಮತ್ತೆ ಪ್ರಜೆಗಳ ಮನೆಗಳ ನಾಶಮಾಡುವವು ನಿಶ್ಚಯವಾಗಿ ನರಕೆ ಹೋಗುವರು
ವಿಸೃಜ್ಯಾಶ್ನಂತಿ ಯೇ ದಾರಾಂವಿಶೂನ್ಛೃತ್ಯಾಂಸ್ತಥಾ ಗುರೂನ್ ।
ಉತ್ಸೃಜ್ಯ ಪಿತೃದೇವೇಜ್ಯಾಂ ತೇ ವೈ ನರಕಗಾಮಿನಃ ॥೩೪॥
ಹೆಂಡತಿ ಮಕ್ಕಳ, ಸೇವಕರ ಮತ್ತೆ ಗುರುಗಳ ಬಿಟ್ಟ ಪಿತೃಯಜ್ಞ ದೇವಯಜ್ಞ ಮಾಡದ್ದೆ ಊಟ ಮಾಡುವವರು ನಿಶ್ಚಯವಾಗಿ ನರಕಕ್ಕೆ ಹೋಗುವವು
ಶಂಕುಭಿಃ ಸೇತುಭಿಃ ಕಾಷ್ಠೈಃ ಪಾಷಾಣೈಃ ಕಂಟಕೈಸ್ತಥಾ ।
ಯೇ ಮಾರ್ಗಮುಪರುಂಧಂತಿ ತೇ ವೈ ನರಕಗಾಮಿನಃ ॥೩೫॥
ಸೂಜಿ (ಆಣಿ), ಮಣ್ಣಿನ ಗುಡ್ಡೆ, ಮರಡತುಂಡು ಕಲ್ಲುಗಳಿಂದ ಅಥವಾ ಮುಳ್ಳುಗಳಿಂದ ಮಾರ್ಗ ತಡೆಯುಂಟು ಮಾಡುವವರು ನಿಶ್ಚಯವಾಗಿ ನರಕಕ್ಕೆ ಹೋಗುವರು
ಶಿವಂ ಶಿವಾಂ ಹರಿಂ ಸೂರ್ಯಂ ಗಣೇಶಂ ಸದ್ಗುರುಂ ಬುಧಮ್ ।
ನ ಪೂಜಯಂತಿ ಯೇ ಮಂದಾಸ್ತೇ ವೈ ನರಕಗಾಮಿನಃ ॥೩೬॥
ಶಿವ, ಪಾರ್ವತಿ, ವಿಷ್ಣು, ಸೂರ್ಯ, ಗಣೇಶ, ಸದ್ಗುರು ಮತ್ತೆ ಪಂಡಿತರ ಪೂಜೆಯ ಮಾಡದ್ದೇ ಇರುವ ಮಂದಬುದ್ಧಿಯ ಜನಗಳು ನಿಶ್ಚಯವಾಗಿ ನರಕಕ್ಕೆ ಹೋಗುವವು
ಆರೋಪ್ಯ ದಾಸೀಂ ಶಯನೇ ವಿಪ್ರೋ ಗಚ್ಛೇದಧೋಗತಿಮ್ ।
ಪ್ರಜಾಮುತ್ಪಾದ್ಯ ಶೂದ್ರಾಯಾಂ ಬ್ರಾಹ್ಮಣ್ಯಾದೇವ ಹೀಯತೇ ॥೩೭॥
ದಾಸಿಯನ್ನು ಹಾಸಿಗೆಗೆ ಕರೆದ ಬ್ರಾಹ್ಮಣ ಅಧೋಗತಿಯ ಹೊಂದುತ್ತನೆ °. ಶೂದ್ರಸ್ತ್ರೀಲಿ ಸಂತಾನ ಉತ್ಪನ್ನ ಮಾಡುವ ಬ್ರಾಹ್ಮಣ° ಬ್ರಾಹ್ಮಣ ತತ್ವದಿಂದಲೇ ಚ್ಯುತನಾಗುತ್ತಾನೆ
ನ ನಮಸ್ಕಾರಯೋಗ್ಯೋ ಹಿ ಸ ಕದಾಪಿ ದ್ವಿಜೋsಧಮಃ ।
ತಂ ಪೂಜಯಂತಿ ಯೇ ಮೂಢಾಸ್ತೇ ವೈ ನರಕಗಾಮಿನಃ ॥೩೮॥
ಆ ಅಧಮ ಬ್ರಾಹ್ಮಣ ಎಂದಿಂಗೂ ನಮಸ್ಕಾರಕ್ಕೆ ಯೋಗ್ಯನಾಗು ವುದಿಲ್ಲ ಯಾವ ಮೂರ್ಖ ಇಂಥ ಬ್ರಾಹ್ಮಣನ ಪೂಜೆ ಮಾಡುತ್ತನೋ ಅವನು ಕೂಡ ನರಕಕ್ಕೆ ಹೋಗುತ್ತಾನೆ
ಬ್ರಾಹ್ಮಣಾನಾಂ ಚ ಕಲಹಂ ಗೋಯುದ್ಧಂ ಕಲಹಪ್ರಿಯಾಃ ।
ನ ವರ್ಜಂತ್ಯನುಮೋದಂತೇ ತೇ ವೈ ನರಕಗಾಮಿನಃ ॥೩೯॥
ಕಲಹಪ್ರಿಯರು, ಬ್ರಾಹ್ಮಣ ಕಲಹವ, ಗೋಕಲಹವ ನಿವಾರುಸದ್ದೆ ಅದಕ್ಕೆ ಪ್ರೋತ್ಸಾಹ ಕೊಡುವವು ನಿಶ್ಚಯವಾಗಿ ನರಕಕ್ಕೆ ಹೋಗುವರು
ಅನನ್ಯಶರಣಸ್ತ್ರೀಣಾಮೃತುಕಾಲವ್ಯತಿಕ್ರಮಮ್ ।
ಯೇ ಪ್ರಕುರ್ವಂತಿ ವಿದ್ವೇಷಾತ್ತೇ ವೈ ನರಕಗಾಮಿನಃ ॥೪೦॥
ಕೇವಲ ಗoಡನತ್ರೇ ಶರಣಳಾದ ಸ್ತ್ರೀಯ ಋತುಕಾಲವ ದ್ವೇಷಭಾವನೆಯಿಂದ ವ್ಯರ್ಥಗೊಳುಸುವ ನಿಶ್ಚಯವಾಗಿ ನರಕಕ್ಕೆ ಹೋಗುತ್ತಾರೆ
ಯೇsಪಿ ಗಚ್ಛಂತಿ ರಾಗಾಂಧಾ ನರಾ ನಾರೀಂ ರಜಸ್ವಲಾಮ್ ।
ಪರ್ವಸ್ವಪ್ಸು ದಿವಾ ಶ್ರಾದ್ಧೇ ತೇ ವೈ ನರಕಗಾಮಿನಃ ॥೪೧॥
ಯಾವ ಯುವಕರು ಕಾಮಾಂಧರಾಗಿ ಸ್ತ್ರೀಯರೊಟ್ಟಿಗೆ ರಜಸ್ವಲೆಯಾಗಿದ್ದಗ. ಪರ್ವದಿನಗಳಲ್ಲಿ, ನೀರಿಲ್ಲಿ, ಹಗಲಿಲ್ಲಿ, ಶ್ರಾದ್ಧದ ದಿನಗಳಲ್ಲಿ ಸೇರುತ್ತವೋ ಅವು ನರಕಗಾಮಿಗಳು ಆಗುತ್ತಾರೆ
ಯೇ ಶಾರೀರಂ ಮಲಂ ವಹ್ನೌ ಪ್ರಕ್ಷಿಪಂತಿ ಜಲೇsಪಿ ಚ ।
ಆರಾಮೇ ಪಥಿ ಗೋಷ್ಠೇ ವಾ ತೇ ವೈ ನರಕಗಾಮಿನಃ ॥೪೨॥
ಯಾರು ಶರೀರದ ಮಲವ ಅಗ್ನಿಲಿ, ಕುಡಿವ ನೀರಿನಲ್ಲಿ, ಉದ್ಯಾನವನದಲ್ಲಿ, ಮಾರ್ಗದಲ್ಲಿ, ದನದ ಕೊಟ್ಟಗೆಲಿ ಹಾಕುತ್ತರೋ ಅವರು ನಿಶ್ಚಯವಾಗಿ ನರಕಕ್ಕೆ ಹೋಗುವರು
ಶಸ್ತ್ರಾಣಾಂ ಯೇ ಚ ಕರ್ತಾರಃ ಶರಾಣಾಂ ಧನುಷಾಂ ತಥಾ ।
ವಿಕ್ರೇತಾರಶ್ಚ ಯೇ ತೇಷಾಂ ತೇ ವೈ ನರಕಗಾಮಿನಃ ॥೪೩॥
ಶಸ್ತ್ರಗಳನ್ನು , ಕತ್ತಿ, ಬಿಲ್ಲು, ಬಾಣಗಳನ್ನು ಯಾರು ತಯಾರುಸುತ್ತರೋ , ಯಾರು ಮಾರುತ್ತರೋ ಅವರು ನಿಶ್ಚಯವಾಗಿ ನರಕಕ್ಕೆ ಹೋಗುವವರು
.ಚರ್ಮವಿಕ್ರಯಿಣೋ ವೈಶ್ಯಾಃ ಕೇಶವಿಕ್ರೇಯಕಾಃ ಸ್ತ್ರಿಯಃ ।
ವಿಷವಿಕ್ರಯಿಣಃ ಸರ್ವೇ ತೇ ವೈ ನರಕಗಾಮಿನಃ ॥೪೪॥
ಚರ್ಮವ ಮಾರುವ ವೈಶ್ಯರು (ವ್ಯಭಿಚಾರ ದಂಧೆ ಮಾಡುವವು), ಕೂದಲು ಮಾರುವ ಸ್ತ್ರೀಯರು (ವ್ಯಭಿಚಾರಿಣಿಗೊ), ವಿಷವ ಮಾರುವವರು ಅವೆಲ್ಲೋರು ನಿಶ್ಚಯವಾಗಿ ನರಕಕ್ಕೆ ಹೋಗುವರು
ಅನಾಥಂ ನಾನುಕಂಪಂತಿ ಯೇ ಸತಾಂ ದ್ವೇಷಕಾರಕಾಃ ।
ವಿನಾಪರಾಧಂ ದಂಡಂತಿ ತೇ ವೈ ನರಕಗಾಮಿನಃ ॥೪೫॥
ಯಾರು ಅನಾಥರಲ್ಲಿ ದಯೆ ತೋರುವುದಿಲ್ಲವೋ, ಸಜ್ಜನರ ದ್ವೇಷಿಸುತ್ತರೋ ಅಪರಾದ್ಹ ಇಲ್ಲದಿರುವವರನ್ನು ದಂಡಿ ಸುತ್ತರೋ ಅವೆಲ್ಲೋರು ನಿಶ್ಚಯವಾಗಿ ನರಕಕ್ಕೆ ಹೋಗುತ್ತಾರೆ
ಆಶಯಂ ಸಮನುಪ್ರಾಪ್ತಾನ್ಬ್ರಾಹ್ಮಣಾನರ್ಥಿನೋ ಗೃಹೇ ।
ನ ಭೋಜಯಂತಿ ಪಾಕೇsಪಿ ತೇ ವೈ ನರಕಗಾಮಿನಃ ॥೪೬॥
ಆಶಾಯುಕ್ತರಾಗಿ ಮನಗೆ ಬಂದ ಯಾಚಕ ಬ್ರಾಹ್ಮಣರಿಗೆ ಅಡಿಗೆ ತಯಾರಾಗಿದ್ದರೂ ಊಟ ಹಾಕದ್ದಿದ್ದರೆ ನಿಶ್ಚಯವಾಗಿ ನರಕಕ್ಕೆ ಹೋಗುವರು
ಸರ್ವಭೂತೇಷ್ವವಿಶ್ವಸ್ತಾಸ್ತಥಾ ತೇಷು ವಿನಿರ್ದಯಾಃ ।
ಸರ್ವಭೂತೇಷು ಜಿಹ್ಮಾ ಯೇ ತೇ ವೈ ನರಕಗಾಮಿನಃ ॥೪೭॥
ಎಲ್ಲ ಜೀವಗಳಲ್ಲಿಯೂ ವಿಶ್ವಾಸರಹಿತರಾಗಿರೋರು, ಅವರಲ್ಲಿ ನಿರ್ದಯರಾಗಿರೋರು ಮತ್ತೆ ಎಲ್ಲ ಜೀವಿಗಳ ಹತ್ತಿರ ಕುಟಿಲತೆಯಿಂದ ವರ್ತುಸುವವು ನಿಶ್ಚಯವಾಗಿ ನರಕಕ್ಕೆ ಹೋಗುವರು
.ನಿಯಮಾನ್ಸಮುಪಾದಾಯ ಯೇ ಪಶ್ಚಾದಜಿತೇಂದ್ರಿಯಾಃ ।
ವಿಗ್ಲಾಪಯಂತಿ ತಾನ್ಭೂಯಸ್ತೇ ವೈ ನರಕಗಾಮಿನಃ ॥೪೮॥
ಯಾರು ವ್ರತನಿಯಮಾದಿಗಳ ಸಂಕಲ್ಪಮಾಡಿ ಮತ್ತೆ ಇಂದ್ರಿಯಗಳನ್ನೂ ಗೆಲ್ಲದೆ ವೃತಗಳನ್ನು ಬಿಡುತ್ತರೋ ಅವರು ನಿಶ್ಚಯವಾಗಿ ನರಕಕ್ಕೆ ಹೋಗುವರು
.ಅಧ್ಯಾತ್ಮ ವಿದ್ಯಾದಾತಾರಂ ನೈವ ಮನ್ಯಂತಿ ಯೇ ಗುರುಮ್ ।
ತಥಾ ಪುರಾಣವಕ್ತಾರಂ ತೇ ವೈ ನರಕಗಾಮಿನಃ ॥೪೯॥
ಯಾರು ಅಧ್ಯಾತ್ಮವಿದ್ಯೆಯ ಹೇಳಿಕೊಡುವವರೋ ಪುರಾಣವ ಹೇಳುವವರನ್ನು ಗುರು ಎಂದು ಒಪ್ಪುವುದಿಲ್ಲವೋ ಅವರು ನಿಶ್ಚಯವಾಗಿ ನರಕಕ್ಕೆ ಹೋಗುವರು
ಮಿತ್ರದ್ರೋಹಕರಾ ಯೇ ಚ ಪ್ರೀತಿಚ್ಛೇದಕರಾಶ್ಚ ಯೇ ।
ಆಶಾಚ್ಛೇದಕರಾ ಯೇ ಚ ತೇ ವೈ ನರಕಗಾಮಿನಃ ॥೫೦॥
ಯಾರು ಮಿತ್ರದ್ರೋಹ ಮಾಡುತ್ತರೋ , ಯಾರು ಪ್ರೀತಿಗೆ ಮಾಡುತ್ತಾರೋ ಹಾಕುತ್ತವೋ ಮತ್ತೆ ಯಾರು ಆಶಾಭಂಗ ಮಾಡುತ್ತರೋ ಅವರು ನಿಶ್ಚಯವಾಗಿ ನರಕಕ್ಕೆ ಹೋಗುತ್ತಾರೆ
ವಿವಾಹಂ ದೇವಯಾತ್ರಾಂ ಚ ತೀರ್ಥಸಾರ್ಥಾನ್ವಿಲುಂಪತಿ ।
ಸ ವಸೇನ್ನರಕೇ ಘೋರೇ ತಸ್ಮಾನಾವರ್ತನಂ ಪುನಃ ॥೫೧॥
ವಿವಾಹ, ದೇವರ ಮೆರವಣಿಗೆ ಮತ್ತೆ ತೀರ್ಥಯಾತ್ರಿಕರ ಗುಂಪಿಗೆ ಅಡ್ಡಿಮಾಡುತ್ತಾರೋ ಅವರು ಘೋರ ನರಕವಾಸಿಗಳಾಗಿ ಅಲ್ಲ ಮತ್ತೆ ಮತ್ತೆ ಸುತ್ತಡುತ್ತಾರೆ
ಅಗ್ನಿಂ ದದ್ಯಾನ್ಮ ಹಾಪಾಪೀ ಗೃಹೇ ಗ್ರಾಮೇ ತಥಾ ವನೇ ।
ಸ ನೀತೋ ಯಮದೂತೈಶ್ಚ ವಹ್ನಿಕುಂಡೇಷು ಪಚ್ಯತೇ ॥೫೨॥
ಮನಗೆ, ಗ್ರಾಮಕ್ಕೆ, ಅಥವಾ ಉದ್ಯಾನವನಕ್ಕೆ ಕಿಚ್ಚು ಹಾಕಿದ ಮಹಾಪಾಪಿಯ ತಂದು ಯಮದೂತರು ಅಗ್ನಿಕುಂಡಲ್ಲಿ ಬೇಯಿಸುತ್ತಾರೆ
ಅಗ್ನಿನಾ ದಗ್ಧಗಾತ್ರೋsಸೌ ಯದಾ ಛಾಯಾಂ ಪ್ರಯಾಚತೇ ।
ನೀಯತೇ ಚ ತದಾ ದೂತೈರಸಿಪತ್ರವನಾಂತರೇ ॥೫೩॥
ಶರೀರ ಅಗ್ನಿಲಿ ಬೆಂದಗ ಅವ ನೆರಳ ಯಾಚಿಸುತ್ತ. ಅಗ ಅವನ ಯಮದೂತರು ಅಸಿಪತ್ರವನಕ್ಕೆ (ಕತ್ತಿಯಷ್ಟು ಹರಿತ ವಾ ಗಿರುವ ಎಲೆಗಳಿಪ್ರುವ ವೃಕ್ಷಗಳ ವನ) ಕರಕ್ಕೊಂಡು ಹೋಗುವರು
ಖಡ್ಗತೀಕ್ಷ್ಣೈಶ್ಚ ತತ್ಪತ್ರೈರ್ಗಾತ್ರಚ್ಛೇದೋ ಯದಾ ಭವೇತ್ ।
ತದೋಚುಃ ಶೀತಲಚ್ಛಾಯೇ ಸುಖನಿದ್ರಾಂ ಕುರುಷ್ವ ಭೋಃ ॥೫೪॥
ಖಡ್ಗದಷ್ಟು ತೀಕ್ಷ್ಣವಾದ ಆ ಎಲೆಗಳಿಂದ ಶರೀರ ಛಿದ್ರವಾದಗ ಅವು (ಯಮದೂತರು) ಹೇಳುವರು – “ಎಲೈ ಪಾಪಿಯೇ ಶೀತಲವಾದ ನೆರಳಿಲ್ಲಿ ಸುಖನಿದ್ರೆಯ ಮಾಡು”.
ಪಾನೀಯಂ ಪಾತುಮುಚ್ಛನ್ವೈ ತೃಷಾರ್ತೋ ಯದಿ ಯಾಚತೇ ।
ಪಾನಾರ್ಥಂ ತೈಲಮತ್ಯುಷ್ಣಂ ತಾದಾ ದೂತೈಃ ಪ್ರದೀಯತೇ ॥೫೫॥
ನೀರ ಕುಡಿಯಲು ಇಚ್ಛೆಪಟ್ಟು, ಆಯಾಸದಿಂದ ಆರ್ತನಾಗಿ ನೀರು ಕೇಳಿದರೆ ಯಮದೂತರು ಅತಿ ಬಿಸಿಯಾದ ಎಣ್ಣೆಯ ಕೊಡುವರು
.ಪೀಯತಾಂ ಭುಜ್ಯತಾಂ ಪಾನಮನ್ನಮೂಚುಸ್ತದೇತಿ ತೇ ।
ಪೀತಮಾತ್ರೇಣ ತೇನೈವ ದಗ್ಧಾಂತ್ರಾ ನಿಪತಂತಿ ತೇ ॥೫೬॥
ಅಂದಗ ಅವು ಹೀಗೆ ಹೇಳುತ್ತವು – “ನೀರ ಕುಡಿ, ಅನ್ನವ ತಿನ್ನು”. ಅದನ್ನ ಕುಡುದ ಮಾತ್ರಕ್ಕೆ ಕರುಳೆಲ್ಲ ಸುಟ್ಟು ಅವು ಕೆಳ ಬೀಳುವವು
ಕಥಂ ಚಿತ್ರುನರುತ್ಥಾಯ ಪ್ರಲಪಂತಿ ಸುದೀನವತ್ ।
ವಿವಶಾ ಉಚ್ಛ್ವಸಂತಶ್ಚ ತೇ ವಕ್ತುಮಪಿ ನಾಶಕನ್ ॥೫೭॥
ಹೇಗೋ ಪುನಃ ಎದ್ದು ನಿಂತುಕೊಂಡು ದೀನರಾಗಿ ಪ್ರಲಾಪಿಸಿಕೋಂಡು ವಿವಶರಾಗಿ ಏದುರುಸಿರು ಬಿಟ್ಟುಕೋಂಡು ಮಾತಾಡಲೂ ಅಶಕ್ಯರಾಗಿ ಬೀಳುವರು
ಇತ್ಯೇವಂ ಬಹುಶಸ್ತಾರ್ಕ್ಷ್ಯ ಯಾತನಾಃ ಪಾಪಿನಾಂ ಸ್ಮೃತಾಃ ।
ಕಿಮೇತೈರ್ವಿಸತಾತ್ಪ್ರೋಕ್ತೈಃ ಸರ್ವಶಾಸ್ತ್ರೇಷುಟ ಭಾಷಿತೈಃ ॥೫೮॥
ಏ ಗರುಡ!, ಈ ರೀತಿಯಾಗಿ ಪಾಪಿಗಳು ಅನೇಕ ಯಾತೆನೆ ಇದ್ದು ಎಂದು ಹೇಳಲ್ಪಟ್ಟಿದೆ ಎಲ್ಲಾ ಶಾಸ್ತ್ರಗಳಲ್ಲಿಯೂ ಅವನ್ನೆ ಹೇಳಲ್ಪಟ್ಟಿದೆ ಆದನ್ನು ವಿಸ್ತಾರವಾಗಿ ಹೇಳುತ್ತೇನೆ ಕೇಳು ?
ಏವಂ ವೈ ಕ್ಲಿಶ್ಯಮಾನಾಸ್ತೇ ನರಾ ನಾರ್ಯಃ ಸಹಸ್ರಶಃ ।
ಪಚ್ಯಂತೇ ನರಕೇ ಘೋರೇ ಯಾವದಾಭೂತಸಂಪ್ಲವಮ್ ॥೫೯॥
ಈ ರೀತಿಯಾಗಿ ನಿಶ್ಚಯವಾಗಿ ಪೀಡಿಸಲ್ಪಟ್ಟು ಸಾವಿರಾರು ನರನಾರಿಯರು ಪ್ರಳಯಕಾಲದವರೆಗೆ ಘೋರವಾದ ನರಕಲ್ಲಿ ಬೇಯಿಸಲ್ಪಡುತ್ತಾರೆ
ಸಸ್ಯಾಕ್ಷಯಂ ಫಲಂ ಭುಕ್ತ್ವಾ ತತ್ರೈವೋತ್ಪದ್ಯತೇ ಪುನಃ ।
ಯಮಾಜ್ಞಯಾ ಮಹೀಂ ಪ್ರಾಪ್ಯ ಭವಂತಿ ಸ್ಥಾವರಾದಯಃ ॥೬೦॥
ಅದರ ಅಕ್ಷಯಫಲವ ಅಲ್ಲಿಯೇ ಅನುಭವುಸಿ ಪುನಃ ಹುಟ್ಟುತ್ತವು. ಯಮನ ಆಜ್ಞೆಯ ಪ್ರಕಾರ ಭೂಮಿಗೆ ಬಂದು ಸ್ಥಾವರ ಇತ್ಯಾದಿಯಾಗಿ ಹುಟ್ಟುತ್ತವೆ
ವೃಕ್ಷಗುಲ್ಮಲತಾವಲ್ಲೀಗಿರಯಶ್ಚ ತೃಣಾನಿ ಚ ।
ಸ್ಥಾವರಾ ಇತಿ ವಿಖ್ಯಾತ ಮಹಾಮೋಹಸಮಾವೃತಾಃ ॥೬೧॥
ಮರ, ಪೊದೆ, ಗೆಡ್ಡೆ , ಬಳ್ಳಿ, ಪರ್ವತ ಮತ್ತೆ ಹುಲ್ಲುಗಳ ಸ್ಥಾವರವಸ್ತುಗಳು ಎಂದು ಪ್ರಸಿದ್ಧವಾಗಿದ್ದು ಮತ್ತು ಮಹಾಮೋಹದಿಂದ ಆವೃತವಾಗಿದೆ
ಕೀಟಾಶ್ಚ ಪಶವಶ್ಚೈವ ಪಕ್ಷಿಣಶ್ಚ ಜಲೇಚರಾಃ ।
ಚತುರಶೀತಿಲಕ್ಷೇಷು ಕಥಿತಾ ಜೀವಯೋನಯಃ ॥೬೨॥
ಕ್ರಿಮಿಗಳು, ಪಕ್ಷಿಗಳು , ಪ್ರಾಣಿಗಳು ಮತ್ತೆ ಜಲಚರಗಳು, ಎಂದು 84ಲಕ್ಷ ಜೀವಜಾತಿಗಳು ಎಂದು ಹೇಳಲ್ಪಟ್ಟಿದೆ
ಏತಾಃ ಸರ್ವಾಃ ಪರಿಭ್ರಮ್ಯ ತತೋ ಯಾಂತಿ ಮನುಷ್ಯತಾಮ್ ।
ಮಾನುಷೇsಪಿ ಶ್ವಪಾಕೇಷು ಜಾಯಂತೇ ನರಕಾಗತಾಃ ।
ತತ್ರಾಪಿ ಪಾಪಚಿಹ್ನೈಸ್ತೇ ಭವಂತಿ ಬಹುದುಃಖಿತಾಃ ॥೬೩॥
ಈ ಎಲ್ಲದರಲ್ಲಿಯೂ ಸುತ್ತಾಡಿ ಮತ್ತೆ ಮನುಷ್ಯ ಜನ್ಮವ ಪಡೆದು . ಮನುಷ್ಯರಲ್ಲೂ ನರಕದಿಂದ ಬಂದವರು ಚಾಂಡಾಲರಾಗಿ ಹುಟ್ಟುವರು .ಅಲ್ಲಿಯೂ ಪಾಪ ಚಿಹ್ನೆಗಳಿಂದ (ರೋಗಂಗಳಿಂದ) ಬುಹುದುಃಖಿತರಾಗಿರುತ್ತರೆ
ಗಲತ್ಕುಷ್ಠಾಶ್ಚ ಜನ್ಮಾಂಧಾ ಮಹಾರೋಗಸಮಾಕುಲಾಃ ।
ಭವಂತ್ಯೇವಂ ನರಾ ನಾರ್ಯಃ ಪಾಪಚಿಹ್ನೋಪಲಕ್ಷಿತಾಃ ॥೬೪॥
ಈ ರೀತಿ ತೀವ್ರವಾದ ಕುಷ್ಠರೋಗಿಗೊ, ಹುಟ್ಟುಕುರುಡರು, ಮಹಾರೋಗಗಳಿಂದ ಕೂಡಿ ಪಾಪಚಿಹ್ನೆಗಳ ಸೂಚುಸುವ ನರನಾರಿಯರಗುತ್ತಾರೆ
ಇತಿ ಗರುಡಪುರಾಣೇ ಸಾರೋದ್ಧಾರೇ ನರಕಪ್ರದ ಪಾಪಚಿಹ್ನನಿರೂಪಣಂ ನಾಮ ಚತುರ್ಥೋsಧ್ಯಾಯಃ ॥
ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ನರಕವ ಉಂಟುಮಾಡುವ ಪಾಪಚಿಹ್ನೆಗಳ ನಿರೂಪಣೆ’ ಹೇಳುವ ನಾಲ್ಕನೇ ಅಧ್ಯಾಯ ಮುಗಿದದ್ದು
No comments:
Post a Comment