Followers

Saturday, 30 May 2020

ಗ ಪು - ಅಧ್ಯಾಯ 4 ಭಾಗ 1

ಗ ಪು - 4 – ಭಾಗ 1

ನರಕಪ್ರದಪಾಪಚಿಹ್ನನಿರೂಪಣಮ್                                  ನರಕಗಳ ಉಂಟುಮಾಡುವ ಪಾಪಚಿಹ್ನೆಗಳ ನಿರೂಪಣೆ

 

ಗರುಡ ಉವಾಚ

ಕೈರ್ಗಚ್ಛಂತಿ ಮಹಾಮಾರ್ಗೇ ವೈತರಣ್ಯಾಂ ಪತಂತಿ ಕೈಃ ।

ಕೈಃ ಪಾಪೈರ್ನರಕೇ ಯಾಂತಿ ತನ್ಮೇ ಕಥಯ ಕೇಶವ ॥೦೧॥

ಗರುಡ ಹೇಳಿದ – “ಏ ಕೇಶವನೇ!, ಪಾಪಿಗಳು ಯಾವಕಾರಣದಿಂದ (ಯಾವ ಪಾಪದ ಕಾರಣದಿಂದ ಲಾಗಿ)ಹೋಗುವವು  ಯಾವುದರಿಂದಲಾಗಿ ವೈತರಣೀ ನದಿಲಿ ಬೀಳುತ್ತವೆ . ಯಾವ ಪಾಪಗಳಿಂದಲಾಗಿ ನರಕಕ್ಕೆ ಹೋಗುವವು ಎನಗೆ ಹೇಳು.”

ಶ್ರೀಭಗವಾನ್ ಉವಾಚ

ಸದೈವಾಕರ್ಮನಿರತಾಃ ಶುಭಕರ್ಮಪರಾಙ್ಮುಖಾಃ।ನರಕಾನ್ನರಕಂ ಯಾಂತಿ ದುಃಖಾದ್ದುಃಖಂ ಭಯಾದ್ಭಯಮ್ ॥೦೨॥

ಭಗವಂತ ಹೇಳಿದ°- ಏವತ್ತೂ ಅಶುಭಕರ್ಮಗಳಲ್ಲೇ ನಿರತರಾಗಿರುವ , ಶುಭಕರ್ಮಗಳಿಂದ ವಿಮುಖರಾಗಿರೋರು ಒಂದು ನರಕದ ಇನ್ನೊಂದು ನರಕಕ್ಕೂ, ಒಂದು ದುಃಖದಿಂದ ಇನ್ನೊಂದು ದುಃಖಕ್ಕೂ, ಒಂದು ಭಯದಿಂದ ಇನ್ನೊಂದು ಭಯಕ್ಕೂ ಹೋಗುವವು 

ಧರ್ಮರಾಜಪುರೇ ಯಾಂತಿ ತ್ರಿಭಿರ್ದ್ವಾರೈಸ್ತು ಧಾರ್ಮಿಕಾಃ ।

ಪಾಪಸ್ತು ದಕ್ಷಿಣದ್ವಾರಮಾರ್ಗೇಣೈವ ವ್ರಜಂತಿ ತತ್ ॥೦೩॥

ಧಾರ್ಮಿಕರು ಧರ್ಮರಾಜನ ಪುರಕ್ಕೆ ಮೂರು ದ್ವಾರಗಳಿಂದ ಹೋಗುವರು  ಪಾಪಿಗಳು ದಕ್ಷಿಣದ್ವಾರದ ಮಾರ್ಗದಲೇ ಹೋಗುವವು.

ಅಸ್ಮಿನ್ನೇವ ಮಹಾದುಃಖೇ ಮಾರ್ಗೇ ವೈತರಣೀ ನದೀ ।

ತತ್ರ ಯೇ ಪಾಪಿನೋ ಯಾಂತಿ ತಾನಹಂ ಕಥಯಾಮಿ ತೇ ॥೦೪॥

ಮಹಾದುಃಖಕರವಾದ ವೈತರಣೀ ನದಿ ಇದೇ ಮಾರ್ಗಲ್ಲಿ ಯಾವ ಪಾಪಿಗಳು ಹೋಗುತ್ತವೋ ಅದರ ಬಗ್ಗೆ ನಿನಗೆ ಹೇಳುತ್ತೆನೆ 

ಬ್ರಹ್ಮಘ್ನಾಶ್ಚ ಸುರಾಪಾಶ್ಚ ಗೋಘ್ನಾ ವಾ ಬಾಲಘಾತಕಾಃ ।

ಸ್ತ್ರೀಘಾತೀ ಗರ್ಭಪಾತೀ ಚ ಯೇ ಚ ಪ್ರಚ್ಛನ್ನಪಾಪಿನಃ ॥೦೫॥

ಬ್ರಹ್ಮಹತ್ಯೆ ಮಾಡುವವು, ಸುರಾಪಾನ ಮಾಡುವವು, ಗೋಹತ್ಯೆ ಮಾಡುವವು, ಶಿಶುಹತ್ಯೆ ಮಾಡುವವು, ಸ್ತ್ರೀಹತ್ಯೆ ಮಾಡುವವು, ಗರ್ಭಪಾತ ಮಾಡುಸುವವು ಮತ್ತೆ ಗುಟ್ಟಿನಲ್ಲಿ ಪಾಪಗಳ ಮಾಡುವವು,

ಯೇ ಹರಂತಿ ಗುರೋರ್ದ್ರವ್ಯಂ ದೇವದ್ರವ್ಯಂ ದ್ವಿಜಸ್ಯ ವಾ ।

ಸ್ತ್ರೀದ್ರವ್ಯಹಾರಿಣೋ ಯೇ ಚ ಬಾಲದ್ರವ್ಯಹರಾಶ್ಚ ಯೇ ॥೦೬॥

ಯಾರು ಗುರುಗಳ ದ್ರವ್ಯವ (ವಸ್ತು/ಧನ/ಸಂಪತ್ತು) ಅಥವಾ ದೇವರ ಪೈಸೆಯ (ವಸ್ತು/ಸಂಪತ್ತು/ದ್ರವ್ಯ) ಅಥವಾ ದ್ವಿಜರ ಪೈಸೆಯ ಅಪಹರುಸುತ್ತಾ ರೋ , ಯಾರು ಹೆಣ್ಣುಮ್ಮಕ್ಕಳ (ಕೂಸುಗಳ) ಧನವ ಅಪಹರಿಸುತ್ತಾರೋ , ಯಾರು ಮಕ್ಕಳ ಪೈಸೆಯ ಅಪಹರಿಸುತ್ತರೋ ,

ಯೇ ಋಣಂ ನ ಪ್ರಯಚ್ಛಂತಿ ಯೇ ವೈ ನ್ಯಾಸಾಪಹಾರಕಾಃ ।

ವಿಶ್ವಾಸಘಾತಕಾ ಯೇ ಚ ಸವಿಷಾನ್ನೇನ ಮಾರಕಾಃ ॥೦೭॥

ಯಾರು ಇನ್ನೊಬ್ಬರ ಹತ್ತಿರ ತೆಗೆದು ಕೋಂಡ ಸಾಲವ ತೀರುಸುವುದಿಲ್ಲಯೋ, ಯಾರು ಇನ್ನೊಬ್ಬರು  ಒತ್ತೆ ಮಡಿಗಿದ್ದರ ಅಪಹರುಸುತ್ತರೋ , yaaರು ವಿಶ್ವಾಸಘಾತಕರೋ, ಮತ್ತೆ ಯಾ ರು ಚಾರುವಿನಲ್ಲಿ ವಿಷ ಹಾಕಿ ಕೊಲ್ಲುತ್ತರೋ 

ದೋಷಗ್ರಾಹೀ ಗುಣಾಶ್ಲಾಘೀ ಗುಣವತ್ಸು ಸಮತ್ಸರಾಃ ।

ನೀಚಾನುರಾಗಿಣೋ ಮೂಢಾಃ ಸತ್ಸಂಗತಿಪರಾಙ್ಮುಖಾಃ ॥೦೮॥

ಯಾರು ಪರರ ದೋಷವ ಗ್ರಹಣಮಾಡುತ್ತಾರೋ  ಉತ್ತಮ ಗುಣಗಳ ಪ್ರಶಂಸಿಸುವುದಿಲ್ಲವೊ ಗುಣವಂತರಲ್ಲಿ ಮತ್ಸರಪಡುತ್ತರೋ , ನೀಚರ ಪ್ರೀತಿಸುತ್ತರು , ಮೂಢರು, ಸತ್ಸಂಗಂದ ವಿಮುಖರಾದೋರು,

ತೀರ್ಥಸಜ್ಜನಸತ್ಕರ್ಮಗುರುದೇವನಿಂದಕಾಃ ।

ಪುರಾಣವೇದಮೀಮಾಂಸಾನ್ಯಾಯವೇದಾಂತದೂಷಕಾಃ ॥೦೯॥

ತೀರ್ಥ, ಸಜ್ಜನ, ಸತ್ಕರ್ಮ, ಗುರು, ಮತ್ತೆ ದೇವರ ನಿಂದನೆ ಮಾಡುವರೋ ಪುರಾಣ, ವೇದ, ಮೀಮಾಂಸ, ನ್ಯಾಯ ಮತ್ತೆ ವೇದಾಂತಂಗಳ ದೂಷಣೆ ಮಾಡುವರೋ 

ಹರ್ಷಿತಾ ದುಃಖಿತಂ ದೃಷ್ಟ್ವಾ ಹರ್ಷಿತೇ ದುಃಖದಾಯಕಾಃ ।

ದುಷ್ಟವಾಕ್ಯಸ್ಯ ವಕ್ತಾರೋ ದುಷ್ಟಚಿತ್ತಾಶ್ಚ ಯೇ ಸದಾ ॥೧೦॥

ದುಃಖಿತರ ನೋಡಿ ಸಂತೋಷ ಪಡುವರೋ ಹರ್ಷಿತರಾಗಿದ್ದವರನ್ನು ದುಃಖಿಗಳಾಗಿ ಮಾಡುವರೋ ಬೇಡಗಟ್ಟೆ ಮಾತುಗಳ ಆಡುವರೋ , ಯಾವತ್ತೂ ದುರಾಲೋಚನೆಲಿ ಇರುವರೋ 

ನ ಶೃಣ್ವಂತಿ ಹಿತಂ ವಾಕ್ಯಂ ಶಾಸ್ತ್ರವಾರ್ತಾಂ ಕದಾಪಿ ನ ।

ಆತ್ಮಸಂಭಾವಿತಾಃ ಸ್ತಬ್ಧಾ ಮೂಢಾಃ ಪಂಡಿತಮಾನಿನಃ ॥೧೧॥

ಹಿತವಚನಗಳನ್ನೂ, ಶಾಸ್ತ್ರದ ವಿಷಯಗಳನ್ನೂ ಯಾವತ್ತೂ ಕೇಳದ್ದೇ ಇದ್ದವರು  ಆತ್ಮಶ್ಲಾಘನೆಯನ್ನೇ ಮಾಡುತ್ತರೋ (ತಾನೇ ಸಂಭಾವಿತ, ದೊಡ್ಡವ ಎಂದು ತಿಳ್ಕೊಂಡಿರುವವರು), ಕಠಿಣ ಹೃದಯಿಗಳು , ಮೂಢರು, ತಮ್ಮನ್ನೇ ಪಂಡಿತ  ಎಂದು ತಿಳ್ಕೊಂಡವರು 

ಏತೇ ಚಾನ್ಯೇ ಚ ಬಹವಃ ಪಾಪಿಷ್ಠಾ ಧರ್ಮವರ್ಜಿತಾಃ ।

ಗಚ್ಛಂತಿ ಯಮಮಾರ್ಗೇ ಹಿ ರೋದಮಾನಾ ದಿವಾನಿಶಮ್ ॥೧೨॥

ಇವೆಲ್ಲೋರೂ, ಪಾಪಿಗಳೂ, ಧರ್ಮಹೀನರೂ ಆದ ಇನ್ನೂ ಅನೇಕರು ಯಮಮಾರ್ಗಲ್ಲಿ ಹಗಲು ಇರುಳು ಕೂಗಿಕೋಂಡು ಹೋಗುವವು.

ಯಮದೂತೈಸ್ತಾಡ್ಯಮಾನಾ ಯಾಂತಿ ವೈತರಣೀಂ ಪ್ರತಿ ।

ತಸ್ಯಾಂ ಪತಂತಿ ಯೇ ಪಾಪಾಸ್ತಾನಹಂ ಕಥಯಾಮಿ ತೇ ॥೧೩॥

ಯಮದೂತರಿಂದ ಬಡುಸಿಕೋಂಡು, ವೈತರಣೀ ನದಿಯ ಕಡೆಗೆ ಹೋವವು. ಯಾವ ಪಾಪಿಗಳು ಅದರಲ್ಲಿ  ಬೀಳುತ್ತವೆ ಎಂದು ನಾನು ನಿನಗೆ ಹೇಳುತ್ತೆನೆ ಕೇಳು 

ಮಾತರಂ ಯೇsವಮನ್ಯಂತೇ ಪಿತರಂ ಗುರುಮೇವ ಚ ।

ಆಚಾರ್ಯಂ ಚಾಪಿ ಪೂಜ್ಯಂ ಚ ತಸ್ಯಾಂ ಮಜ್ಜಂತಿ ತೇ ನರಾಃ ॥೧೪॥

ಯಾರು ಅಮ್ಮ ಅಪ್ಪ° ಗುರು ಆಚಾರ್ಯ° ಮತ್ತೆ ಪೂಜ್ಯರ ಅವಮಾನಿಸುತ್ತರೋ  ಆ ಮನುಷ್ಯರು ಅದರಲ್ಲಿ ಮುಳುಗುತ್ತವೆ 

ಪತಿವ್ರತಾಂ ಸಾಧುಶೀಲಾಂ ಕುಲೀನಾಂ ವಿನಯಾನ್ವಿತಾಮ್ ।

ಸ್ತ್ರಿಯಂ ತ್ಯಜಂತಿ ಯೇ ದ್ವೇಷಾದ್ವೈತರಣ್ಯಾಂ ಪತಂತಿ ತೇ ॥೧೫॥

ಆರು ಪತಿವ್ರತೆಯೂ, ಸಾಧುಶೀಲೆಯೂ, ಕುಲೀನಳೂ, ವಿನಯಶೀಲೆಯೂ ಆದ ಸ್ತ್ರೀಯರ ದ್ವೇಷ ತ್ಯಜಿಸುವುದಿಲ್ಲವೋ  ಅವರು ವೈತರಣೀ ನದಿಲಿ ಬೀಳುತ್ತವು.

ಸತಾಂ ಗುಣಸಹಸ್ರೇಷು ದೋಷಾನಾರೋಪಯಂತಿ ಯೇ ।

ತೇಷ್ವವಜ್ಞಾಂ ಚ ಕುರ್ವಂತಿ ವೈತರಣ್ಯಾಂ ಪತಂತಿ ತೇ ॥೧೬॥

ಯಾರು ಸಾವಿರಾರು ಗುಣಗಳಿದ್ದವರ ಮೇಲೆ  ದೋಷಾರೋಪಣೆ ಮಾಡುತ್ತರೋ ಮತ್ತೆ ಅವರನ್ನು  ತಿರಸ್ಕಾರ ಮಾಡುತ್ತರೋ ಅವು ವೈತರಣೀ ನದಿಲಿ ಬೀಳುತ್ತಾ ರೆ 

ಬ್ರಾಹ್ಮಣಾಯ ಪ್ರತಿಶ್ರುತ್ಯ ಯಥಾರ್ಥಂ ನ ದದಾತಿ ಯಃ ।

ಆಹೂಯ ನಾಸ್ತಿ ಯೋ ಬ್ರೂಯಾತ್ತ ಯೋರ್ವಾಸಶ್ಚ ಸಂತತಮ್ ॥೧೭॥

ಯಾರು ಬ್ರಾಹ್ಮಣರಿಗೆ ಪ್ರತಿಜ್ಞೆ ಮಾಡಿ ಅದರ ಪ್ರಕಾರವಾಗಿ ಕೊಡುವುದಿಲ್ಲವೋ, ಅವರ ದ್ವನಿಗೊಂಡಿಕ್ಕಿ (ಆಹ್ವಾನಿಸಿ) ಎಂತದೂ ಇಲ್ಲ ಎಂದು ಹೇಳುತ್ತರೋ  ಅವು ಏವತ್ತೂ ಅಲ್ಲೇ ವಾಸ ಮಾಡುತ್ತರೆ 

ಸ್ವಯಂ ದತ್ತಾಪಹರ್ತಾ ಚ ದಾನಂ ದತ್ವಾsನುತಾಪಕಃ ।

ಪರವೃತ್ತಿ ಹರಶ್ಚೈವ ದಾನೇ ದತ್ತೇ ನಿವಾರಕಃ ॥೧೮॥

ತಾನೇ ದಾನ ಕೊಟ್ಟದ್ದರ ಕಿತ್ತುಕೊಂಡವ  ದಾನವ ಕೊಟ್ಟು ಪಶ್ಚಾತ್ತಾಪ ಪಡುವವರು ಪರರ ಜೀವನ ಅಪಹರಿಸುವವ, ಮತ್ತೊಬ್ಬ ದಾನ ಕೊಟ್ಟರೆ  ನಿಷೇಧಿಸುವವ

ಯಜ್ಞವಿಧ್ವಂಸಕಶ್ಚೈವ ಕಥಭಂಗಕರಶ್ಚ ಯಃ ।

ಕ್ಷೇತ್ರಸೀಮಾಹರಶ್ಚೈವ ಯಶ್ಚ ಗೋಚರಕರ್ಷಕಃ ॥೧೯॥

ಯಜ್ಞವ ಧ್ವಂಸ ಮಾಡುವವ, ಪುರಾಣ ಕಥಗೆ ವಿಘ್ನವುಂಟುಮಾಡುವವ, ಹೊಲದ ಮೇರೆಯ ಅಪಹರುಸುವವ (ಜಾಗೆಯ ಗಡಿಯ ಅತಿಕ್ರಮಣ ಮಾಡುವಂವ), ಗೋಮಳವ (ಭೂಮಿಯ/ಪ್ರದೇಶವ) ಅಪಹರುಸುವವ

ಬ್ರಾಹ್ಮಣೋ ರಸವಿಕ್ರೇತಾ ಯದಿಸ್ಯಾದ್ ವ್ಯಷಲೀಪತಿಃ ।

ವೇದೋಕ್ತಯಜ್ಞಾದನ್ಯತ್ರ ಸ್ವಾತ್ಮಾರ್ಥಂ ಪಶುಮಾರಕಃ ॥೨೦॥

ಬ್ರಾಹ್ಮಣನಾಗಿಯೂ ರಸವಿಕ್ರಯ (ಮಾದಕ ದ್ರವ ಪದಾರ್ಥವ ಮಾರುವವ) ಮಾಡುವವ ಕೀಳ್ದರ್ಜೆಸ್ತ್ರೀಯ ವರಿಸುವವ  ವೇದೋಕ್ತಯಜ್ಞಂಗೊಕ್ಕೆ ವ್ಯತಿರಿಕ್ತವಾಗಿ ಸ್ವಾನಂದಕ್ಕಾಗಿ ಪಶುಹತ್ಯೆಮಾಡುವವ

ಬ್ರಹ್ಮಕರ್ಮಪರಿಭ್ರಷ್ಟೋ ಮಾಂಸಭೋಕ್ತಾ ಚ ಮದ್ಯಪಃ ।

ಉಚ್ಛೃಂಖಲಿಸ್ವಭಾವೋ ಯಃ ಶಾಸ್ತ್ರಾಧ್ಯಯನವರ್ಜಿತಃ ॥೨೧॥

ಬ್ರಹ್ಮಕರ್ಮವ ಮಾಡದ ಇರುವವರು ಮಾಂಸ ಭಕ್ಷಣೆ ಮಾಡುವವ, ಮದ್ಯಪಾನ ಮಾಡುವವ  ಸ್ವೇಚ್ಛಾಚಾರಿಯಾದವ, ಶಾಸ್ತ್ರಾಧ್ಯಯನ ಮಾಡದೆ ಇದ್ದವ

ವೇದಾಕ್ಷರಂ ಪಠೇಚ್ಛೂದ್ರಃ ಕಾಪಿಲಂ ಯಃ ಪಯಃ ಪಿಬೇತ್ ।

ಧಾರಯೇದ್ ಬ್ರಹ್ಮಸೂತ್ರಂ ಚ ಭವೇದ್ವಾ ಬ್ರಾಹ್ಮಣೀ ಪತಿಃ ॥೨೨॥

ಯಾವ ಶೂದ್ರನಾದವ  ವೇದಾಕ್ಷರವ ಪಠಿಸುತ್ತನೋ, ಕಪಿಲೆಯ ಹಾಲ ಕುಡಿತ್ತನೋ, ಯಜ್ಞೋಪವೀತವ ಧರುಸುತ್ತನೋ, ಬ್ರಾಹ್ಮಣ ಸ್ತ್ರೀಯ ಗಂಡನಾಗುತ್ತಾನೋ,

ರಾಜಭಾರ್ಯಾಭಿಲಾಷೀ ಚ ಪರದಾರಾಪಹಾರಕಃ ।

ಕನ್ಯಾಯಾಂ ಕಾಮುಕಶ್ಛೈವ ಸತೀನಾಂ ದೂಶಕಶ್ಚ ಯಃ ॥೨೩॥

ರಾಜನ ಪತ್ನಿಯ ಇಚ್ಛಿಸುವವ, ಮತ್ತೆ ಪರಸ್ತ್ರೀಯರ ಅಪಹರಿ ಸುವವ  ಕನ್ಯೆಯರ ಕಾಮಿಸುವವ ಮತ್ತೆ ಪತಿವ್ರತಾ ಸ್ತ್ರೀಯರ ದೂಷಿಸುವವ

ಏತೇ ಚಾನ್ಯೇ ಚ ಬಹವೋ ನಿಷಿದ್ಧಾಚರಣೋತ್ಸುಕಾಃ ।

ವಿಹಿತತ್ಯಾಗಿನೋ ಮೂಢಾ ವೈತರಣ್ಯಾಂ ಪತಂತಿ ತೇ ॥೨೪॥

ಇವಲ್ಲರೂ, ನಿಷಿದ್ಧವಾದ ಆಚರಣೆಲಿ ಉತ್ಸುಕರಾದೋರು, ಶಾಸ್ತ್ರವಿದಿತ ಕರ್ಮಗಳ ತ್ಯಜಿಸಿದ ಮೂಢರು ಮತ್ತೆ ಇನ್ನೂ ಅನೇಕರು ವೈತರಣೀ ನದಿಲಿ ಬೀಳುತ್ತಾರೆ 

ಸರ್ವಂ ಮಾರ್ಗಮತಿಕ್ರಮ್ಯ ಯಾಂತಿ ಪಾಪಾ ಯಮಾಲಯೇ ।

ಪುನರ್ಯಮಾಜ್ಞಯಾಗತ್ಯ ದೂತಾಸ್ತಸ್ಯಾಂ ಕ್ಷಿಪಂತಿ ತಾನ್ ॥೨೫॥

ಮಾರ್ಗಗಳೆಲ್ಲವ ದಾಟಿ ಪಾಪಿ ಯಮಾಲಯಕ್ಕೆ ಹೋಗುವವು. ಅಲ್ಲಿ ಯಮನ ಆಜ್ಞೆ ಪ್ರಕಾರ ದೂತರು ಅವರ ಪುನಃ ಅದೇ ವೈತರಣೀ ನದಿಲಿ ಬೀಳುತ್ತಾರೆ 

ಯಾ ವೈ ದುರಂಧರಾ ಸರ್ವಧೌರೇಯಾಣಾಂ ಖಗಾಧಿಪ ।

ಅತಸ್ತಸ್ಯಾಂ ಪ್ರಕ್ಷಿಪಂತಿ ವೈತರಣ್ಯಾಂ ಚ ಪಾಪಿನಃ ॥೨೬॥

ಏ ಪಕ್ಷಿರಾಜನೇ!, ನರಕಗಳಲ್ಲಿ ಅತಿ ಮುಖ್ಯವಾದ ವೈತರಣಿಲಿ ಆ ಪಾಪಿಗಳ ಅವು ಅಂಬಗ ಇಡಿದು ಕೊಳ್ಳುತ್ತಾರೆ 

ಕೃಷ್ಣಾ ಗೌರ್ಯಾದಿ ನೋ ದತ್ತಾ ನೋರ್ಧ್ವದೇಹಕ್ರಿಯಾಃ ಕೃತಾಃ ।

ತಸ್ಯಾಂ ಭುಕ್ತ್ವಾ ಮಹದುಃಖಂ ಯಾಂತಿ ವೃಕ್ಷಂ ತಟೋದ್ಭವಮ್ ॥೨೭॥

ಕೃಷ್ಣವರ್ಣದ ಗೋವಿನ ದಾನಕೊಡದೆ ಇದ್ದವರು ಔರ್ಧ್ವದೇಹಕ್ರಿಯೆಯ ಮಾಡದ್ದೆ ಇದ್ದವರು  ಅದರಲ್ಲಿ ಮಹಾದುಃಖವ ಅನುಭವಿಸಿ, ಆ ನದಿಯ ದಡಲ್ಲಿ ಹುಟ್ಟಿದ ಮರದ ಹತ್ತ್ತಿರ ಹೋಗುತ್ತವೆ 

ಕೂಟಸಾಕ್ಷ್ಯಪ್ರದಾತಾರಃ ಕೂಟಧರ್ಮಪರಾಯಣಾಃ ।

ಛಲೇನಾರ್ಜಸಂಸಕ್ತಾಶ್ಚೌರ್ಯವೃತ್ತ್ಯಾ ಚ ಜೀವಿನಃ ॥೨೮॥

ಸುಳ್ಳು ಸಾಕ್ಷಿ ಹೇಳುವವರು ಮಿಥ್ಯಾಧರ್ಮಲ್ಲಿ ಪ್ರವೃತ್ತರಾಗಿರುವವರು  ಮೋಸದಿಂದ ಸಂಪಾನೆ ಮಾಡುವವರು ಕದ್ದು ಜೀವನ ಮಾಡುವವರು 

ಛೇದಯಂತ್ಯತಿವೃಕ್ಷಾಂಶ್ಚ ವನಾರಾಮವಿಭಂಜಕಾಃ ।

ವ್ರತಂ ತೀರ್ಥಂ ಪರಿತ್ಯಜ್ಯ ವಿಧವಾಶೀಲನಾಶಕಾಃ ॥೨೯॥

ದೊಡ್ಡ ಮರಗಳು  ಕತ್ತರಿಸುವವು, ಕಾಡುಗಳ, ತೋಟಗಳ ನಾಶಮಾಡುವವು, ವ್ರತಗಳನ್ನೂ ತೀರ್ಥಗಳನ್ನೂ ತ್ಯಜಿಸುವವರು ವಿಧವೆಯ ಶೀಲವ ನಾಶಮಾಡುವವರು 

ಭರ್ತಾರಂ ದೂಷಯೇನ್ನಾರೀ ಪರಂ ಮನಸಿ ಧಾರಯೇತ್ ।

ಇತ್ಯಾದ್ಯಾಃ ಶಾಲ್ಮಲೀವೃಕ್ಷೇ ಭುಜಂತೇ ಬಹುತಾಡನಮ್ ॥೩೦॥

ತನ್ನ ಪತಿಯ ದೂಷಿಸಿ, ಪರರ ಮನಸ್ಸಿಲ್ಲಿ ಧ್ಯಾನುಸುವ ಸ್ತ್ರೀ ಮೊದಲಾದವರು  ಶಾಲ್ಮಲೀ ವೃಕ್ಷದ ಹತ್ತಿರ ಬಹಳ ಪೆಟ್ಟು ತಿನ್ನುವರು 

ತಾಡನಾತ್ಪತಿತಾ ದೂತಾಃ ಕ್ಷಿಪಂತಿ ನರಕೇಷು ತಾನ್ ।

ಪತಂತಿ ತೇಷು ಯೇ ಪಾಪಾಸ್ತಾನಹಂ ಕಥಯಾಮಿ ತೇ ॥೩೧॥

ಆ ಹೊಡೆತದಿಂದ ಕೆಳಗೆ ಬಿದ್ದರು ದೂತರು ಎಳದು ನರಕದೊಳಗೆ ಬಿಡುತ್ತಾರೆ . ಯಾವ ಪಾಪಿಗಳು  ಅದರಲ್ಲಿ ಬೀಳುತ್ತರೋ ಎಂದು ನಿನಗೆ ಹೇಳುತ್ತೆನೆ  


No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...