Followers

Friday, 29 May 2020

ಗ ಪು ಅಧ್ಯಾಯ 3 ಭಾಗ 3


ಅರ್ಧಂ ಖಾತ್ವಾsವಟೇ ಕೇಚಿದ್ಭಿದ್ಯಂತೇ ಮೂರ್ಧ್ನಿ ಸಾಯಕೈಃ ।

ಅಪರೇ ಯಂತ್ರಮಧ್ಯಸ್ಥಾಃ ಪೀಡ್ಯಂತೇ ಚೇಕ್ಷುದಂಡವತ್ ॥೫೦॥

ಕೆಲವರ ಅರ್ಧದೇಹವ ಹಳ್ಳದಲ್ಲಿ ಹೂತು ಅವರ ಮಸ್ತಕವ ಚೂಪಾದ ಬಾಣಗಳಿಂದ ಕುಕ್ಕಿ ಕೆಲವರ ಯಂತ್ರದ ಮಧ್ಯಲ್ಲಿ ಹಾಕಿದ ಕಬ್ಬಿನ ತುಂಡಿನ ರೀತಿಲಿ ಹಿಂಡುತ್ತರೆ 

ಕೇಚಿತ್ಪ್ರಜ್ವಲಮಾನೈಸ್ತು ಸಾಂಗಾರೈಃ ಪರಿತೋ ಭೃಶಮ್ ।

ಉಲ್ಮು ಕೈರ್ವೇಷ್ಟಯಿತ್ವಾ ಚ ಧ್ಮ್ಯಾಯಂತೇ ಲೋಹಪಿಂಡವತ್ ॥೫೧॥

ಕೆಲವರ ಪ್ರಜ್ವಲಿಸುವ ಕೆಂಡಗಳಿಂದ ಬಹಳವಾಗಿ ಹೊತ್ತಿ ಉರಿವ ಮುಷ್ಟಗೆ ಹೊದ್ದಿಸಿ ಲೋಹದ ಅದುರಿನ ಹಾಗೆ ಕರಗುಸುತ್ತರೆ 

ಕೇಚಿದ್ಭ್ರತಮಯೇ ಪಾಕೇ ತೈಲಪಾಕೇ ತಥಾ ಪರೇ ।

ಕಟಾಹಕ್ಷಿಪ್ತವಟವತ್ಪ್ರಕ್ಷಿಪ್ಯಂತೇ ಯತಸ್ತತಃ ॥೫೨॥

ಕೆಲವರ ತುಪ್ಪದ ಪಾಕಲ್ಲಿಯೂ, ಕೆಲವರ ಎಣ್ಣೆಯ ಪಾಕಲ್ಲಿಯೂ ಅದ್ದಿ ಕಾದ ಎಣ್ಣೆಯ ಕೊಪ್ಪರಿಗೆಯಲ್ಲಿ  ಹಾಕಿ ತಿರುಗಿಸುತ್ತಾ ತಿರುಗಿಸುತ್ತಿದ್ದರು 

ಕೇಚಿನ್ಮತ್ತ ಗಜೇಂದ್ರಾಣಾಂ ಕ್ಷಿಪ್ಯಂತೇ ಪುರತಃ ಪಥಿ ।

ಬದ್ಧ್ವಾ ಹಸ್ತೌ ಚ ಪಾದೌ ಚ ಕ್ರಿಯಂತೇ ಕೇsಪ್ಯಧೋಮುಖಾಃ ॥೫೩॥

ಕೆಲವರ ಮದ್ದಾನೆಗಳ ಮುಂದೆ ದಾರಿಯಲಿ ಹಿಡಿದು  ಕೆಲವರ ಕೈ ಮತ್ತೆ ಕಾಲ ಕಟ್ಟಿ ತಲೆಕೆಳವಾಗಿ ತೂಗುಹಾಕಿದ್ದರು 

ಕ್ಷಿಪ್ಯಂತೇ ಕೇsಪಿ ಕೂಪೇಷು ಪಾತ್ಯಂತೇ ಕೇsಪಿ ಪರ್ವತಾತ್ ।

ನಿಮಗ್ನಾಃ ಕೃಮಿಕುಂಡೇಷು ತುದ್ಯಂತೇ ಕೃಮಿಭಿಃ ಪರೇ ॥೫೪॥

ಕೆಲವರ ಬಾವಿಗೆ ತಳ್ಳುತ್ತಿದ್ದರು . ಕೆಲವರ ಪರ್ವತಗಳ ಮೇಲಿಂ ದ ಹೊರಳಿಸಿದರು . ಕೆಲವರ ಹುಳುಹುಪ್ಪಟೆಗೊ ತುಂಬಿದ ಕುಂಡಲ್ಲಿ ಮುಳುಗುಸುತ್ತದ್ದರು  ಅವು ಕ್ರಿಮಿಗಳಿಂದ ಕಚ್ಚಲ್ಪಡುತ್ತಿದ್ದವು 

ವಜ್ರತುಂಡೈರ್ಮಹಾಕಾಕೈರ್ಗೃಧ್ರೈರಾಮಿಷಗೃಧ್ನುಭಿಃ ।

ನಿಷ್ಕುಷ್ಯಂತೇ ಶಿರೋದೇಶೇ ನೇತ್ರೇ ವಾಸ್ಯೇ ಚ ಚುಂಚುಭಿಃ ॥೫೫॥

ವಜ್ರದoತೇ  ಕೊಕ್ಕುರುವ ದೊಡ್ಡ ಕಾಕೆಗಳ  ಮಾಂಸ ಭಕ್ಷಿಗಳಾದ ಮತ್ತೆ ತಿನ್ನಲು  ಕಾತರುಸುವ ಹದ್ದುಗಳು , ಆ ಪಾಪಿಯ ತಲೆಮೇಲ್ಕಟೆ, ಕಣ್ಣು, ಮೋರೆಗಳಲ್ಲಿ ತಮ್ಮ ಕೊಕ್ಕುಗಳಿಂದ ಕುಕ್ಕಿ ಕುಕ್ಕಿ ಕೀಳುತ್ತಿದ್ದವು .

ಋಣಂ ವೈ ಪ್ರಾರ್ಥಯಂತ್ಯನ್ಯೇ ದೇಹಿ ದೇಹಿ ಧನಂ ಮಮ ।

ಯಮಲೋಕೇ ಮಯಾ ದೃಷ್ಟೋ ಧನಂ ಮೇ ಭಕ್ಷಿತಂ ತ್ವಯಾ ॥೫೬॥

ನನ್ನ ಪೈಸೆಯ ಕೊಡು., ಕೊಡು, ಯಮಲೋಕಲ್ಲಿ ಈಗ ನಿನ್ನ ನೋಡಲ್ಪಟ್ಟತ್ತು, ನಿನ್ನಿಂದ ನನ್ನ ಪೈಸೆ ತಿಂದಾಕಲ್ಪತ್ತಿದ್ದೀಯ 

ಏವಂ ವಿವದಮಾನಾನಾಂ ಪಾಪಿನಾಂ ನರಕಾಲಯೇ ।

ಛಿತ್ತ್ವಾಸಂದಂಶಕೈರ್ದೂತಾ ಮಾಂಸಖಂಡಾಂದದಂತಿ ಚ ॥೫೭॥

ಈ ರೀತಿ ನರಕಾಲಯಲ್ಲಿ ಪಾಪಿಗಳು  ಲಡಾಯಿ ಮಾಡಿಕೊಂಡು ಯಮದೂತರು ಚಿಮಿಟಿಂದ ಸಾಲಗಾರನ ಮಾಂಸಖಂಡಂಗಳ ಕತ್ತರಿಸಿ ಸಾಲಕೊಟ್ಟವನಿಗೆ ಕೊಡುತ್ತಿದ್ದರು 

ಏವಂ ಸಂತಾಡ್ಯ ತಾನ್ದೂತಾಃ ಸಂಕೃಷ್ಯ ಯಮಶಾಸನಾತ್ ।

ತಾಮಿಸ್ರಾದಿಷು ಘೋರೇಷು ಕ್ಷಿಪ್ಯಂತೇ ನರಕೇಷು ಚ ॥೫೮॥

ಈ ರೀತಿ ಯಮದೂತರು ಅವರ ಬಡುದು ಯಮನ ಆಜ್ಞೆಯ ಪ್ರಕಾರ ಅವರ ಎಳಕ್ಕೊಂಡು ಹೋಗಿ ತಾಮಿಸ್ರ ಮೊದಲಾದ ಘೋರವಾದ ನರಕಗಳಲ್ಲಿ ಹಾಕುತ್ತಿದ್ದರು 

ನರಕಾ ದುಃಖಬಹುಲಾಸ್ತತ್ರ ವೃಕ್ಷ ಸಮೀಪತಃ ।

ತೇಷ್ವಸ್ತಿ ಯನ್ಮಹದ್ದುಃಖಂ ತದ್ವಾಚಾಮಪ್ಯಗೋಚರಮ್ ॥೫೯॥

ಮರದ ಹತತ್ತಿರ ಬಹು ದುಃಖಗಳಿಂದ ತುಂಬಿದ ನರಕಗಳು ಇದ್ದು. ಅಲ್ಲಿ ಯಾವ ಮಹಾ ದುಃಖ ಇದ್ದೋ ಅದರ ಮಾತಿಲ್ಲಿ ಹೇಳಲು  ಸಾಧ್ಯವಿಲ್ಲ 

ಚತುರಶೀತಿಲಕ್ಷಾಣಿ ನರಕಾಃ ಸಂತಿ ಖೇಚರ ।

ತೇಷಾಂ ಮಧ್ಯೇ ಘೋರತಮಾ ಧೌರೇಯಾಸ್ತ್ವೇಕವಿಂಶತಿಃ ॥೬೦॥

ಎಲೈ ಗರುಡನೇ!, ಒಟ್ಟು ಎಂಬತ್ತನಾಲ್ಕು ಲಕ್ಷ ನರಕಗಳು ಇದ್ದು. ಅವುಗಳಲ್ಲಿ ಅತಿ ಘೋರವಾದ ಇಪ್ಪತ್ತೊಂದು ನರಕಗಳು  ಮುಖ್ಯವಾದವುಗಳು 

ತಾಮಿಸ್ರೋ ಲೋಹಶಂಕುಶ್ಚ ಮಹಾರೌರವಶಾಲ್ಮಲೀ ।

ರೌರವಃ ಕುಡ್ಮಲಃ ಕಾಲಸೂತ್ರಕಃ ಪೂತಿಮೃತ್ತಿಕಃ ॥೬೧॥

ತಾಮಿಸ್ರ, ಲೋಹಶಂಕು, ಮಹಾರೌರವ, ಶಾಲ್ಮಲೀ, ರೌರವ, ಕುಡ್ಮಲ, ಕಾಲಸೂತ್ರಕ, ಪೂತಿಮೃತ್ತಿಕ,

ಸಂಘಾತೋ ಲೋಹಿತೋದಶ್ಚ ಸವಿಷಃ ಸಂಪ್ರತಾಪನಃ ।

ಮಹಾನಿರಯಕಾಕೋಲೌ ಸಂಜೀವನಮಹಾಪಥೌ ॥೬೨॥

ಸಂಘಾತ, ಲೋಹಿತೋದ, ಸವಿಷ, ಸಂಪ್ರತಾಪನ, ಮಹಾನಿರಯ, ಕಾಕೋಲ, ಸಂಜೀವನ, ಮಹಾಪಥಿ,

ಅವೀಚಿರಂಧತಾಮಿಸ್ರಃ ಕುಂಭೀಪಾಕಸ್ತಥೈವ ಚ ।

ಸಂಪ್ರತಾಪನನಾಮೈಕಸ್ತಪನೆಸ್ತ್ವೇಕವಿಂಶತಿಃ ॥೬೩॥

ಅವೀಚಿ, ಅಂಧತಾಮಿಸ್ರ, ಕುಂಭೀಪಾಕ, ಸಂಪ್ರತಾಪನ ಮತ್ತೆ ತಪನ- ಇವೆ ಆ ಇಪ್ಪತ್ತೊಂದು ನರಕಗಳು 

ನಾನಾಪೀಡಾಮಯಾಃ ಸರ್ವೇ ನಾನಾಭೇದೈಃ ಪ್ರಕಲ್ಪಿತಾಃ ।

ನಾನಾಪಾಕವಿಪಾಕಶ್ಚ ಕಿಂಕರೌಘೈರಧಿಷ್ಠಿತಾಃ ॥೬೪॥

ಈ ಎಲ್ಲ ನರಕಗಳು ಅನೇಕ ರೀತಿಯ ಯಾತನೆಗಳಿಂದ ತುಂಬಿದ್ದು. ಅವುಗಳ  ಅನೇಕ ಭಾಗಗಳಾಗಿ ಮಾಡಲ್ಪಟ್ಟಿದು. ಅಲ್ಲಿ ನಾನಾ ರೀತಿಯ ಪಾಪಗಳಿಗೆ ತಕ್ಕ ಫಲಗಳ ಅನುಭವಿಸಬೇಕು . ಯಮಕಿಂಕರರು ಅದರಲ್ಲಿದ್ದರು  (ಅಲ್ಲಿದ್ದವು).

ಏತೇಷು ಪತಿತಾ ಮೂಢಾಃ ಪಾಪಿಷ್ಠಾ ಧರ್ಮವರ್ಜಿತಾಃ ।

ತತ್ರ ಭುಂಜಂತಿ ಕಲ್ಪಾಂತೇ ತಾಸ್ತಾ ನರಕಯಾತನಾಃ ॥೬೫॥

ಇವುಗಳಲ್ಲಿ ಬಿದ್ದ ಪಾಪಿಗಳಾದ ಮೂಢರು, ಧರ್ಮವ ಬಿಟ್ಟವು, ಅಲ್ಲಿ ಕಲ್ಪದ ಅಂತ್ಯದವರೇಗೆ ಆಯಾ ನರಕಯಾತನೆಗಳ ಅನುಭವುಸುತ್ತವೆ 

ಯಾಸ್ತಾಮಿಸ್ರಾಂಧತಾಮಿಸ್ರಾ ರೌರವಾದ್ಯಶ್ಚ ಯಾತನಾಃ ।

ಭುಂಕ್ತೇ ನರೋ ವಾ ನಾರೀ ವಾ ಮಿಥಃ ಸಂಗೇನ ನಿರ್ಮಿತಾಃ ॥೬೬॥

ತಾಮಿಸ್ರ, ಅಂಧತಾಮಿಸ್ರ, ರೌರವಾದಿ ನರಕಗಳ ಯಾತನೆಗಳ ಯಾವ ಪುರುಷ ಅಥವಾ ಸ್ತ್ರೀ ಅನುಭವುಸುತ್ತವೋ, ಅದರ ಪಾಪಪೂರಿತವಾದ ಪರಸ್ಪರ ಸಂಯೋಗದಿಂದಲೇ (ಕಾಮಲೋಲುಪತೆಂದ) ಪಡೆದಿರುತ್ತವೆ 

ಏವಂ ಕುಟುಂಬಂ ಬಿಭ್ರಾಣ ಉದರಂಭರ ಏವ ವಾ ।

ವಿಸೃಜ್ಯೇಹೋಭಯಂ ಪ್ರೇತ್ಯ ಭುಂಕ್ತೇ ತತ್ಫಲಮೀದೃಶಮ್ ॥೬೭॥

ಈ ರೀತಿ ತನ್ನ ಕುಟುಂಬವ ಪಾಲಿಸುವವ ಮತ್ತೆ ಉದರ ಪೋಷಣೆ ಮಾಡುವವ ಇವರೆಡನ್ನೂ ಬಿಟ್ಟು ಪರಲೋಕಕ್ಕೆ ಹೋಗಿ ಈ ರೀತಿಯಾಗಿ ಅದರ ಫಲವ ಅನುಭವುಸುತ್ತನೆ .

ಏಕಃ ಪ್ರಪದ್ಯಂತೇ ಧ್ವಾಂತಂ ಹಿತ್ವೇದಂ ಸ್ವಂ ಕಲೇವರಮ್ ।

ಕುಶಲೇತರಪಾಥೇಯೋ ಭೂತದ್ರೋಹೇಣ ಯದ್ಭೃತಮ್ ॥೬೮॥

ಅವ ತನ್ನ ಸ್ಥೂಲ ಶರೀರವ ಬಿಟ್ಟು  ಇತರರಿಗೆ ಮಾಡಿದ ದ್ರೋಹದಿಂದ ಉಂಟಾದ ಪಾಪದ ಬುತ್ತಿಯೊಟ್ಟಿಗೆ ಅಂಧಕಾರಪೂರ್ಣವಾದ ನರಕಲ್ಲಿ ತಾನೋಬ್ಬನೇ ಬೀಳುತ್ತಾನೆ 

ದೈವೇಸನಾಸಾದಿತಂ ಸತ್ಯ ಶಮಲೇ ನಿರಯೇ ಪುಮಾನ್ ।

ಭುಂಕ್ತೇ ಕುಟುಂಬಪೋಷಸ್ಯ ಹೃತದ್ರವ್ಯ ಇವಾತುರಃ ॥೬೯॥

ಆ ಮನುಷ್ಯ ವಿಧಿನಿಯಮಕ್ಕಧೀನನಾಗಿ, ಆ ತುಚ್ಛ ನರಕಲ್ಲಿ ತನ್ನ ಕುಟುಂಬಕ್ಕೆ ಆಧಾರವಾದ ಧನವ ಕಡಕೊಂಡವನಾಗೆ ದುಃಖವ ಅನುಭವುಸುತ್ತನೆ 

ಕೇವಲೇನ ಹ್ಯಧರ್ಮೇಣ ಕುಟುಂಬಭರಣೋತ್ಸುಕಃ ।

ಯಾತಿ ಜೀವೋಂಧತಾಮಿಸ್ರಂ ಚರಮಂ ತಮಸಃ ಪದಮ್ ॥೭೦॥

ಕೇವಲ ಅಧರ್ಮದ ತನ್ನ ಕುಟುಂಬ ಪೋಷಣೆಲಿ ಉತ್ಸುಕನಾಗಿಪ್ದ್ದ ಜೀವ ಅತ್ಯಂತ ಅಂಧಕಾರಯುಕ್ತ ಜಾಗ ಆದ ಅಂಧತಾಮಿಸ್ರ ಹೇಳುವ ನರಕಕ್ಕೆ ಹೋಗುತ್ತಾನೆ 

ಅಧಸ್ತಾನ್ನರಲೋಕಸ್ಯ ಯಾವತೀರ್ಯಾತನಾದಯಃ ।

ಕ್ರಮಶಃ ಸಮನುಕ್ರಮ್ಯ ಪುನರತ್ರಾ ವ್ರಜೇಚ್ಛುಚಿಃ ॥೭೧॥

ನರಲೋಕದ ಕೆಳಗೆ ಇದ್ದ ಯಾತನೆಗಳ ಕ್ರಮವಾಗಿ ಅನುಭವುಸಿ ಪರಿಶುದ್ಧನಾಗಿ ಪುನಃ ಇಲ್ಲಿ ಬರುತ್ತಾರೆ .

 ಇತಿ ಶ್ರೀ ಗರುಡಪುರಾಣೇ ಸಾರೋದ್ಧಾರೇ ಯಮಯಾತನಾ ನಿರೂಪಣಂ ನಾಮ ತೃತೀಯೋಧ್ಯಾಯಃ ॥

ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಯಮಯಾತನೆಯ ನಿರೂಪಣೆ’ ಹೇಳುವ ಮೂರನೆ ಅಧ್ಯಾಯ ಮುಗಿದದ್ದು 

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...