Followers

Wednesday, 27 May 2020

ಗ ಪು ಅಧ್ಯಾಯ 3 ಭಾಗ 1


ಆದಿತ್ಯಚಂದ್ರಾವನಿಲೋsನಲಶ್ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ ।

ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್॥೧೬॥

ಸೂರ್ಯ, ಚಂದ್ರ, ಅಗ್ನಿ, ವಾಯು, ಆಕಾಶ, ಭೂಮಿ, ನೀರು, ಹೃದಯ, ಯಮ, ಹಗಲು, ಇರುಳು, ಎರಡು ಸಂಧ್ಯಾಕಾಲಕ್ಕೆ  ಮತ್ತೆ ಧರ್ಮ- ಇವುಗಳ ಮನುಷ್ಯನ ವೃತ್ತಾಂತವನ್ನು ತಿಳ್ಕೊಂಡಿರುತ್ತರೆ 

ಧರ್ಮರಾಜಶ್ಚಿತ್ರಗುಪ್ತಃ ಶ್ರವಣಾ ಭಾಸ್ಕರಾದಯಃ ।

ಕಾಯಸ್ಥಂ ತತ್ರ ಪಶ್ಯಂತಿ ಪಾಪಂ ಪುಣ್ಯಂ ಚ ಸರ್ವಶಃ ॥೧೭॥

ಧರ್ಮರಾಜ, ಚಿತ್ರಗುಪ್ತ, ಶ್ರವಣ, ಸೂರ್ಯ ಮೊದಲಾದೋರು ಈ ಶರೀರಲ್ಲಿದ್ದುಗೊಂಡು ಪಾಪಪುಣ್ಯಗಳೆಲ್ಲವ ನೋಡುತ್ತರೆ 

.ಏವಂ ಸುನಿಶ್ಚಯಂ ಕೃತ್ವಾ ಪಾಪಿನಾಂ ಪಾತಕಂ ಯಮಃ ।

ಆಹೂಯ ತಾನ್ನಿಜಂ ರೂಪಂ ದರ್ಶಯತ್ಯತಿಭೀಷಣಮ್ ॥೧೮॥

ಈ ರೀತಿ ಪಾಪಿಯ ಪಾಪಗಳ ನಿಶ್ಚಯಮಾಡಿ, ಯಮಧರ್ಮರಾಜ ಅವನನ್ನು ಕರೆಸಿ ಅತಿಭಯಂಕರವಾದ ತನ್ನ ನಿಜರೂಪವ ತೋರುಸುತ್ತನೆ 

ಪಾಪಿಷ್ಠಾಸ್ತೇ ಪ್ರಪಶ್ಯಂತಿ ಯಮರೂಪಂ ಭಯಂಕರಮ್ ।

ದಂಡಹಸ್ತಂ ಮಹಾಕಾಯಂ ಮಹಿಷೋಪರಿ ಸಂಸ್ಥಿತಮ್ ॥೧೯॥

ಆ ಪಾಪಿಷ್ಠರು ದಂಡಪಾಣಿಯಾದ, ಮಹಾಕಾಯನಾದ, ಕೋಣನ ಮೇಲೆ ಕೂಳಿತು ಕೊಂಡಿದ್ದ ಭಯಂಕರನಾದ ಯಮನ ರೂಪವ ನೋಡುತ್ತರೆ 

ಪ್ರಲಯಾಂಬುದನಿರ್ಘೋಷಂ ಕಜ್ಜಲಾಚಲಸನ್ನಿಭಮ್ ।

ವಿದ್ಯುತ್ಪ್ರಭಾಯುಧೈರ್ಭೀಮಂ ದ್ದ್ವಾತ್ರಿಂಶದ್ಭುಜಸಂಯುತಮ್ ॥೨೦॥

ಪ್ರಳಯಕಾಲದ ಮೇಘಗಳ ಗರ್ಜನೆ ಹಾಗೆ ಗರ್ಜುಸುವ, ಕಾಡಿಗೆಯ ಪರ್ವತದ ಹಾಗೆ ಕಪ್ಪಾಗಿ, ಮಿಂಚಿನಾಗೆ ಹೊಳವ ಆಯುಗಳಿಂದ ಒಡಗೂಡಿ ಭಯಂಕರನಾದ ಮೂವತ್ತೆರಡು ಭುಜಗಳ ಹೊಂದಿದ್ದ 

ಯೋಜನತ್ರಯವಿಸ್ತಾರಂ ವಾಪೀತುಲ್ಯವಿಲೋಚನಮ್ ।

ದಂಷ್ಟ್ರಾಕರಾಲವದನಂ ರಕ್ತಾಕ್ಷಂ ದೀರ್ಘನಾಸಿಕಮ್ ॥೨೧॥

ಮೂರು ಯೋಜನ ವಿಸ್ತಾರದ (ದೇಹಾಕಾಯ ), ಬಾವಿಯ ಹಾಗೆ ಕಣ್ಣುಗಳು ಕೋರೆಹಲ್ಲಿನ  ಭಯಂಕರವಾದ ಮೋರೆಯಿದ್ದು , ರಕ್ತರಂಜಿತ ಕಣ್ಣುಗಳಿದ್ದು , ಉದ್ದವಾದ ಮೂಗಿನ ಯಮರಾಜನ ಸ್ವರೂಪ ( ಈ ರೀತಿ ಭಯಂಕರವಾದ್ದು).

ಮೃತ್ಯುಜ್ವರಾದಿಭಿರ್ಯುಕ್ತಶ್ಚಿತ್ರಗುಪ್ತೋsಪಿ ಭೀಷಣಃ ।

ಸರ್ವೇ ದೂತಾಶ್ಚ ಗರ್ಜಂತಿ ಯಮತುಲ್ಯಾಸ್ತದಂತಿಕೇ ॥೨೨॥

ಮೃತ್ಯುಜರಾದಿಗಳಿಂದ ಕೂಡಿದ ಚಿತ್ರಗುಪ್ತನೂ ಭಯಂಕರನಾಗಿದ್ದ  ಯಮರೂಪಕ್ಕೆ ತುಲ್ಯವಾದ ರೂಪವ ಹೊಂದಿ ಎಲ್ಲ ದೂತರು ಗರ್ಜಿಸಿಕೊಂಡು ಅವನ ಹತ್ತಿರ ಇದ್ದರು .

ತಂ ದೃಷ್ಟ್ವಾಭಯಭೀತಸ್ತು ಹಾಹೇತಿ ವದತೇ ಖಲಃ ।

ಅದತ್ತದಾನಃ ಪಾಪಾತ್ಮಃ ಕಂಪತೇ ಕ್ರಂದತೇ ಪುನಃ ॥೨೩॥

ಯಮನ ನೋಡಿ ಭಯಭೀತನಾಗಿ ಆ ದುಷ್ಟ  ಹಾ ಹಾ ಎಂದು ಕಿರುಚುತ್ತ . ದಾನವನ್ನೂ ಮಾಡದ್ದೆ ಇಂತಹ ಪಾಪಿ ನಡುಗಿಕೋಂಡು ಮತ್ತೆ ವಿಲಪಿಸುತ್ತನೆ 

ತತೋ ವದತಿ ತಾನ್ಸರ್ವಾನ್ ಕ್ರಂದಮಾನಾಂಶ್ಚ ಪಾಪಿನಃ ।

ಶೋಚಂತಃ ಸ್ವಾನಿ ಕರ್ಮಾಣಿ ಚಿತ್ರಗುಪ್ತೋ ಯಮಾಜ್ಞಯಾ ॥೨೩॥

ಮತ್ತೆ ವಿಲಾಪಿಸುತ್ತಿದ್ದ  ಹಾಗೂ ತಾವು ಮಾಡಿದ ಕರ್ಮಗಳ ಕುರಿತು ಶೋಕಿಸಿಕೋಂಡು ಇದ್ದ ಎಲ್ಲ ಪಾಪಿಗಳು ಯಮನ ಅಪ್ಪಣೆ ಪ್ರಕಾರ ಚಿತ್ರಗುಪ್ತ ಹೇಳುತ್ತನೆ 

ಭೋಃ ಭೋಃ ಪಾಪಾ ದುರಾಚಾರಾ ಅಹಂಕಾರಪ್ರದೂಷಿತಾಃ ।

ಕಿಮರ್ಥಮರ್ಜಿತಂ ಪಾಪಂ ಯುಷ್ಮಾಭಿರವಿವೇಕಿಭಿಃ ॥೨೫॥

“ಎಲೈ ಪಾಪಿಗಳೇ, ಕೆಟ್ಟ ನಡತೆಯಿoದ ಅಹಂಕಾರದ ತುಂಬಿಕೊಂಡ, ಅವಿವೇಕಿಗಳೇ, ಪಾಪವ ಎತಕೆ ಬೇಕಾಗಿ ಸಂಪಾದಿಸಿದ್ದಿರಿ 

ಕಾಮಕ್ರೋಧಾದ್ಯದುತ್ಪನ್ನಂ ಸಂಗಮೇನ ಚ ಪಾಪಿನಾಮ್ ।

ತತ್ಪಾಪಂ ದುಃಖದಂ ಮೂಢಾಃ ಕಿಮರ್ಥಂ ಚರಿತಂ ಜನಾಃ ॥೨೬॥

“ಕಾಮ, ಕ್ರೋಧಗಳಿಂದ ಪಾಪಿಗಳ ಸಹವಾಸದ ಉತ್ಪನ್ನವಾದ ದುಃಖದಾಯಕವಾದ ಆ ಪಾಪಗಳು  ಏ ಮೂಢರೇ, ಎತಕೆ ಮಾಡಿದಿರಿ 

ಕೃತವಂತಃ ಪುರಾ ಯೂಯಂ ಪಾಪಾನ್ಯತ್ಯಂತಹರ್ಷಿತಾಃ ।

ತಥೈವ ಯಾತನಾ ಭೋಗ್ಯಾಃ ಕಿಮಿದಾನೀಂ ಪರಾಙ್ಮುಖಾಃ ॥೨೭॥

“ನಿನಗ ಮೊದಲೆ ಅತ್ಯಂತ ಹರ್ಷಿತರಾಗಿ ಪಾಪಗಳ ಮಾಡಿದ್ದಿ. ಹಾಗೇ ಈಗ ಯಾತನೆಗಳ ಅನುಭವುಸಿ. ಈಗ ಎತಕೆ ಮೋರೆ ತಿರುಗುಸುತ್ತಿರಿ ?”

ಕೃತ್ಯಾನಿ ಯಾನಿ ಪಾಪಾನಿ ಯುಷ್ಮಭಿಃ ಸುಬಹೂನ್ಯಪಿ ।

ತಾನಿ ಪಾಪಾನಿ ದುಃಖಸ್ಯ ಕಾರಣಂ ಚ ನ ವಂಚನಾ ॥೨೮॥

“ನಿನನ್ನಿಂದ  ಬಹಳವಾಗಿ ಏವ ಪಾಪಗಳನ್ನು  ಮಾಡಲ್ಪಟ್ಟತ್ತೋ ಆ ಪಾಪಗಳೇ ಈಗ ದುಃಖದ ಕಾರಣಗಳ . ಅದರಲ್ಲಿ ವಂಚನೆ ಏನೂ ಇಲ್ಲವೆ "

ಮೂರ್ಖೇsಪಿ ಪಂಡಿತೇ ವಾಪಿ ದರಿದ್ರೇ ವಾ ಶ್ರಿಯಾನ್ವಿತೇ ।

ಸಬಲೇ ನಿರ್ಬಲೇ ವಾಪಿ ಸಮವರ್ತೀ ಯಮಃ ಸ್ಮೃತಃ ॥೨೯॥

“ಮೂರ್ಖನಾಗಲೀ, ಪಂಡಿತನಾಗಲಿ, ದರಿದ್ರನಾಗಲಿ ಧನವಂತನಾಗಲಿ, ಬಲವಂತನಾಗಲಿ ಬಲಹೀನನಾಗಿರಲಿ ಯಮಧರ್ಮರಾಜ ಸಮಾನ ಭಾವನೆಯಿಂದ  ವರ್ತಿಸುತ್ತನೆ ಎಂದು ಹೇಳಿದ ವಿಷಯ”.

ಚಿತ್ರಗುಪ್ತಸ್ಯೇತಿ ವಾಕ್ಯಂ ಶ್ರುತ್ವಾ ತೇ ಪಾಪಿನಸ್ತದಾ ।

ಶೋಚಂತಃ ಸ್ವಾನಿ ಕರ್ಮಾಣಿ ತೂಷ್ಣೀಂ ತಿಷ್ಠಂತಿ ನಿಶ್ಚಲಾಃ ॥೩೦॥

ಚಿತ್ರಗುಪ್ತನ ಈ ಮಾತುಗಳ ಕೇಳಿ ಆ ಪಾಪಿಗಳು ತಾವು ಮಾಡಿದ ಕರ್ಮಗಳ ಶೋಕಿಸಿಕೋಂಡು ನಿಶ್ಯಬ್ದರಾಗಿ ನಿಶ್ಚಲರಾಗಿ ನಿottu ಬಿಟ್ಟರು 

ಧರ್ಮರಾಜೋsಪಿ ತಾನ್ ದೃಷ್ಟ್ವಾ ಚೋರವನ್ನಿಶ್ಚಲಾನ್ ಸ್ಮಿತಾನ್ ।

ಆಜ್ಞಾಪಯತಿ ಪಾಪಾನಾಂ ಶಾಸ್ತಿಂ ಚೈವ ಯಥೋಚಿತಾಮ್ ॥೩೧॥

ಕಲ್ಲುಗಳಾಗೆ ನಿಶ್ಚಲರಾಗಿ ನಿಂತಿದ್ದರು  ಅವರನ್ನ ಯಮಧರ್ಮರಾಯ ನೋಡಿ, ಅವರ ಪಾಪಕ್ಕೆ 

ಯಥೋಚಿತವಾದ ಶಿಕ್ಷೆಯ ಆಜ್ಞಾಪಿಸುತ್ತನೆ 


ತತಸ್ತೇ ನಿರ್ದಯಾ ದೂತಾಸ್ತಾಡಯಿತ್ವಾ ವದಂತಿ ಚ ।

ಗಚ್ಛ ಪಾಪಿನ್ ಮಹಾಘೋರಾನ್ನರಕಾನತಿಭೀಷಣಾನ್ ॥೩೨॥

ಮತ್ತೆ ನಿರ್ದಯಿಗಳಾದ ಆ ಯಮದೂತರು ಬಡಿದು ಹೇಳುತ್ತರೆ – ಏ ಪಾಪಾತ್ಮನೇ, ಘೋರವಾದ ಅತಿ ಭಯಂಕರವಾದ ನರಕಕ್ಕೆ ಹೋಗು”.

ಯಮಾಜ್ಞಾಕಾರಿಣೋ ದೂತಾಃ ಪ್ರಚಂಡ ಚಂಡಕಾದಯಃ ।

ಏಕಪಾಶೇನ ತಾನ್ಬದ್ಧ್ವಾ ನಯಂತಿ ನರಕಾನ್ಪ್ರತಿ ॥೩೩॥

ಯಮಧರ್ಮರಾಯನ ಆಜ್ಞಾನುವರ್ತಿಗಳು ಆದ ಪ್ರಚಂಡ ಚಂಡಕ ಮೊದಲಾದ ದೂತರುಗಳು , ಒಂದೇ ಪಾಶದಿಂದ ಅವರ ಕಟ್ಟಿ ಘೋರ ನರಕದ ಕಡೇಗೆ ಕರ್ಕಂಡು ಹೋಗುತ್ತಾರೆ 

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...