ಜಗದ್ಗುರು ರೇವಣಾರಾಧ್ಯ
(ರೇವಣಸಿದ್ಧ)ರು - ಶ್ರೀ ಕೊಲನುಪಾಕದ (ಕೊಲ್ಲಿಪಾಕಿ) ಶ್ರೀ ಸೋಮೇಶ್ವರ ಶಿವಲಿಂಗದಿಂದ ಆವಿರ್ಭವಿಸಿದ ಶ್ರೀ ಜಗದ್ಗುರು ರೇವಣಾರಾಧ್ಯರು ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾ ಬಂದಿದ್ದಾರೆ. ಕೃತಯುಗದಲ್ಲಿ ಇವರಿಗೆ ಶ್ರೀ ಏಕಾಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ಶ್ರೀ ಏಕವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀ ರೇಣುಕ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ರೇವಣಾರಾಧ್ಯ ಅಥವಾ ಶ್ರೀ ರೇವಣಸಿದ್ಧ ಎಂಬ ಹೆಸರುಗಳಿದ್ದವೆಂದು 'ಸುಪ್ರಭೇದಾಗಮಾಂತರ್ಗತ ಪಂಚಾಚಾರ್ಯ ಪಂಚಮೋತ್ಪತ್ತಿ ಪ್ರಕರಣ'ದ ಪುಟ-2ರಲ್ಲಿ ಮತ್ತು 'ವೀರಶೈವ ಸದಾಚಾರ ಸಂಗ್ರಹ'ದ ಪ್ರಥಮ ಪ್ರಕರಣದಲ್ಲಿ ಪ್ರತಿಪಾದಿಸಲ್ಪಟ್ಟಿದೆ.
ಅಥ ತ್ರಿಲಿಂಗವಿಷಯೇ ಕುಲ್ಯಪಾಕಾಭಿದೇ ಸ್ಥಲೇ | ಸೋಮೇಶ್ವರ ಮಹಾಲಿಂಗಾತ್ ಪ್ರಾದುರಾಸೀತ್ ಸ ರೇಣುಕಃ || (ಸಿ.ಶಿ. 4-1)
ಸಿದ್ಧಾಂತ ಶಿಖಾಮಣಿಯ ಈ ಉಕ್ತಿಗನುಸಾರವಾಗಿ ದ್ವಾಪರಯುಗದ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರು ಕೊಲ್ಲಿಪಾಕಿ ಕ್ಷೇತ್ರದ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಪ್ರಾದುರ್ಭವಿಸಿ, ಮಲಯ ಪರ್ವತದಲ್ಲಿ ವಾಸಿಸುತ್ತಿದ್ದ ಮಹಾಮಹಿಮರಾದ ಶ್ರೀ ಅಗಸ್ತ್ಯ ಮಹರ್ಷಿಗಳಿಗೆ ವೀರಶೈವ ಸಿದ್ಧಾಂತವನ್ನು ಉಪದೇಶಿಸಿದರು. ಆ ಉಪದೇಶವನ್ನೇ ಶ್ರೀಶಿವಯೋಗಿ ಶಿವಾಚಾರ್ಯರು ಸಂಗ್ರಹಿಸಿ ಬರೆದಿಟ್ಟಿದ್ದಾರೆ. ಆ ಸಂಗ್ರಹವೇ ಇಂದು ಸಿದ್ಧಾಂತ ಶಿಖಾಮಣಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಆಚಾರ್ಯರು ಧರ್ಮಪ್ರಚಾರಕ್ಕಾಗಿ ಮಲಯ ಪರ್ವತದಲ್ಲಿಯೇ ಒಂದು ಪೀಠವನ್ನು ಸಂಸ್ಥಾಪಿಸಿದರು. ಅದು ಇಂದು 'ವೀರಸಿಂಹಾಸನ' ಇಲ್ಲವೇ 'ರಂಭಾಪುರೀ ಪೀಠ' ಎಂಬ ಹೆಸರಿನಿಂದ ಕನಾ೯ಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಪ್ರಸಿದ್ಧವಾಗಿದೆ. ಈ ಪೀಠದ ಆಚಾರ್ಯರು ಶ್ರೀ ರೇಣುಕ ಶಾಖಾ ಮತ್ತು ವೀರಗೋತ್ರದ ಅಧಿಪತಿಗಳಾಗಿದ್ದಾರೆ.
ತಸ್ಯೇತಿ ವಚನಂ ಶ್ರುತ್ವಾ ರಾಕ್ಷಸೇಂದ್ರಸ್ಯ ಧೀಮತಃ | ತಥೇತಿ ಪ್ರತಿಸುಶ್ರಾವ ಸರ್ವಜ್ಞೋ ಗಣನಾಯಕಃ || ತತ್ರ ಸಂತುಷ್ಟಚಿತ್ತಸ್ಯ ಪೌಲಸ್ತ್ಯಸ್ಯೇಷ್ಟ ಸಿದ್ಧಿಯೇ | ಕೋಟಿತ್ರಯಂ ತು ಲಿಂಗಾನಾಂ ಯಥಾಶಾಸ್ತ್ರಂ ಯಥಾವಿಧಿ || ತ್ರಿಕೋಟ್ಯಾಚಾರ್ಯ ರೂಪೇಣ ಸ್ಥಾಪಿತಂ ತೇನ ತತ್ಕ್ಷಣೇ | (ಸಿ.ಶಿ.21/30-31)
ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿಯ ಈ ಶ್ಲೋಕಗಳ ಆಧಾರದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಭೀಷಣನ ಪ್ರಾರ್ಥನಾನುಸಾರವಾಗಿ ಏಕಕಾಲದಲ್ಲಿಯೇ ಮೂರುಕೋಟಿ ಗುರುರೂಪವನ್ನು ಧರಿಸಿ, ಮೂರುಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದರೆಂದು ತಿಳಿದುಬರುತ್ತದೆ.
ಯುದ್ಧಭೂಮಿಯಲ್ಲಿ ಶ್ರೀರಾಮಚಂದ್ರನ ಬಾಣಗಳಿಂದ ಆಹತನಾಗಿ ತನ್ನ ಪ್ರಾಣಬಿಡುವ ಪೂರ್ವದಲ್ಲಿ ರಾವಣನು-
ನವಕಂ ಕೋಟಿಲಿಂಗಾನಾಂ ಪ್ರತಿಷ್ಠಾಪ್ಯಮಿಹ ಸ್ಥಲೇ | ಇತಿ ಸಂಕಲ್ಪಿತಂ ಪೂರ್ವ ಮಯಾತದವಶಿಷ್ಯತೇ || ಕೋಟಿಷಟ್ಕಂ ತು ಲಿಂಗಾನಾಂ ಮಯಾ ಸಾಧು ಪ್ರತಿಷ್ಠಿತಂ | ಕೋಟಿತ್ರಯಂ ತು ಲಿಂಗಾನಾಂ ಸ್ಥಾಪನೀಯಮತಸ್ತ್ವಯಾ || (ಸಿ.ಶಿ. 21/24-25)
ಹೇ ತಮ್ಮನಾದ ಪ್ರಿಯ ವಿಭೀಷಣನೇ! ಒಂಭತ್ತು ಕೋಟಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಬೇಕೆಂದು ನಾನು ಸಂಕಲ್ಪವನ್ನು ಮಾಡಿ ಆರು ಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದ್ದೇನೆ. ಆದರೆ ನನ್ನ ಸಂಕಲ್ಪದ ಪ್ರಕಾರ ಇನ್ನೂ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸುವುದಿದೆ. ಅವುಗಳನ್ನು ನೀನು ಪ್ರತಿಷ್ಠಾಪಿಸು ಎಂಬುದಾಗಿ ಹೇಳಿ ಅಸುನೀಗಿದನು. ಅಣ್ಣನ ಸಂಕಲ್ಪವನ್ನು ಪೂರ್ಣ ಮಾಡುವುದು ಹೇಗೆಂದು ಬಹುದಿನಗಳಿಂದ ವಿಭೀಷಣನು ಚಿಂತಿಸುತ್ತಿರುವಾಗ, ಅವನ ಪುಣ್ಯವೇ ಮೂರ್ತಿರೂಪ ತಾಳಿ ಬಂದಂತೆ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಬರುತ್ತಾರೆ. ಆಕಾಶಮಾರ್ಗವಾಗಿ ಬಂದ ಅವರ ಮಹಿಮೆಯನ್ನರಿತ ವಿಭೀಷಣನು ವಿಧಿವತ್ತಾಗಿ ಅವರ ಪಾದಪೂಜೆಯನ್ನು ಮಾಡಿ, ತನ್ನ ಅಣ್ಣನ ಸಂಕಲ್ಪವನ್ನು ನಿವೇದಿಸಿಕೊಂಡಾಗ, ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಅದೇ ಕ್ಷಣದಲ್ಲಿ ಮೂರುಕೋಟಿ ಆಚಾರ್ಯರ ರೂಪವನ್ನು ಧರಿಸಿ, ಶಿವಲಿಂಗಗಳನ್ನು ಏಕಕಾಲದಲ್ಲಿಯೇ ಸ್ಥಾಪಿಸಿ, ವಿಭೀಷಣನಿಗೆ ಅಭಯ, ಆಶೀರ್ವಾದಗಳನ್ನಿತ್ತು, ಕೆಲವು ದಿವಸ ಗುಪ್ತವಾಗಿಯೂ ಮತ್ತೆ ಕೆಲವು ದಿವಸ ಪ್ರಕಟವಾಗಿಯೂ ಭೂಮಂಡಲದಲ್ಲೆಲ್ಲ ಸಂಚರಿಸಿ ತಾವು ಅವತರಿಸಿದ ಕಾರ್ಯವು ಪೂರ್ಣವಾದೊಡನೆ ಪುನಃ ಕೊಲ್ಲಿಪಾಕಿ ಕ್ಷೇತ್ರಕ್ಕೆ ದಯಮಾಡಿಸಿ ಅದೇ ಸೋಮೇಶ್ವರ ಶಿವಲಿಂಗದಲ್ಲಿಯೇ ಲೀನವಾದರು.
ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಹೋಗಿ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ ವಿಷಯ ಕಾಲ್ಪನಿಕ ಪೌರಾಣಿಕ ಕಥೆಯಲ್ಲ. ಸಿಂಹಳದ ಜಾಫ್ನಾದಿಂದ 15 ಕಿ.ಮೀ. ದೂರವಿರುವ ಕಿರುಮಲಾಯ್ ಎಂಬ ಗ್ರಾಮದಲ್ಲಿ ಈಗಲೂ ಇರುವ ರೇಣುಕಾಶ್ರಮ ಮತ್ತು ರೇಣುಕವನ ಮಠಗಳು ಹಾಗೂ ಅಲ್ಲಿರುವ ನೂರಾರು ವೀರಶೈವರ ಮನೆತನಗಳು ಐತಿಹಾಸಿಕ ಘಟನೆಯ ಪ್ರತ್ಯಕ್ಷ ನಿದರ್ಶನಗಳಾಗಿವೆ.
ಬೆಂಗಳೂರಿನ ದಾರುಕಾಚಾರ್ಯ ಆಶ್ರಮದ ಶ್ರೀ ವೇ. ವೀರಯ್ಯ ಸ್ವಾಮಿ ಶಾಸ್ತ್ರಿಮಠ ಇವರು 1969ನೇ ಜೂನ್ ತಿಂಗಳಲ್ಲಿ ಸಿಂಹಳಕ್ಕೆ ಹೋಗಿ, ಅಲ್ಲಿಯ ರೇಣುಕಾಶ್ರಮ, ರೇಣುಕವನ ಹಾಗೂ ತಾನಕೇಸಂತುರೈಯಲ್ಲಿಯ ಶ್ರೀ ಗುರು ವೀರಭದ್ರ ದೇವಾಲಯಗಳ ಸಂದರ್ಶನವನ್ನು ಮಾಡಿ, ಅಲ್ಲಿಯ ಅನೇಕ ವೀರಶೈವರ ಜೊತೆ ಸಂದರ್ಶನ ಮಾಡಿ ಅಲ್ಲಿಂದ ಬರುವಾಗ ತಾಮ್ರಪಟದಲ್ಲಿ ಚಿತ್ರಿತವಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಲಿಂಗೋದ್ಭವ ಮೂರ್ತಿಯನ್ನು ತಂದಿರುವ ವಿಷಯಗಳು ನಿಜವಾಗಿಯೂ ಇತಿಹಾಸತಜ್ಞರ ಜಿಜ್ಞಾಸೆಯನ್ನು ಕೆರಳಿಸದೆ ಇರಲಾರವು.
ಶ್ರೀಮದ್ರೇವಣಸಿದ್ಧಸ್ಯ ಕುಲ್ಯಪಾಕಪುರೋತ್ತಮೇ | ಸೋಮೇಶಲಿಂಗಾಜ್ಜನನಮಾವಾಸಃ ಕದಲೀಪುರೇ ||
ಎಂಬ ಸ್ವಾಯಂಭುವ ಆಗಮದ ಪ್ರಮಾಣಾನುಸಾರವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರೇ ಪುನಃ ಕಲಿಯುಗದ ಆರಂಭದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರೆಂಬ ಹೆಸರಿನಿಂದ ಅವತರಿಸಿ, 1400 ವರ್ಷಗಳವರೆಗೆ ವೀರಶೈವರ ತತ್ತ್ವೋಪದೇಶವನ್ನು ಮಾಡುತ್ತ ಅನಂತಲೀಲೆಗಳನ್ನು ಮಾಡಿದ್ದಾರೆ. ಇವರೇ ಶ್ರೀ ಜಗದ್ಗುರು ಆದಿಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರಲಿಂಗ ಹಾಗೂ ರತ್ನಗರ್ಭ ಗಣಪತಿಯನ್ನು ದಯಪಾಲಿಸಿ ಅನುಗ್ರಹಿಸಿದ್ದಾರೆ. ಆದಿಶಂಕರರ ಚರಿತ್ರೆಯನ್ನು ಪ್ರತಿಪಾದಿಸುವ ಅನೇಕ ಗ್ರಂಥಗಳಲ್ಲಿ ಗುರುವಂಶ ಕಾವ್ಯವೂ ಒಂದಾಗಿದೆ. ಇದು ಶೃಂಗೇರಿ ಪೀಠದ ಆಸ್ಥಾನ ವಿದ್ವಾಂಸರಾದ ಪಂಡಿತ ಕಾಶೀ ಲಕ್ಷ್ಮಣ ಶಾಸ್ತ್ರಗಳಿಂದ ವಿರಚಿತವಾಗಿದೆ. ಇದು ವಾಣೀವಿಲಾಸ ಮುದ್ರಣಾಲಯ ಶ್ರೀರಂಗಂ ದಿಂದ ಮುದ್ರಿತವಾಗಿದೆ. ಈ ಪುಸ್ತಕದಲ್ಲಿ-
ಶ್ರೀಚಂದ್ರಮೌಳೀಶ್ವರಲಿಂಗಮಸ್ಮೈ ಸದ್ರತ್ನಗರ್ಭಂ ಗಣನಾಯಕಂ ಚ| ಸ ವಿಶ್ವರೂಪಾಯ ಸುಸಿದ್ಧದತ್ತಂ ದತ್ವಾನ್ಯಗಾದೀಚ್ಚಿರಮರ್ಚಯೇತಿ || (ಗುರುವಂಶ ಕಾವ್ಯ 3-33)
ಶ್ರೀ ಜಗದ್ಗುರು ಆದಿಶಂಕರಾಚಾರ್ಯರು ಶೃಂಗೇರಿಯಿಂದ ಕಾಂಚಿಗೆ ಬರುವ ಸಮಯದಲ್ಲಿ ತಮ್ಮ ಮೊದಲನೆಯ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರನ್ನು ಕರೆದು ಶ್ರೀ ರೇವಣಸಿದ್ಧ ಶಿವಯೋಗಿಗಳಿಂದ ಪ್ರಾಪ್ತವಾದ ಶ್ರೀ ಚಂದ್ರಮೌಳೀಶ್ವರಲಿಂಗ ಮತ್ತು ರತ್ಮಗರ್ಭ ಗಣಪತಿಯನ್ನು ಅವರಿಗೆ ಅರ್ಪಿಸಿ, ಅವುಗಳನ್ನು ಪೂಜಿಸುವ ಹೊಣೆಯನ್ನು ಹೊರಿಸಿದರು ಎಂಬ ವಿಷಯವು ಪ್ರತಿಪಾದಿಸಲ್ಪಟ್ಟಿದೆ. ಮೇಲೆ ಹೇಳಿದ ಈ ಶ್ಲೋಕದ ವ್ಯಾಖ್ಯಾನವನ್ನು ಬರೆಯುವಾಗ ಗ್ರಂಥಕಾರರೇ ಸುಸಿದ್ಧದತ್ತಂ ಸುಸಿದ್ಧೇನ ರೇವಣಸಿದ್ಧ ಮಹಾಯೋಗಿನಾ ದತ್ತಂ ಶ್ರೀ ಚಂದ್ರಮೌಳೀಶ್ವರಲಿಂಗಮ್ ಎಂದು ಇಲ್ಲಿ 'ಸುಸಿದ್ಧ' ಶಬ್ದದ ಅರ್ಥವನ್ನು ರೇವಣಸಿದ್ಧ ಮಹಾಯೋಗಿ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಇಂದಿನವರೆಗೆ ಶ್ರೀ ಶೃಂಗೇರಿ ಪೀಠದಲ್ಲಿ ಪೂಜೆಗೊಳ್ಳುತ್ತಿರುವ ಶ್ರೀ ಚಂದ್ರಮೌಳೀಶ್ವರಲಿಂಗವು ವೀರಶೈವ ಶಿವಾಚಾರ್ಯರಾದ ಶ್ರೀ ರೇವಣಸಿದ್ಧರಿಂದ ಕೊಡಲ್ಪಟ್ಟದ್ದೆಂದು ತಿಳಿದುಬರುತ್ತದೆ.
ಜಗದ್ಗುರು ಮರುಳಾರಾಧ್ಯರು ಃ
ಶಿವನ ವಾಮದೇವಮುಖ ಸಂಜಾತರಾದ ಶ್ರೀ ಜಗದ್ಗುರು ಮರುಳಾರಾಧ್ಯರು ಶಿವನ ಅಪ್ಪಣೆಯ ಮೇರೆಗೆ ವೀರಶೈವ ಮತ ಸಂಸ್ಥಾಪನೆಗಾಗಿ ಕ್ಷಿಪ್ರಾನದಿಯ ತಟದಲ್ಲಿರುವ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಿಂದ ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾ
ಬಂದಿದ್ದಾರೆ. ಕೃತಯುಗದಲ್ಲಿ ದ್ವ್ಯಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ದ್ವಿವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀದಾರುಕ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಎಂಬ ಹೆಸರುಗಳು ಇವರಿಗೆ ಇದ್ದುದಾಗಿ (ಸುಪ್ರಭೇದಾಗಮಾಂತರ್ಗತ ಪಂಚಾಚಾರ್ಯ ಪಂಚಮೋತ್ಪತ್ತಿ ಪ್ರಕರಣ, ಪುಟ-2) (ವೀರಶೈವ ಸದಾಚಾರ ಸಂಗ್ರಹ 1/37-39); (ಹಿಂದುತ್ವ, ಪುಟ-695) ಗ್ರಂಥಾಧಾರಗಳಿಂದ ತಿಳಿದುಬರುತ್ತದೆ.
ಈ ಪೀಠದ ದ್ವಾಪರಯುಗದ ಆಚಾರ್ಯರಾದ ಶ್ರೀ ಜಗದ್ಗುರು ದಾರುಕಾಚಾರ್ಯರು ನೈಮಿಷಾರಣ್ಯದಲ್ಲಿ ವಾಸಮಾಡುತ್ತಿರುವ ಶ್ರೀ ದಧೀಚಿ ಮಹಷರ್ಿಗಳಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಸಕಲ ಶಿಷ್ಯಸಮೇತರಾದ ಅವರನ್ನು ಕೃತಾರ್ಥರನ್ನಾಗಿ ಮಾಡಿದರು.
ತದ್ವನ್ಮರುಳಸಿದ್ಧಸ್ಯ ವಟಕ್ಷೇತ್ರೇ ಮಹತ್ತರೇ |
ಸಿದ್ಧೇಶಲಿಂಗಾಜ್ಜನನಂ ಸ್ಥಾನಮುಜ್ಜಯಿನೀಪುರೇ ||
ಸ್ವಾಯಂಭುವಾಗಮದ ಈ ವಚನಾನುಸಾರವಾಗಿ ಕಲಿಯುಗದ ಆಚಾರ್ಯರಾದ ಶ್ರೀ ಜಗದ್ಗುರು ಮರುಳಾರಾಧ್ಯರು, ಅಂದು ಮಾಳವ ದೇಶವೆಂದು ಪ್ರಸಿದ್ಧವಾದ ಇಂದಿನ ಮಧ್ಯಪ್ರದೇಶದ ಕ್ಷಿಪ್ರಾ ನದಿಯ ದಡದಲ್ಲಿರುವ ಮಹಾಕಾಲ ಉಜ್ಜಯಿನಿಯ ವಟಕ್ಷೇತ್ರದ ಸುಪ್ರಸಿದ್ಧವಾದ ಶ್ರೀ ಸಿದ್ಧೇಶ್ವರ ಮಹಾಲಿಂಗದಿಂದ ಪ್ರಾದುರ್ಭವಿಸಿ, ವೀರಶೈವ ಧಮರ್ೋಪದೇಶಕ್ಕಾಗಿ ಒಂದು ಪೀಠವನ್ನು ಸಂಸ್ಥಾಪಿಸಿದರು. ಅದುವೇ ಸದ್ಧರ್ಮ ಸಿಂಹಾಸನವೆಂಬ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆಯಿತು.
ಕಾಲಕಾಲನಾದ ಮಹಾಕಾಲೇಶ್ವರ ಜ್ಯೋತಿಲರ್ಿಂಗದಿಂದಲೂ, ಭಕ್ತರ ಪಾಪವನ್ನು ಕ್ಷಿಪ್ರದಲ್ಲಿಯೇ ನಾಶಪಡಿಸುವ ಮಹಿಮೆಯಿಂದ ಕೂಡಿದ ಕ್ಷಿಪ್ರಾ ನದಿಯಿಂದಲೂ, ಸದ್ಧರ್ಮವನ್ನು ಉಪದೇಶಿಸುವ ಈ ಗುರುಪೀಠದಿಂದಲೂ ಪರಮ ಪವಿತ್ರವಾದ ಈ ಉಜ್ಜಯಿನಿಯಲ್ಲಿ ಶ್ರೌತಪಾಲ ಮತ್ತು ಭಾನುಮತಿ ಎಂಬ ರಾಜದಂಪತಿಗಳು ಪ್ರಜಾಪಾಲನೆಯನ್ನು ಮಾಡುತ್ತಿದ್ದರು.
ಒಂದು ಸಾರಿ ಶ್ರೀ ಶ್ರೌತಪಾಲ ರಾಜನು ಸ್ವರ್ಗದ ಅಭಿಲಾಷೆಯಿಂದ ಅಶ್ವಮೇಧ ಯಾಗವನ್ನು ಮಾಡಲುದ್ಯುಕ್ತನಾದಾಗ, ಯಜ್ಞದಲ್ಲಿ ಸಂಭವಿಸಬಹುದಾದ ಪ್ರಾಣಿಹಿಂಸೆ, ಮಾಂಸಭಕ್ಷಣ, ಸುರಾಪಾನ ಮತ್ತು ವ್ಯಭಿಚಾರಾದಿಗಳ ಬಗ್ಗೆ ರಾಜನಿಗೆ ಅರಿವನ್ನುಂಟುಮಾಡಿದ ಶ್ರೀ ಉಜ್ಜಯಿನೀ ಸದ್ಧರ್ಮ ಸಿಂಹಾಸನಾಧೀಶ್ವರರಾದ ಶ್ರೀ ಜಗದ್ಗುರು ಮರುಳಾರಾಧ್ಯರು ರಾಜದಂಪತಿಗಳಿಗೆ ಶಿವದೀಕ್ಷೆಯನ್ನು ಅನುಗ್ರಹಿಸಿ, ಸಾತ್ವಿಕ ಪೂಜಾವಿಧಾನವನ್ನು ತಿಳಿಸಿ, ಅವರಿಗೆ ವೀರಶೈವ ಧರ್ಮದ ಪ್ರಮುಖ ತತ್ತ್ವಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳ ಅರಿವನ್ನು ಮಾಡಿಕೊಟ್ಟರು.
ನಂತರ ಹಿಮಾಲಯದ ಗಂಗಾ-ಯಮುನಾ ನದಿಗಳ ಮಧ್ಯಭಾಗದಲ್ಲಿ ವಿರಾಜಿಸುವ ದಾರುಕವನಕ್ಕೆ ದಯಮಾಡಿಸಿ ಅಲ್ಲಿಯ ಋಷಿಮುನಿಗಳಿಗೆಲ್ಲ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ, ಅಲ್ಲಿಂದ ಕಾಶೀಕ್ಷೇತ್ರಕ್ಕೆ ದಯಮಾಡಿಸುತ್ತಾರೆ. ಕಾಶಿಯಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯರನ್ನು ಸಂದಶರ್ಿಸಿ ಕಾಶಿಯಲ್ಲಿಯೇ 400 ವರ್ಷಗಳವರೆಗೆ ಯೋಗಸಮಾಧಿಯಲ್ಲಿ ಲೀನರಾಗುತ್ತಾರೆ. ಶಿವಯೋಗ ಸಮಾಧಿಯಿಂದ ಎಚ್ಚರಾದ ಬಳಿಕ, ಶ್ರೀ ಜಗದ್ಗುರು ವಿಶ್ವಾರಾಧ್ಯರ ಅಪ್ಪಣೆಯನ್ನು ಪಡೆದು ಶ್ರೀಶೈಲ ಮಲ್ಲಿಕಾಜರ್ುನ ದೇವಾಲಯಕ್ಕೆ ಹೋಗಿ ಅಲ್ಲಿಯ ಸೂರ್ಯಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪಂಡಿತಾರಾಧ್ಯರೊಡನೆ ಧಾಮರ್ಿಕ ಪಯರ್ಾಲೋಚನೆಯನ್ನು ಮಾಡಿ ಅಲ್ಲಿಯ ಅನೇಕ ಋಷಿಮುನಿಗಳಿಗೆ ಶಿವಾದ್ವೈತ ತತ್ತ್ವವನ್ನು ಉಪದೇಶಿಸಿ ಕಾಶ್ಮೀರಕ್ಕೆ ದಯಮಾಡಿಸುತ್ತಾರೆ. ಅಲ್ಲಿ ಶ್ರೀ ಸರಸ್ವತೀ ಪೀಠವೆಂಬ ಮಠವನ್ನು ಸಂಸ್ಥಾಪಿಸಿ ಶಿವಭಕ್ತಿಯ ಪ್ರಚಾರವನ್ನು ಗೈಯುತ್ತಾರೆ. ಇವರ ಈ ಉಪದೇಶದ ಕಾರಣದಿಂದಾಗಿಯೇ ಕಾಶ್ಮೀರದಲ್ಲಿ ಶಿವಭಕ್ತಿಯು ವಿಶೇಷವಾಗಿ ಪ್ರಚಾರವಾಯಿತು.
ಮುಂದೆ ಶ್ರೀ ಜಗದ್ಗುರು ಮರುಳಾರಾಧ್ಯರು ತಮ್ಮ ಅವತಾರದ ಸಮಾಪ್ತಿಯ ಸಮಯವು ಸನ್ನಿಹಿತವಾಗಿರುವುದನ್ನು ಅರಿತು, ಶ್ರೀ ಕೇದಾರ ಕ್ಷೇತ್ರಕ್ಕೆ ದಯಮಾಡಿಸಿ, ಅಲ್ಲಿಯ ಶ್ರೀ ವೈರಾಗ್ಯ ಸಿಂಹಾಸನಾಧೀಶ್ವರರಾದ ಶ್ರೀ ಜಗದ್ಗುರು ಏಕೋರಾಮಾರಾಧ್ಯರನ್ನು ಸಂದಶರ್ಿಸುತ್ತಾರೆ. ನಂತರ ಈರ್ವರೂ ಸ್ನಾನಕ್ಕಾಗಿ ಗೌರೀಕುಂಡಕ್ಕೆ ಬಂದು, ಆ ಕುಂಡದಲ್ಲಿ ಮಿಂದು ಹೊರಬರುವಷ್ಟರಲ್ಲಿ ದಿವ್ಯಶಕ್ತಿಯೊಂದು ಆ ಕುಂಡದಿಂದ ಉದ್ಭವಿಸಿತು. ಆಗ ಉಭಯರೂ ಆ ದಿವ್ಯ ವಟುವನ್ನು ನೋಡಿ ಪರಮಾನಂದಗೊಂಡರು. ಆಗ ಏಕೋರಾಮರು ಶ್ರೀ ನಂದೀಶ್ವರನೇ ಈ ರೂಪದಿಂದ ಅವತರಿಸಿರುವನು. ಈ ವಟುವಿಗೆ ಮುಕ್ತಿಮುನಿ ಎಂದು ನಾಮಕರಣವನ್ನು ಮಾಡುತ್ತೇವೆ. ಈತನೇ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಉತ್ತರಾಧಿಕಾರಿಯಾಗಲಿ ಎಂಬುದಾಗಿ ಅಪ್ಪಣೆ ಕೊಡಿಸಿದರು.
ನಂತರ ಎಲ್ಲರೂ ಉಜ್ಜಯಿನಿ ಕ್ಷೇತ್ರಕ್ಕೆ ದಯಮಾಡಿಸಿ, ಅಕ್ಷಯ ತೃತೀಯ ಶುಭಮುಹೂರ್ತದಲ್ಲಿ ಶ್ರೀ ಮುಕ್ತಿಮುನಿಗಳಿಗೆ ಪಟ್ಟಾಧಿಕಾರವನ್ನು ವಹಿಸಿ, ಸ್ರೀ ಜಗದ್ಗುರು ಮರುಳಾರಾಧ್ಯರು ಪುನಃ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಲ್ಲಿಯೇ ಲೀನರಾದರು.
ಶ್ರೀ ಜಗದ್ಗುರು ಮುಕ್ತಿಮುನಿಗಳು ಪಟ್ಟಾಧಿಕಾರವನ್ನು ಹೊಂದಿ 300 ವರ್ಷಗಳ ಪರ್ಯಂತ ಸದ್ಧರ್ಮ ಪೀಠವನ್ನು ಅಲಂಕರಿಸಿ, ವೀರಶೈವ ಮತವನ್ನು ಸಾಕಷ್ಟು ಪ್ರಚಾರಗೊಳಿಸಿ, ತಮ್ಮ ಅಂತಿಮ ಸಮಯದಲ್ಲಿ ಶ್ರೀ ಜಗದ್ಗುರು ಸಿದ್ಧಮುನಿಗಳಿಗೆ ಪೀಠಾಧಿಕಾರವನ್ನು ಒಪ್ಪಿಸಿ ಲಿಂಗೈಕ್ಯರಾದರು.
ಹೀಗೆ ಈ ಪೀಠ ಪರಂಪರೆಯಲ್ಲಿ ಶ್ರೀ ಜಗದ್ಗುರು ಸಿದ್ಧಮುನಿಗಳು 200 ವರ್ಷ, ಶ್ರೀ ಜಗದ್ಗುರು ಶಿವಮುನೀಂದ್ರ ಸ್ವಾಮಿಗಳು 125 ವರ್ಷ, ಶ್ರೀ ಜಗದ್ಗುರು ಶಾಂತಮುನಿಗಳು 70 ವರ್ಷ, ಶ್ರೀ ಜಗದ್ಗುರು ಭವಭೂತಿ ಮುನಿಗಳು 100 ವರ್ಷ ಸಿಂಹಾಸನಾರೂಢರಾಗಿದ್ದರು. ಶ್ರೀ ಜಗದ್ಗುರು ಭವಭೂತಿ ಮುನಿಗಳು ಮಹಾತಪಸ್ವಿಗಳೂ, ಘನ ವಿದ್ವಾಂಸರೂ ಆಗಿದ್ದರು. ಉಜ್ಜಯಿನಿಯ ಭೋಜರಾಜ ಹಾಗೂ ಅವನ ಆಸ್ಥಾನ ಕವಿಗಳಾದ ಕಾಳಿದಾಸಾದಿಗಳಿಂದ ಇವರು ಮನ್ನಣೆಯನ್ನು ಪಡೆದವರಾಗಿದ್ದರು. ತಮ್ಮ ತರುವಾಯ ಶ್ರೀ ಜಗದ್ಗುರು ಇಮ್ಮಡಿ ಮುಕ್ತಿಮುನಿಗಳಿಗೆ ಪೀಠಾಧಿಕಾರವನ್ನು ಕೊಟ್ಟು ಲಿಂಗೈಕ್ಯರಾದರು.
ಇದೇ ಪ್ರಕಾರ ಶ್ರೀ ಜಗದ್ಗುರು ಇಮ್ಮಡಿ ಮುಕ್ತಿಮುನಿಗಳು 50 ವರ್ಷ, ಶ್ರೀಜಗದ್ಗುರು ಶಕ್ತಿಮುನಿಗಳು 200ವರ್ಷ. ಶ್ರೀ ಜಗದ್ಗುರು ಇಮ್ಮಡಿ ಸಿದ್ಧಮುನಿಗಳು 40 ವರ್ಷ, ಶ್ರೀ ಜಗದ್ಗುರು ಇಮ್ಮಡಿ ಶಾಂತಮುನಿಗಳು 90 ವರ್ಷ, ಶ್ರೀ ಜಗದ್ಗುರು ಮುಮ್ಮಡಿ ಸಿದ್ಧಮುನಿಗಳು 55 ವರ್ಷ, ಶ್ರೀ ಜಗದ್ಗುರು ಸಾಂಬಮುನಿಗಳು 100 ವರ್ಷ, ಶ್ರೀ ಜಗದ್ಗುರು ಇಮ್ಮಡಿ ಶಿವಮುನಿಗಳು 30 ವರ್ಷ ಮತ್ತು ಶ್ರೀ ಜಗದ್ಗುರು ಈಶಾನ್ಯಮುನಿಗಳು 75 ವರ್ಷ ಧರ್ಮ ಸಿಂಹಾಸನಾಸೀನರಾಗಿ ಮಧ್ಯಪ್ರದೇಶದಲ್ಲಿ ವೀರಶೈವ ಧರ್ಮವನ್ನು ಬಹಳಷ್ಟು ಪ್ರಚಾರಗೊಳಿಸಿದರು.
ಇವರ ತರುವಾಯ ಶ್ರೀ ಜಗದ್ಗುರು ಶಂಭುಮುನಿಗಳು ಈ ಪೀಠ ಪರಂಪರೆಯಲ್ಲಿ 15ನೆಯ ಪೀಠಾಧಿಪತಿಗಳಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಇಷ್ಟು ಹೊತ್ತಿಗೆ ಜೈನಧರ್ಮವು ಬಹಳಷ್ಟು ಪ್ರಚಾರದಲ್ಲಿತ್ತು. ಆಗ ಜೈನಧರ್ಮದವನಾದ ಶ್ರೀ ವೀರಸೇನ ರಾಜನು ವೀರಶೈವ ಧರ್ಮವನ್ನು ನಾಶಗೊಳಿಸಲು ಪಣತೊಟ್ಟವನಾಗಿದ್ದನು. ಶ್ರೀ ಜಗದ್ಗುರು ಶಂಭುಮುನಿಗಳು ಶಠೇ ಶಾಠ್ಯಂ ಸಮಾಚರೇತ್ ಎಂಬ ನೀತಿಗನುಸಾರವಾಗಿ, ರಾಜನೊಡನೆ ಪ್ರತಿಭಟಿಸಲು ಸೈನ್ಯವನ್ನು ಸಂಗ್ರಹಿಸಿ ಕೊನೆಗೆ ವೀರಸೇನ ರಾಜನೊಡನೆ ಹೋರಾಡಿ ವಿಜಯವನ್ನು ಸಂಪಾದಿಸಿದರು.
ಈ ಯುದ್ಧದಲ್ಲಿ ವಿಜಯವನ್ನು ಸಂಪಾದಿಸಿದರೂ ಶ್ರೀ ಜಗದ್ಗುರು ಶಂಭುಮುನಿಗಳಿಗೆ ಸಮಾಧಾನವಾಗಲಿಲ್ಲ. ಆಗ ಅವರು ಈ ತರಹದ ಕಲಹವೇ ಬೇಡವೆಂದು ಭಾವಿಸಿ, ಉಜ್ಜಯಿನಿಯನ್ನು ಬಿಟ್ಟು ಅಡವಿಯಲ್ಲಿ ಪ್ರಶಾಂತ ಸ್ಥಳದಲ್ಲಿ ಪರ್ಣಕುಟೀರವನ್ನು ನಿಮರ್ಿಸಿಕೊಂಡು 70 ವರ್ಷಗಳವರೆಗೆ ಧರ್ಮಕಾರ್ಯವನ್ನು ಮಾಡಿ ಕೊನೆಗೆ ತಮ್ಮ ಪ್ರೀತಿಯ ಶಿಷ್ಯರಾದ ಶ್ರೀ ಮರುಳಸಿದ್ಧರಿಗೆ ಜಗದ್ಗುರು ಪಟ್ಟಾಧಿಕಾರವನ್ನು ವಹಿಸಿ ಲಿಂಗೈಕ್ಯರಾದರು.
ಶ್ರೀ ಸದ್ಧರ್ಮ ಪೀಠದ ಸ್ಥಳಾಂತರ :
ಶ್ರೀ ಜಗದ್ಗುರು ಶಂಭುಮುನಿಗಳು ಲಿಂಗೈಕ್ಯರಾದ ನಂತರ ಶ್ರೀ ಜಗದ್ಗುರು ಮರುಳಸಿದ್ಧರು ಜೈನರಾಜರ ಉಪದ್ರವಕ್ಕಾಗಿ ಮಧ್ಯಪ್ರದೇಶದ ಉಜ್ಜಯಿನಿಯ ಪರಿಸರವನ್ನು ತ್ಯಾಗಮಾಡಿ ಶಿಷ್ಯ ಸಮೇತರಾಗಿ ಮಹಾರಾಷ್ಟ್ರದ ವಿಭಿನ್ನ ಸ್ಥಾನಗಳಲ್ಲಿ ಸಂಚರಿಸುತ್ತ ಅಲ್ಲಲ್ಲಿಯ ಭಕ್ತರ ಸಹಯೋಗ, ಸಹಕಾರಗಳಿಂದ ಮಠಗಳನ್ನು ನಿಮರ್ಿಸಿ, ಅಲ್ಲಲ್ಲಿ ಒಬ್ಬೊಬ್ಬ ಶಿಷ್ಯರನ್ನು ಇರಿಸುತ್ತ, ಪರಳಿ ಮುಂತಾದ ಜ್ಯೋತಿಲರ್ಿಂಗಗಳ ಸ್ಥಾನವನ್ನು ಸಂದಶರ್ಿಸಿ, ಕೊಲ್ಹಾಪುರ ಸಮೀಪದ ಸಿದ್ಧಗಿರಿ ಎಂಬ ಸ್ಥಾನಕ್ಕೆ ದಯಮಾಡಿಸುತ್ತಾರೆ. ಶ್ರೀ ಜಗದ್ಗುರು ಮರುಳಸಿದ್ಧರು ಹೀಗೆ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಸಂಚರಿಸಿದುದರಿಂದ ಮಹಾರಾಷ್ಟ್ರದಲ್ಲಿ ಉಜ್ಜಯಿನೀ ಶಾಖಾಮಠಗಳು ಅಧಿಕವಾಗಿರುತ್ತವೆ.
ಶ್ರೀ ಜಗದ್ಗುರು ಮರುಳಸಿದ್ಧರು ಸಿದ್ಧಗಿರಿಗೆ ಆಗಮಿಸಿದಾಗ ಅಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರ ಸಂದರ್ಶನವಾಗುತ್ತದೆ. ಇಂದಿನ ಈ ಸಿದ್ಧಗಿರಿಮಠವು ರಂಭಾಪುರಿ ಶಾಖಾಮಠವಾಗಿರುತ್ತದೆ. ಶ್ರೀ ಜಗದ್ಗುರು ಮರುಳಸಿದ್ಧರ ಮಹಾಕಾಲ ಉಜ್ಜಯಿನಿಯ ಸದ್ಧರ್ಮ ಪೀಠಕ್ಕೆ ಬಂದೊದಗಿದ ವಿಪತ್ತನ್ನರಿತ ಶ್ರೀ ಜಗದ್ಗುರು ರೇವಣಸಿದ್ಧರು ಶ್ರೀ ಜಗದ್ಗುರು ಮರುಳಸಿದ್ಧರಿಗೆ ಸಾಂತ್ವನವನ್ನು ಹೇಳಿ ಕನರ್ಾಟಕ ಪ್ರದೇಶದ ಕೊಟ್ಟೂರು ಬಳಿಯಲ್ಲಿಯೇ ಉಜ್ಜಯಿನಿ ಎಂಬ ಹೊಸ ಪಟ್ಟಣವನ್ನು ನಿಮರ್ಾಣಗೊಳಿಸಿ ಅಲ್ಲಿಯೇ ಸದ್ಧರ್ಮ ಪೀಠವನ್ನು ಪುನಃ ಸ್ಥಾಪಿಸಲು ಸಲಹೆಯನ್ನು ಕೊಡುತ್ತಾರೆ.
ಶ್ರೀ ಜಗದ್ಗುರು ರೇವಣಸಿದ್ಧರ ಆದೇಶದಂತೆ ಶ್ರೀ ಜಗದ್ಗುರು ಮರುಳಸಿದ್ಧರು ಕೊಲ್ಹಾಪುರದ ಶ್ರೀ ಮಾಯಾದೇವಿಯ ಗವರ್ಾಪಹರಣವನ್ನು ಮಾಡಿ ಅಪಾರ ಕೀತರ್ಿಯನ್ನು ಸಂಪಾದಿಸಿದರು. ಅಲ್ಲದೇ ಅಲ್ಲಿಯ ಕರಟಾಸುರನಿಗೆ ಮತ್ತು ಅವನ ಪರಿವಾರದವರಿಗೆಲ್ಲ ಶಿವದೀಕ್ಷೆಯನ್ನು ಮಾಡಿ ಅನುಗ್ರಹಿಸಿದರು. ನಂತರ ಓರಂಗಲ್ಲಿಗೆ ಹೋಗಿ ಅಲ್ಲಿಯ ಕಾಕತೀಯ ರಾಜವಂಶದ ಗಣಪತಿ ರಾಜನನ್ನು ಮತ್ತು ಹೊಸ ಕಲ್ಯಾಣದ ಶ್ರೀ ಸೋಮೇಶ್ವರ ರಾಜನನ್ನು ಕಂಡರು. ಅವರ ಸಹಾಯದಿಂದ ಶ್ರೀ ಜಕ್ಕಣಚಾರ್ಯರ ಶಿಲ್ಪಸೇವೆಯಿಂದ ಹೊಸದಾಗಿ ಸ್ಥಾಪಿಸಲ್ಪಟ್ಟ ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠವನ್ನು ನಿಮರ್ಾಣಗೊಳಿಸಿ, ಆ ಪೀಠದಲ್ಲಿ ಮೂಲ ಮರುಳಾರಾಧ್ಯರ ತರುವಾಯದ ಹದಿನಾಲ್ಕು ಜನ ಗುರುಪರಂಪರೆಯ ಮೂತರ್ಿಗಳನ್ನು ಮತ್ತು ಮೂಲ ಮರುಳಾರಾಧ್ಯರ ಒಂದು ಲಿಂಗವನ್ನೂ ಸಂಸ್ಥಾಪಿಸಿದರು. ಈ ಪೀಠದಲ್ಲಿಯ ಒಳಭಾಗವು ಅನೇಕ ಕಲಾಕೃತಿಯಿಂದ ಕೂಡಿಕೊಂಡಿದೆ. ಅಂತೆಯೇ ಹಂಪೆಯ ಗುಡಿ ಹೊರಗೆ ನೋಡಬೇಕು, ಉಜ್ಜಯಿನಿಯ ಮಠದ ಒಳಗೆ ನೋಡಬೇಕು ಎಂಬುದು ಇಂದಿಗೂ ಗಾದೆಯ ಮಾತಿನಂತಿದೆ.
ಹೀಗೆ ವಿನೂತನವಾಗಿ ನಿಮರ್ಾಣಗೊಂಡ ಕನರ್ಾಟಕದ ಉಜ್ಜಯಿನೀ ಸದ್ಧರ್ಮ ಸಿಂಹಾಸನಕ್ಕೆ ಶ್ರೀ ಜಗದ್ಗುರು ಮರುಳಸಿದ್ಧರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲಾಯಿತು ಈ ಮಂಗಲಕಾರ್ಯಕ್ಕೆ ಶ್ರೀ ಜಗದ್ಗುರು ರೇವಣಸಿದ್ಧರು, ಶ್ರೀ ಜಗದ್ಗುರು ಪಂಡಿತಾರಾಧ್ಯರು ದಯಮಾಡಿಸಿದರು ಹಾಗೂ ರಾಷ್ಟ್ರಕೂಟ, ಓರಂಗಲ್ ಪುರಿಗಳ ಭೂಪಾಲರೂ ಆಗಮಿಸಿ ತಮ್ಮ ಭಕ್ತಿಕಾಣಿಕೆಯನ್ನು ಸಮಪರ್ಿಸಿದರಲ್ಲದೇ ಭುವನೈಕಮಲ್ಲ ಶ್ರೀ ಸೋಮೇಶ್ವರನು ಸಮ್ಮಾನಪೂರ್ವಕವಾಗಿ 120 ಮಠಗಳನ್ನು ತನ್ನ ರಾಜ್ಯದಲ್ಲಿಯೇ ಉಂಬಳಿಯಾಗಿ ಕೊಟ್ಟನು.
ಈ ರೀತಿಯಾಗಿ ವೈಭವದ ಅಧಿಕಾರವನ್ನು ಹೊಂದಿದ ನಂತರ ಭಕ್ತವೃಂದದ ಮತ್ತು ಅನೇಕ ಮಹಾರಾಜರ ಬಯಕೆಗಳನ್ನು ಈಡೇರಿಸುತ್ತ ಓರಂಗಲ್ಲ, ಹಂಪೆ, ಕೂಡಲಸಂಗಮ, ಕಪ್ಪತಗುಡ್ಡ, ಹರಪುರಿ ಮುಂತಾದ ಸ್ಥಳಗಳಲ್ಲಿ ಸಂಚರಿಸಿ ವೀರಶೈವ ಧಮರ್ೋಪದೇಶವನ್ನು ಮಾಡುತ್ತಿರುವಾಗ ಬಹಳಷ್ಟು ಜೈನ ಧಮರ್ೀಯರು ಇವರಿಂದ ಲಿಂಗದೀಕ್ಷೆಯನ್ನು ಪಡೆದರು. ಶ್ರೀ ಜಗದ್ಗುರು ಮರುಳಸಿದ್ಧರು 170 ವರ್ಷಗಳವರೆಗೆ ಉಜ್ಜಯಿನಿಯ ಸದ್ಧರ್ಮ ಸಿಂಹಾಸನಾಧಿಪತಿಗಳಾಗಿದ್ದು ಕೊನೆಗೆ ಶ್ರೀ ಸಿದ್ಧಪಂಡಿತರಿಗೆ ಪಟ್ಟವನ್ನು ವಹಿಸಿ ತಾವು ಲಿಂಗೈಕ್ಯರಾದರು.


No comments:
Post a Comment