Followers

Sunday, 14 June 2020

ಗರುಡ ಪುರಾಣ ಅಧ್ಯಾಯ 7 ಭಾಗ 1

ಗರುಡ ಪುರಾಣ

ಅಧ್ಯಾಯ – 07


ಬಭ್ರುವಾಹನೇನ ಪ್ರೇತಸಂಸ್ಕಾರಃ                           


ಬಭ್ರುವಾಹನನ ಮೂಲಕ ಪ್ರೇತಸಂಸ್ಕಾರ

 


ಸೂತ ಉವಾಚ-

ಇತಿ ಶ್ರುತ್ವಾ ತು ಗರುಡಃ ಕಂಪಿತೋsಶ್ವತ್ಥ ಪತ್ರವತ್ ।

ಜನನಾಮುಪಕಾರಾರ್ಥಂ ಪುನಃ ಪಪ್ರಚ್ಛ ಕೇಶವಮ್ ॥೦೧॥


ಸೂತ  ಹೇಳಿದ  – ಇದನ್ನು  ಕೇಳಿದ ಗರುಡ  ಅಶ್ವತ್ಥ ಎಲೆಯ ಹಾಗೆ ನಡುಕೊಂಡು ಜನರ ಉಪಕಾರಕ್ಕೋಸ್ಕರ ಮತ್ತೆ ಕೇಶವನ ಹತ್ತಿರ ಕೇಳಿದ 

.

ಗರುಡ ಉವಾಚ-


ಕೃತ್ವಾ ಪಾಪಾನಿ ಮನುಜಾಃ ಪ್ರಮಾದಾದ್ಬುದ್ಧಿತೋsಪಿ ವಾ ।

ನ ಯಾಂತಿ ಯಾತನಾ ಯಾಮ್ಯಾಃ ಕೇನೋಪಾಯೇನ ಕಥ್ಯತಾಮ್ ೨


ಗರುಡ  ಹೇಳಿದ – ಮನುಷ್ಯರು ತಿಳುದೋ ತಿಳಿಯದೆಯೋ ಪಾಪಗಳ ಮಾಡಿ, ಏವ ಪಾಪಗಳಿಂದ  ಯಮಯಾತನೆಯ ಪಡುತ್ತವೆ ಅವನ್ನು ನನಗೆ ಹೇಳಲ್ಪಡಲಿ.


ಸಂಸಾರಾರ್ಣವಮಗ್ನಾನಾಂ ನರಾಣಾಂ ದೀನಚೇತಸಾಮ್ ।

ಪಾಪೋಪಹತಬುದ್ಧೀನಾಂ ವಿಷಯೋಪಹತಾತ್ಮನಾಮ್ ॥೦೩॥


ಏವ ಮನುಷ್ಯರು ಈ ಸಂಸಾರ ಎಂದು ಹೇಳುವ ಸಮುದ್ರಲ್ಲಿ ಮುಳಗಿ ಅಲ್ಪಬುದ್ಧಿವುಳ್ಳವರಾಗಿದ್ದವೋ, ಯಾರ ಬುದ್ಧಿ ಪಾಪಗಳಿಂದ ಮಂಕಾಗಿದೆಯೋ, ಯಾರ ಆತ್ಮವು ವಿಷಯ ಭೋಗಗಳಿಂದ ಘಾಸಿ ಹೊಂದಿದೆಯೋ 


ಉದ್ಧಾರಾರ್ಥಂ ವದ ಸ್ವಾಮಿನ್ ಪುರಾಣಾರ್ಥವಿನಿಶ್ಚಯಮ್ ।

ಉಪಾಯಂ ಯೇನ ಮನುಜಾಃ ಸದ್ಗತಿಂ ಯಾಂತಿ ಮಾಧವ ॥೦೪॥


ಹೇ ಸ್ವಾಮಿಯೇ, ಅಂತವರ ಉದ್ಧಾರಕ್ಕೋಸ್ಕರ ಪುರಾಣಗಳ ಅರ್ಥಗಳಲ್ಲಿ ವಿಶೇಷವಾಗಿ ನಿಶ್ಚಯಿಸಲ್ಪಟ್ಟ ಏವ ಉಪಾಯಗಳಿಂದ ಮನುಷ್ಯರು ಸದ್ಗತಿ ಪಡೆತ್ತರೋ  ಹೇಳುವುದಾದರೆ ನನಗೆ ಹೇಳು ಮಾಧವನೇ!


ಶ್ರೀಭಗವಾನುವಾಚ-

ಸಾಧು ಪೃಷ್ಟಂ ತ್ವಯಾ ತಾರ್ಕ್ಷ್ಯ ಮಾನುಷಾಣಾಂ ಹಿತಾಯ ವೈ ।

ಶ್ರುಣುಷ್ವಾವಹಿತೋ ಭೂತ್ವಾ ಸರ್ವಂ ತೇ ಕಥಯಾಮ್ಯಹಮ್ ॥೦೫॥


ಶ್ರೀ ಭಗವಂತ  ಹೇಳಿದ – ಏ ಗರುಡ!, ನೀನು ಮನುಷ್ಯರ ಹಿತಕ್ಕಾಗಿ ಒಳ್ಳೆಯ ಪ್ರಶ್ನೆಯನ್ನೇ ಕೇಳಿದೆ. ಈಗ ನೀನು ಸಮಧಾನಲ್ಲಿ ಕೇಳು. ನಾನು ನಿನಗೆ ಎಲ್ಲವನ್ನೂ ಹೇಳುತ್ತೆನೆ 


ದುರ್ಗತಿಃ ಕಥಿತಾ ಪೂರ್ವಮಪುತ್ರಾಣಾಂ ಚ ಪಾಪಿನಾಮ್ ।

ಪುತ್ರಿಣಾಂ ಧಾರ್ಮಿಕಾಣಾಂ ತು ನ ಕದಾಚಿತ್ಖಗೇಶ್ವರ ॥೦೬॥


ಏ ಪಕ್ಷಿರಾಜನೇ!, ಹಿಂದೆ ಪುತ್ರಹೀನರಾದ ಪಾಪಿಗಳ ದುರ್ಗತಿಯ ಹೇಳಿದ್ದೆ. ಪುತ್ರವಂತರಾದ ಧರ್ಮನಿಷ್ಠರು ಎಂದಿಂಗೂ ಹಾಗಾವುದಿಲ್ಲ 


ಪುತ್ರಜನ್ಮವಿರೋಧಃ ಸ್ಸಾದ್ಯದಿ ಕೇನಾಪಿ ಕರ್ಮಣಾ ।

ತದಾ ಕಶ್ಚಿದುಪಾಯೇನ ಪುತ್ರೋತ್ಪತ್ತಿಂ ಪ್ರಸಾಧಯೇತ್ ॥೦೭॥


ಒಂದುವೇಳೆ ಏವುದಾರು ಕರ್ಮಫಲದಿಂದ ಅವನಿಗೆ ಮಗ ಹುಟ್ಟದ್ರೆ, ಅವ ಈ ಯಾವುದಾರು ಉಪಾಯದ ಪುತ್ರೋತ್ಪತ್ತಿಯ ಸಾಧ್ಯತೆಯ ಮಾಡಿದರೆ 


ಹರಿವಂಶಕಥಾಂ ಶ್ರುತ್ವಾ ಶತಚಂಡೀವಿಧಾನತಃ ।

ಭಕ್ತ್ಯಾಶ್ರೀಶಿವಮಾರಾಧ್ಯ ಪುತ್ರಮುತ್ಪಾದಯೇತ್ಸುಧೀಃ ॥೦೮॥


ಹರಿವಂಶದ ಕಥೆಯ ಕೇಳುವದರಿಂದಲಾಗಲೀ, ಶತಚಂಡೀ ವಿಧಾನದಲಾಗಲೀ, ಭಕ್ತಿಯಿಂದ  ಶಿವನ ಆರಾಧಿಸುವದರಿಂದಲಾಗಲೀ, ಬುದ್ಧಿವಂತನಾದ ಮನುಷ್ಯ° ಪುತ್ರೋತ್ಪತ್ತಿಯ ಮಾಡಲಿ


ಪುನ್ನಾಮ್ನೋ ನರಕಾದ್ಯಸ್ಮಾತ್ಪಿತರಂ ತ್ರಾಯತೇ ಸುತಃ ।

ತಸ್ಮಾತ್ಪುತ್ರ ಇತಿ ಪ್ರೋಕ್ತಃ ಸ್ವಯಮೇವ ಸ್ವಯಂಭುವಾ ॥೦೯॥


‘ಪು’ ಹೇಳವ  ಪದವೇ ನರಕದಿಂದ  ರಕ್ಷಿಸುವವನೇ ಪುತ್ರ ಹಾಗಾಗಿ ಸ್ವತಃ ಸ್ವಯಂಭುವೇ ಅವನ ‘ಪುತ್ರ’ ಹೇಳಿ ಹೇಳಿದ್ದನೆ 


ಏಕೋಪಿ ಪುತ್ರೋ ಧರ್ಮಾತ್ಮಾ ಸರ್ವಂ ತಾರಯತೇ ಕುಲಮ್ ।

ಪುತ್ರೇಣ ಲೋಕಾಂಜಯತಿ ಶ್ರುತಿರೇಷಾ ಸನಾತನೀ ॥೧೦॥


ಒಬ್ಬನೇ ಧರ್ಮಾತ್ಮನಾದ ಪುತ್ರ  ಎಲ್ಲ ಕುಲವನ್ನೂ ದಾಟುಸುತ್ತನೆ . ಪುತ್ರನಿಂದ ಲೋಕಗಳೆಲ್ಲವ ಜಯಿಸುತ್ತನೆ  ಹೇಳುವ ಸನಾತನ ಸೂಕ್ತಿ.


ಇತಿ ವೇದೈರಪಿ ಪ್ರೋಕ್ತಂ ಪುತ್ರಮಾಹಾತ್ಮ್ಯಮುತ್ತಮಮ್ ।

ತಸ್ಮಾತುತ್ರಮುಖಂ ದೃಷ್ಟ್ವಾ ಮುಚ್ಯತೇ ಪೈತೃಕಾದೃಣಾತ್ ॥೧೧॥


ಈ ರೀತಿಯಾಗಿ ವೇದಗಳು  ಉತ್ತಮವಾದ ಪುತ್ರನ ಮಹಾತ್ಮೆಯ ಹೇಳಿದ್ದು. ಹಾಗಾಗಿ ಪುತ್ರನ ಮೊರೆಯ ನೋಡಿ ಪಿತೃ ಋಣದಿಂದ ಮುಕ್ತರಾಗುತ್ತಾರೆ 


ಪೌತ್ರಸ್ಯ ಸ್ಪರ್ಶನಾನ್ಮರ್ತ್ಯೋ ಮುಚ್ಯತೇ ಚ ಋಣತ್ರಯಾತ್ ।

ಲೋಕಾನತ್ಯೇದ್ದಿವಃ ಪ್ರಾಪ್ತಿಃ ಪುತ್ರಪೌತ್ರಪ್ರಪೌತ್ರಕೈಃ ॥೧೨॥


ಮೊಮ್ಮಗನ ಸ್ಪರ್ಶದಿಂದ ಮನುಷ್ಯ ಮೂರು ಋಣಗಳಿಂದ ಮುಕ್ತನಾವುತ್ತನೆ ಮಗ, ಮೊಮ್ಮಗ,  ಮರಿಮೊಮ್ಮಗ ಇದರಿಂದ ಯಮಲೋಕಗಳ ದಾಟಿ ಸ್ವರ್ಗಾದಿ ಲೋಕಗಳನ್ನು ಹೊಂದುತ್ತನೆ 


ಬ್ರಾಹ್ಮೋಢಾ ಪುತ್ರೋನ್ನಯತಿ ಸಂಗೃಹೀತಸ್ತ್ವಧೋನಯೇತ್ ।

ಏವಂ ಜ್ಞಾತ್ವಾ ಖಗಶ್ರೇಷ್ಠ ಹೀನಜಾತಿಸುತಾಂಸ್ತ್ಯಜೇತ್ ॥೧೩॥


ಬ್ರಹ್ಮವಿವಾಹದ (ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಆಸುರ, ಗಂಧರ್ವ, ರಾಕ್ಷಸ, ಪೈಶಾಚ – ಇವು ಎಂಟು ಪ್ರಮುಖ ವಿವಾಹ ವಿಧಗಳು . ಇದರಲ್ಲಿ ಬ್ರಹ್ಮವಿವಾಹ ಅತೀ ಶ್ರೇಷ್ಠವಾದ್ದು) ವಿಧಿದಿಂದ ವಿವಾಹವಾದ ಪತ್ನಿಂದ ಜನಿಸಿದ ಔರಸ ಪುತ್ರ ಊರ್ಧ್ವಗತಿ (ಉತ್ತಮಗತಿ)ಯ ಪ್ರಾಪ್ತಿ ಮಾಡುಸುತ್ತನೆ ಮತ್ತು ಸಂಗೃಹೀತ (ದುಷ್ಟ ಪದ್ಧತಿಯ ವಿವಾಹದ ಜನಿಸಿದ) ಪುತ್ರ ಅಧೋಗತಿಯತ್ತ (ನರಕದತ್ತೆ) ಕೊಂಡೋಯ್ಯುತ್ತಾನೆ . ಹಾಗಾಗಿ ಹೇ ಪಕ್ಷಿಶ್ರೇಷ್ಠನೇ!, ವ್ಯಕ್ತಿಯು ಹೀನ ಜಾತಿಯ ಸ್ತ್ರೀಯಿಂದ ಜನಿಸಿದ ಪುತ್ರನ ಬಿಡಬೇಕು. (ಅರ್ಥಾತ್, ಹೀನ ವಿವಾಹ ಪದ್ಧತಿಯ ಪ್ರೋತ್ಸಾಹಿಸಲಾಗ, ಅದು ಉನ್ನತಿಗೆ ಯೋಗ್ಯವಲ್ಲ).


ಸವರ್ಣೇಭ ಸವರ್ಣಾಸು ಯೇ ಪುತ್ರಾ ಔರಸಾಃ ಖಗ ।

ಸ ಏವ ಶ್ರಾದ್ಧದಾನೇನ ಪಿತೃಣಾಂ ಸ್ವರ್ಗಹೇತವಃ ॥೧೪॥


ಏ ಗರುಡ!, ಸವರ್ಣ ಪುರುಷರಿಂದ ಸವರ್ಣ ಸ್ತ್ರೀಲಿ ಹುಟ್ಟುವ ಪುತ್ರನಿಗೆ ‘ಔರಸ ಪುತ್ರ’ ಎಂದು ಹೇಳುವದು. ಅವನೇ ಶ್ರಾದ್ಧಕರ್ಮಾದಿಗಳನ್ನು  ಮಾಡಿ ಪಿತೃಗಳ ಸ್ವರ್ಗ ಪ್ರಾಪ್ತಿ ಮಾಡುಸಲು ಕಾರಣ ಆಗುತ್ತಾನೆ .


ಶ್ರಾದ್ಧೇನ ಪುತ್ರದತ್ತೇನ ಸ್ವರ್ಯಾತೀತಿ ಕಿಮುಚ್ಯತೇ ।

ಪ್ರೇತೋsಪಿ ಪರದತ್ತೇನ ಗತಃ ಸ್ವರ್ಗಮಥೋ ಶ್ರುಣು ॥೧೫॥


ಪುತ್ರ ಮಾಡಿದ ಶ್ರಾದ್ಧದಿಂದ ಸ್ವರ್ಗಕ್ಕೆ ಹೋಗುತ್ತಾನೆ . ಪ್ರೇತವೂ ಇನ್ನೊಬ್ಬ ಮಾಡಿದ ಶ್ರಾದ್ಧದಿಂದ ಸ್ವರ್ಗಕ್ಕೆ ಹೋಗುತ್ತಾನೆ . ಅದರ ಬಗ್ಗೆ ಕೇಳು.


ಅತ್ರೈವೋದಾಹರಿಷ್ಯೇsಹಮಿತಿಹಾಸಂ ಪುರಾತನಮ್ ।

ಔರ್ಧ್ವದೇಹಿಕದಾನಸ್ಯ ಪರಂ ಮಾಹಾತ್ಮ್ಯಸೂಚಕಮ್ ॥೧೬॥


ಅದರ ಸಂಬಂಧವಾಗಿಯೇ ಔರ್ಧ್ವದೇಹಿಕ ದಾನದ ಉತ್ತಮವಾದ ಮಹಿಮೆಯ ಸೂಚಿಸುವ ಒಂದು ಪ್ರಾಚೀನ ಇತಿಹಾಸವನ್ನು  ಉದಾಹರಿಸುತ್ತೇನೆ 


ಪುರಾ ತ್ರೇತಾಯುಗೇ ತಾರ್ಕ್ಷ್ಯ ರಾಜಸೀದ್ಬಭ್ರುವಾಹನಃ ।

ಮಹೋದಯೇ ಪುರೇ ರಮ್ಯೇ ಧರ್ಮನಿಷ್ಠೋ ಮಹಾಬಲಃ ॥೧೭॥


ಏ ಗರುಡ!, ಪೂರ್ವಕಾಲಲ್ಲಿ,  ತ್ರೇತಾಯುಗಲ್ಲಿ ಮನೋಹರವಾದ ಮಹೋದಯಪುರಲ್ಲಿ, ಧರ್ಮನಿಷ್ಠನೂ, ಮಹಾಬಲಶಾಲಿಯೂ ಆದ ಬಭ್ರುವಾಹನ ಹೇಳುವ  ರಾಜ ಇದ್ದ


ಯಜ್ವಾ ದಾನಪತಿಃ ಶ್ರೀಮಾನ್ಬ್ರಹ್ಮಣ್ಯಃ ಸಾಧುವತ್ಸಲಃ ।

ಶೀಲಾಚಾರಗುಣೋಪೇತೋ ದಯಾದಾಕ್ಷಿಣ್ಯ ಸಂಯುತಃ ॥೧೮॥


ಯಜ್ಞಗಳ ಮಾಡುವವನೂ, ಶ್ರೇಷ್ಠನಾದ ದಾನಿಯೂ, ಶ್ರೀಮಂತನೂ, ಬ್ರಾಹ್ಮಣರ ಆದರಿಸುವವನೂ, ಸಾಧುಗಳ ಪ್ರೀತಿಸುವವನೂ, ಶೀಲಾಚಾರ ಸದ್ಗುಣ ಸಂಪನ್ನನೂ, ದಯಾದಾಕ್ಷಿಣ್ಯಗಳಿಂದ ಕೂಡಿದವನೂ ಅವ  ಆಗಿದ್ದ


ಪಾಲಯಾಮಾಸ ಧರ್ಮೇಣ ಪ್ರಜಾಃ ಪುತ್ರಾನಿವೌರಸಾನ್ ।

ಕ್ಷತ್ರಧರ್ಮರತೋ ನಿತ್ಯಂ ಸ ದಂಡ್ಯಾನ್ದಂಡಯನ್ನೃಪಃ ॥೧೯॥


ಅವ ಧರ್ಮದ ಔರಸಪುತ್ರರ ರೀತಿಲಿ ಪ್ರಜೆಗಳ ಪಾಲಿಸಿಕೋಂಡಿದ್ದ. ನಿತ್ಯವೂ ಕ್ಷತ್ರಿಯ ಧರ್ಮಲ್ಲಿ ತತ್ಪರನಾಗಿ ಅಪರಾಧಿಗಳ ದಂಡಿಸುತ್ತಿದ್ದ


ಸ ಕದಾಚಿನ್ಮಹಾಬಾಹುಃ ಸುಸೈನ್ಯೋ ಮೃಗಯಾಂ ಗತಃ ।

ವನಂ ವಿವೇಶ ಗಹನಂ ನಾನಾವೃಕ್ಷ ಸಮನ್ವಿತಮ್ ॥೨೦॥


ಒಂದು ಸರ್ತಿ ಆ ಮಹಾಬಾಹುವು ಸೇನಾಸಮೇತನಾಗಿ, ಮೃಗಗಳ ಬೇಟೆಯಾಡಲು  ಹೋದ. ಅನೇಕ ವೃಕ್ಷಗಳಿಂದ ಕೂಡಿದ ಒಂದು ದಟ್ಟವಾದ ವನವನ್ನು ಅವನು ಪ್ರವೇಶಿಸಿದ


ನಾನಾಮೃಗಗಣಾಕೀರ್ಣಂ ನಾನಾಪಕ್ಷಿ ನಿನಾದಿತಮ್ ।

ವನಮಧ್ಯೇ ತದಾ ರಾಜಾ ಮೃಗಂ ದೂರಾದಪಶ್ಯತ ॥೨೧॥


ಆ ವನ ನಾನಾ ತರದ ಪ್ರಾಣಿಗಳ ಗುಂಪನ್ನು ಕೂಡಿ, ನಾನಾ ಪ್ರಕಾರದ ಪಕ್ಷಿಗಳ ಶಬ್ದದಿಂದ ತುಂಬಿ ಹೋಗಿತ್ತು.  ಅಷ್ಟರಲ್ಲಿ ಆ ರಾಜ ಆ ಕಾಡಿನ ಮಧ್ಯಲ್ಲಿ ಒಂದು ಜಿಂಕೆಯ ದೂರದಿಂದಲೇ ನೋಡಿದ


ತೇನ ವಿದ್ಧೋಮೃಗೋsತೀವ ಬಾಣೇನ ಸುದೃಢೇನ ಚ ।

ಬಾಣಮಾದಾಯ ತಂ ತಸ್ಯ ವನೇsದರ್ಶನಮೇಯಿವಾನ್ ॥೨೨॥


ಅವನ ಸದೃಢವಾದ ಬಾಣದಿಂದ ಆ ಜಿಂಕೆಯ ಅತಿಯಾಗಿ ಗಾಯಗೊಂಡು ಬಾಣಸಮೇತವಾಗಿ ಕಾಡಿನೊಳಗೆ ಕಣ್ಣಿಗೆ ಕಾಣದಾಯಿತು 


ಕಕ್ಷೇಣ ರುಧಿರಾರ್ದ್ರೇಣ ಸ ರಾಜಾನುಜಗಾಮ ತಮ್ ।

ತತೋ ಮೃಗಪ್ರಸಂಗೇನ ವನಮನ್ಯದ್ವಿವೇಶ ಸಃ ॥೨೩॥


ಆ ರಾಜ ರಕ್ತಲೇಪಿತವಾಗಿದ್ದ ಹುಲ್ಲಿನ ಗುರುತಿನಿಂದ ಆ ಜಿಂಕೆಯ ಹಿಂಬಾಲಿಸಿಕೋಂಡು ಹೋಗುತ್ತಾ  ಮತ್ತೊಂದು ಕಾಡಿನ್ನು ಪ್ರವೇಶಿಸಿದ


ಕ್ಷುತ್ಕ್ಷಾಮಮಕಂಠೋ ನೃಪತಿಃ ಶ್ರಮಸಂತಾಪಮೂರ್ಛಿತಃ ।

ಜಲಾಶಯಂ ಸಮಾಸಾದ್ಯ ಸಾಶ್ವ ಏವ ವ್ಯಗಾಹತ ॥೨೪॥


ಹಸಿವಿನಿಂದ, ಒಣಗಿದ ಗಂಟಲು  ಆ ರಾಜ ಶ್ರಮದಿಂದ ತಾಪದಿಂದ ಇನ್ನೆಂತ ಮೂರ್ಛೆ ತಪ್ಪುವ ಸ್ಥಿತಿಗೆ ತಲುಪಿದ . ಅಲ್ಲಿ ಒಂದು ಜಲಾಶಯದ ಹತ್ತಿರ  ಹೋಗಿ ಕುದುರೆಯ ಸಮೇತ ಮಿಂದುನು 

.

ಪಪೌ ತದುದಕಂ ಶೀತಂ ಪದ್ಮ ಗಂಧಾದಿವಾಸಿತಮ್ ।

ತತೋsವತೀರ್ಯ ಸಲಿಲಾದ್ವಿಶ್ರಮೋ ಬಭ್ರುವಾಹನಃ ॥೨೫॥


ಕಮಲ ಸುವಾಸೆನೆಯಿಂದ ಕೂಡಿದ, ಶೀತಲವಾದ ಆ ನೀರಿನ್ನು  ಕುಡಿದು ದಾಹದಿಂದ ಸುಧಾರಿಸಿಕೋಂಡ ಮತ್ತೆ ಆ ಬಭ್ರುವಾಹನ  ನೀರಿನಿಂದ ಹೊರ ಬಂದನು 


ದದರ್ಶ ನೃಗ್ರೋಧತರುಂ ಶೀತಚ್ಛಾಯಂ ಮನೋಹರಮ್ ।

ಮಹಾವಿಟಪವಿಸ್ತೀರ್ಣಂ ಪಕ್ಷಿ ಸಂಘನಿನಾದಿತಮ್ ॥೨೬॥


ಅಲ್ಲಿ ಶೀತಲವಾದ ತಣಿಯಲು ಇತ್ತ, ಅಗಾಲಕ್ಕೆ ವಿಸ್ತರಿಸಿಪ್ದ ಕೊಂಬೆಗಳಲ್ಲಿ  ನಾದಗೈವ ಪಕ್ಷಿಗಳಿಂದ ಕೂಡಿದ 

ಮನೋಹರವಾದ ಒಂದು ಆಲದ ಮರವ ಅವ ನೋಡಿದ

.

ವನಸ್ಯ ತಸ್ಯ ಸರ್ವಸ್ಯ ಮಹಾಕೇತುಮಿವ ಸ್ಥಿತಮ್ ।

ಮೂಲಂ ತಸ್ಯ ಸಮಾಸಾದ್ಯ ನಿಷಸಾದ ಮಹೀಪತಿಃ ॥೨೭॥


ಅದು ಆ ಕಾಡಿಗೆಲ್ಲ ಮಹಾಧ್ವಜದ ಹಾಗೆ ಇತ್ತು  ರಾಜ ಹತ್ತಿರ ಹೋಗಿ ಆ ಮರದ ಬುಡದಲ್ಲಿ ವಿಶ್ರಮಿಸಿಕೋಂಡ


ಅಥ ಪ್ರೇತಂ ದದರ್ಶಾಸೌ ಕ್ಷುತ್ತೃಡ್ಭ್ಯಾಂ ವ್ಯಾಕುಲೇಂದ್ರಿಯಮ್ ।

ಉತ್ಕಚಂ ಮಲಿನಂ ಕುಬ್ಜಂ ನಿರ್ಮಾಂಸಂ ಭೀಮದರ್ಶನಮ್ ॥೨೮॥


ಆ ಸಮಯಲ್ಲಿ ಅವನು ಅತೀ , ರೋದನದಿಂದ ವ್ಯಾಕುಲವಾದ, ಇಂದ್ರಿಯಗಳಿಂದ ಕೂಡಿದ, ಕೆದರಿದ ತಲೆ ಕೂದಲು ಮಲಿನವಾದ ಆಕಾರ , ಗೂನ ಬೆನ್ನ, ಮಾಂಸರಹಿತವಾದ, ನೋಡಲು  ಅತಿ ಭಯಂಕರವಾದ ಒಂದು ಪ್ರೇತವ ನೋಡಿದ

.

ತಂ ದೃಷ್ಟ್ವಾ ವಿಕೃತಂ ಘೋರಂ ವಿಸ್ಮಿತೋ ಬಭ್ರುವಾಹನಃ ।

ಪ್ರೇತೋsಪಿ ದೃಷ್ಟ್ವಾ ತಂ ಘೋರಾಮಟವೀಮಾಗತಂ ನೃಪಮ್ ॥೨೯॥


ಆ ವಿಕಾರವಾದ ಭಯಂಕರವಾದ ರೂಪವ ನೋಡಿ ಬಭ್ರುವಾಹನ  ಅಶ್ಚರ್ಯಪಟ್ಟ ಆ ಪ್ರೇತವೂ ಆ ಘೋರವಾದ ಕಾಡಿಗೆ ಬಂದ ರಾಜನ ನೋಡಿ –


ಸಮುತ್ಸುಕಮನಾ ಭೂತ್ವಾ ತಸ್ಯಾಂತಿಕಮುಪಾಗತಃ ।

ಅಬ್ರವೀತ್ಸ ತದಾ ತಾರ್ಕ್ಷ್ಯ ಪ್ರೇತರಾಜೋ ನೃಪಂ ವಚಃ ॥೩೦॥


ಕುತೂಹಲದಿಂದ ಅವನ ಹತ್ತಿರ ಬಂತು. ಏ ಗರುಡ!, ಆ ಪ್ರೇತರಾಜ ರಾಜನ ಹತ್ತಿರ ಮಾತಾಡಿತ್ತು –


ಪ್ರೇತಭಾವೋ ಮಯಾ ತ್ಯಕ್ತಃ ಪ್ರಾಪ್ತೋsಸ್ಮಿ ಪರಮಾಂಗತಿಮ್ ।

ತ್ವತ್ಸಂಯೋಗಾನ್ಮಹಾಬಾಹೋ ಜಾತೋ ಧನ್ಯತರೋsಸ್ಮ್ಯಹಮ್ ॥೩೧॥


“ಏ ಮಹಾಬಾಹುವೇ!, ನಿನ್ನ ಸಂಯೋಗದಿಂದ ನನ್ನ ಪ್ರೇತಭಾವವ ಬಿಟ್ಟು ಪರಮಗತಿಯ ಪಡದ್ದೆ. ನಾನು ಅತಿ ಧನ್ಯನಾದೆ "


ರಾಜೋವಾಚ-


ಕೃಷ್ಣವರ್ಣ ಕರಾಲಾಸ್ಯ ಪ್ರೇತತ್ವಂ ಘೋರದರ್ಶನಮ್ ।

ಕೇನ ಕರ್ಮವಿಪಾಕೇನ ಪ್ರಾಪ್ತಂ ತೇ ಬಹ್ವಮಂಗಲಮ್ ॥೩೨॥


ರಾಜ ಹೇಳಿದ – ಈ ಕಪ್ಪು ಬಣ್ಣದ, ಕರಾಳ ಮೋರೆಯ, ನೋಡಲು ಭಯಂಕರವಾದ ಅತ್ಯಂತ ಅಮಂಗಳಕರವಾದ ಈ ಪ್ರೇತತ್ವವ ನೀನು ಏವ ಕರ್ಮಫಲದಿಂದ ಪಡದೆ?


ಪ್ರೇತತ್ವಕಾರಣಂ ತಾತ ಬ್ರೂಹಿ ಸರ್ವಮಶೇಷತಃ ।

ಕೋsಸಿ ತ್ವಂ ಕೇನ ದಾನೇನ ಪ್ರೇತತ್ವಂ ತೇ ವಿನಶ್ಯತಿ ॥೩೩॥


ಹೇ ಮಿತ್ರನೇ,!, ನಿನ್ನ ಪ್ರೇತತ್ವಕ್ಕೆ ಕಾರಣವ ಎಲ್ಲವನ್ನೂ ರಜವೂ ಬಿಡದ್ದೆ ಹೇಳು. ನೀನು ಯಾರು?, ಯಾವ ಕಾರಣಗಳಿಂದ ನಿನ್ನ ಪ್ರೇತತ್ವ ನಾಶ ಆಯಿತು  ?


ಮುಂದುವರಿಯಲಿದೆ…….. 

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...