Followers

Tuesday, 30 June 2020

ಗರುಡ ಪುರಾಣ ಅಧ್ಯಾಯ 9

ಗರುಡ ಪುರಾಣ ಅಧ್ಯಾಯ 9 

ಅಧ್ಯಾಯ 9


ಮ್ರಿಯಮಾಣ ಕೃತ್ಯ ನಿರೂಪಣಮ್                                    


ಮರಣಕಾಲದ ವಿಧಿಗಳ ನಿರೂಪಣೆ

 

ಗರುಡ ಉವಾಚ


ಕಥಿತಂ ಭವತಾ ಸಮ್ಯಗ್ದಾನಮಾತುರಕಾಲಿಕಮ್ ।images

ಮ್ರಿಯಮಾಣಸ್ಯ ಯತ್ಕೃತ್ಯಂ ತದಿದಾನೀಂ ವದ ಪ್ರಭೋ ॥೦೧॥


ಗರುಡ° ಹೇಳಿದ – ಹೇ ಪ್ರಭೋ!, ರೋಗಪೀಡಿತನಾದ ಕಾಲಲ್ಲಿ ಮಾಡಬೇಕಾದ ದಾನಗಳ ಬಗ್ಗೆ ಲಾಯಕಕ್ಕೆ ನಿನ್ನಂದ ಹೇಳಲ್ಪಟ್ಟತ್ತು. ಈಗ, ಮರಣ ಕಾಲಲ್ಲಿ ಮಾಡೇಕಾದ ಕರ್ಮಗಳ ಬಗ್ಗೆ ಹೇಳು.


ಶ್ರೀ ಭಗವಾನ್ ಉವಾಚ


ಶ್ರಣು ತಾರ್ಕ್ಷ್ಯ ಪ್ರವಕ್ಷ್ಯಾಮಿ ದೇಹತ್ಯಾಗಸ್ಯ ತದ್ವಿಧಿಮ್ ।

ಮೃತಾ ಯೇನ ವಿಧಾನೇನ ಸದ್ಗತಿಂ ಯಾಂತಿ ಮಾನವಾಃ ॥೦೨॥


ಭಗವಂತ  ಹೇಳಿದ – ಹೇ ಗರುಡನೇ!, ಯಾವ ವಿಧಿದಲ್ಲಿ ಮನುಷ್ಯ  ಸತ್ತಮಲೆ ಸದ್ಗತಿಯ ಪಡೆಯುತ್ತನೋ ಆ ದೇಹತ್ಯಾಗದ ವಿಧಿಯ ನಾನು ನಿನಗೆ ಹೇಳುತ್ತೆನೆ , ಕೇಳು –


ಕರ್ಮಯೋಗಾದ್ಯದಾ ದೇಹೀ ಮುಂಚತ್ಯತ್ರ ನಿಜಂ ವಪುಃ ।

ತುಲಸೀಸನ್ನಿಧೌ ಕುರ್ಯಾನ್ಮಂಡಲಂ ಗೋಮಯೇನ ತು ॥೦೩॥


ಯಾವಾಗ ದೇಹಿಯ ಕರ್ಮಗಳ ಫಲವಾಗಿ ತನ್ನ ದೇಹತ್ಯಾಗ ಮಾಡುತ್ತನೋ, ಅಗ ತುಳಸಿ ಗಿಡದ ಹತ್ತಿರ ದನದ ಸಗಣಿಯಿಂದ ಮಂಡಲ ಮಾಡಬೇಕು (ಸಗಣಿ ಬಳಿಯೆಕು).


ತಿಲಾಂಶ್ಚೈವ ವಿಕೀರ್ಯಾಥ ದರ್ಭಾಂಶ್ಚೈವ ವಿನಿಕ್ಷಿಪೇತ್ ।

ಸ್ಥಾಪಯೇದಾಸನೇ ಶುಭ್ರೇ ಶಾಲಗ್ರಾಮಶಿಲಾಂ ತದಾ ॥೦೪॥


ಅಲ್ಲಿ (ಆ ಮಂಡಲದ ಮೇಲೆ ) ಎಳ್ಳು ಚೆಲ್ಲಿ ದರ್ಭೆಗಳ ಹರಡೆಕು. ಮತ್ತೆ, ಒಂದು ಶುಭ್ರವಾದ ಆಸನದ ಮೇ ಶಾಲಗ್ರಾಮ ಶಿಲೆಯ ಇಡಬೇಕು 


ಶಾಲಗ್ರಾಮಶಿಲಾ ಯತ್ರ ಪಾಪದೋಷಭಯಾಪಹಾ ।

ತತ್ಸನ್ನಿಧಾನಮರಣಾನ್ಮುಕ್ತಿರ್ಜಂತೋಃ ಸುನಿಶ್ಚಿತಾಃ ॥೦೫॥


ಯಾವ ಜಾಗದಲ್ಲಿ  ಪಾಪ ದೋಷ ಭಯಗಳ ನಾಶಮಾಡುವ ಶಾಲಗ್ರಾಮ ಶಿಲೆ ಇರುತ್ತೋ, ಅದರ ಹತ್ತಿರ  ಮರಣ ಹೊಂದಿದರೆ ಜೀವಾತ್ಮ ನಿಶ್ಚಯವಾಗಿಯೂ ಮುಕ್ತಿಯ ಹೊಂದುತ್ತದೆ 


ತುಲಸೀವಿಟಪಚ್ಛಾಯಾ ಯತ್ರಾಸ್ತಿ ಭವತಾಪಹಾ ।

ತತ್ರೈವ ಮರಣಾನ್ಮುಕ್ತಿಃ ಸರ್ವದಾ ದಾನದುರ್ಲಭಾ ॥೦೬॥


ಸಂಸಾರತಾಪವ ನಾಶಮಾಡುವ ತುಳಸೀ ಗಿಡವು  ಎಲ್ಲಿ ಇರುತ್ತೋ ಅಲ್ಲಿ ಮರಣ ಹೊಂದಿರೆ ದುರ್ಲಭವಾದ ಮುಕ್ತಿಯು ಸಿಕ್ಕುತ್ತು.


ತುಲಸೀವಿಟಾಪಸ್ಥಾನಂ ಗೃಹೇ ಯಸ್ಯಾವತಿಷ್ಠತೇ ।

ತದ್ಗೃಹಂ ತೀರ್ಥರೂಪಂ ಹಿ ನ ಯಾಂತಿ ಯಮಕಿಂಕರಾಃ ॥೦೭॥


ಯಾರ ಮನೆಲಿ ತುಳಸೀ ಗಿಡವು  ಸ್ಥಾಪನೆಯಾಗಿದ್ದೋ, ಆ ಮನೆ ತೀರ್ಥಸ್ಥಳವಾಗಿದ್ದು. ಅಲ್ಲಿಗೆ ಯಮಕಿಂಕರರು ಬರುವುದಿಲ್ಲ 


ತುಲಸೀಮಂಜರೀಯುಕ್ತೋ ಯಸ್ತು ಪ್ರಾಣಾನ್ವಿಮುಂಚತಿ ।

ಯಮಸ್ತಂ ನೇಕ್ಷಿತುಂ ಶಕ್ತೋ ಯುಕ್ತಂ ಪಾಪಶತೈರಪಿ ॥೦೮॥


ಯಾರು ತುಳಸೀ ದಳದೊಟ್ಟಿಗೆ ಪ್ರಾಣವ ಬಿಡುತ್ತರೋ  ಅವರು ನೂರಾರು ಪಾಪಗಳ ಮಾಡಿದ್ದರು ಯಮ° ಅವರ ಕಡೆಗೆ ನೋಡಲು ಕೂಡ ಶಕ್ತನಾಗಿರುವುದಿಲ್ಲ 


ತಸ್ಯಾದಲಂ ಮುಖೇ ಕೃತ್ವಾ ತಿಲದರ್ಭಾಸನೇ ಮೃತಃ ।

ನರೋ ವಿಷ್ಣುಪುರಂ ಯಾತಿ ಪುತ್ರಹೀನೋsಪ್ಯಸಂಶಯಃ ॥೦೯॥


ತುಳಸೀದಳವ ಬಾಯಲಿಮಡಿಕ್ಕೊಂಡು ಎಳ್ಳು ದರ್ಭೆಗಳ ಆಸನದ ಮೇಲೆ ಮರಣವ ಹೊಂದಿದ ಮನುಷ್ಯ ಪುತ್ರಹೀನನಾಗಿದ್ದರೂ ನಿಸ್ಸಂದೇಹವಾಗಿ ವಿಷ್ಣುಪುರಕ್ಕೆ ಹೋಗುತ್ತನೆ 


ತಿಲಾಃ ಪವಿತ್ರಾ ಸ್ತ್ರಿವಿಧಾ ದರ್ಭಾಶ್ಚ ತುಲಸೀರಪಿ ।

ನರಂ ನಿವಾರಯಂತ್ಯೇತೇ ದುರ್ಗತಿಂ ಯಾಂ ತಮಾತುರಮ್ ॥೧೦॥


ಎಳ್ಳು, ದರ್ಭೆ ಮತ್ತೆ ತುಳಸೀ ಎಸಳು – ಈ ಮೂರು ಪವಿತ್ರವಾದ ವಸ್ತುಗಳು  ಕಾಯಿಲೆಯ ಮನುಷ್ಯ ದುರ್ಗತಿ ಪಡುವುದರಿಂದ ನಿವಾರಿಸುತ್ತದೆ 


ಮಮ ಸ್ವೇದಸಮದ್ಭೂತಾ ಯತಸ್ತೇ ಪಾವನಾಸ್ತಿಲಾಃ ।

ಅಸುರಾ ದಾನವಾ ದೈತ್ಯಾ ವಿದ್ರವಂತಿ ತಿಲೈಸ್ತತಃ ॥೧೧॥


ಎಳ್ಳು ನನ್ನ ಬೆವರಿಂದ ಹುಟ್ಟಿದ್ದದು. ಹಾಗಾಗಿ ಅದು ಪವಿತ್ರವಾಗಿದೆ . ಎಳ್ಳಿನಿಂದ ಅಸುರರು, ದಾನವರು, ದೈತ್ಯರು ಓಡಿಹೋಗುವರು 


ದರ್ಭಾ ವಿಭೂತಿರ್ಮೇ ತಾರ್ಕ್ಷ್ಯ ಮಮ ರೋಮಸಮುದ್ಭವಾಃ ।

ಅತಸ್ತತ್ಸ್ಪರ್ಶನಾದೇವ ಸ್ವರ್ಗಂ ಗಚ್ಛಂತಿ ಮಾನವಾಃ ॥೧೨॥


ಹೇ ಗರುಡ!, ನನ್ನ ರೋಮಗಳಿಂದ ಹುಟ್ಟಿದ ದರ್ಭೆ ನನ್ನ ವಿಭೂತಿ. ಹಾಗಾಗಿ ಅದರ ಸ್ಪರ್ಶಮಾತ್ರದಿಂದಲೇ ಮನುಷ್ಯರು ಸ್ವರ್ಗಕ್ಕೆ ಹೋಗುತ್ತಾರೆ .


ಕುಶಮೂಲೆ ಸ್ಥಿತೋ ಬ್ರಹ್ಮಾ ಕುಶಮಧ್ಯೇ ಜನಾರ್ದನಃ ।

ಕುಶಾಗ್ರೇ ಶಂಕರೋ ದೇವಸ್ತ್ರಯೋ ದೇವಾಃ ಕುಶೇ ಸ್ಥಿತಾಃ ॥೧೩॥


ದರ್ಭೆಯ ಮೂಲಲ್ಲಿ ಬ್ರಹ್ಮನೂ, ದರ್ಭೆಯ ಮಧ್ಯಲ್ಲಿ ಜನಾರ್ದನನೂ, ದರ್ಭೆಯ ಕೊಡಿಲಿ ಶಂಕರ ದೇವನೂ ನೆಲೆಸಿದ್ದರೆ . ಈ ರೀತಿ ಮೂರು ದೇವರ ದರ್ಭೆಲಿ ನೆಲೆಸಿರುವ .

ಅತಃ ಕುಶಾ ವಹ್ನಿಮಂತ್ರ ತುಲಸೀವಿಪ್ರಧೇನವಃ ।

ನೈತೇ ನಿರ್ಮಾಲ್ಯತಾಂ ಯಾಂತಿ ಕ್ರಿಯಾಮಾಣಾಃ ಪುನಃ ಪುನಃ ॥೧೪॥


ಹಾಗಾಗಿ ದರ್ಭೆ, ಅಗ್ನಿ, ಮಂತ್ರ, ತುಳಸಿ, ಬ್ರಾಹ್ಮಣ, ಗೋವು ಇವುಗಳು ಮತ್ತೆ ಮತ್ತೆ ಕಾರ್ಯಲ್ಲಿ ಉಪಯೋಗಿಸಿರೂ ಅಶುದ್ಧವಾಗುವುದಿಲ್ಲ 


ದರ್ಭಾಃ ಪಿಂಡೇಷು ನಿರ್ಮಾಲ್ಯಾ ಬ್ರಾಹ್ಮಣಾಃ ಪ್ರೇತಭೋಜನೇ ।

ಮಂತ್ರಾಗೌಸ್ತುಲಸೀ ನೀಚೇ ಚಿತಾಯಾಂ ಚ ಹುತಾಶನಃ ॥೧೫॥


ದರ್ಭೆಯು ಪಿಂಡದಲ್ಲಿ, ಬ್ರಾಹ್ಮಣ  ಪ್ರೇತಭೋಜನದಲ್ಲಿ, ಮಂತ್ರ, ಗೋವು ಮತ್ತೆ ತುಳಸಿ ನೀಚನಲ್ಲಿ ಮತ್ತೆ ಅಗ್ನಿ ಚಿತೆಲಿ ಅಶುದ್ಧರಾಗಿದ್ದವು.


ಗೋಮಯೇನೋಪಲಿಪ್ತೇತು ದರ್ಭಾಸ್ತರಣಸಂಸ್ಕೃತೇ ।

ಭೂತಲೇ ಹ್ಯಾತುರಂ ಕುರ್ಯಾದಂತರಿಕ್ಷಂ ವಿವರ್ಜಯೇತ್ ॥೧೬॥


ದನದ ಸಗನಿಯಿಂದ ನೆಲಸಾರ್ಸಿ, ದರ್ಭೆಯ ಹರಡಿ ಸಂಸ್ಕಾರ ಮಾಡಿ, ಮರಣೋನ್ಮುಖನಾದವನ ಆ ಭೂಮಿಯ ಮೇಲೆ ಮಲಗಿಸಬೇಕು. ಅಂತರಿಕ್ಷವ ವರ್ಜಿಸಬೇಕು – ಅಂತರಿಕ್ಷದಲ್ಲಿ ಹೇಳಿರೆ ಎತ್ತರದಲ್ಲಿ/ ಮಂಚಲ್ಲಿ ಮಲಗಿಸಲಾಗಿ 


ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಸರ್ವೇ ದೇವಾ ಹುತಾಶನಃ ।

ಮಂಡಲೋಪರಿ ತಿಷ್ಠಂತಿ ತಸ್ಮಾತ್ಕುರ್ವೀತ ಮಂಡಲಮ್ ॥೧೭॥


ಬ್ರಹ್ಮ, ವಿಷ್ಣು, ರುದ್ರ ಈ ಎಲ್ಲ ದೇವರುಗೊ, ಯಜ್ಞೇಶ್ವರನೂ ಕೂಡ ಮಂಡಲದ  ಮೇಗೆ ನೆಲೆಸಿಗೊಂಡಿರುತ್ತರೆ ಹಾಗಾಗಿ ಮಂಡಲವನ್ನು ಹಾಕಬೇಕು 


ಸರ್ವತ್ರ ವಸುಧಾ ಪೂತಾ ಲೇಪೋ ಯತ್ರ ನ ವಿದ್ಯತೇ ।

ಯತ್ರ ಲೇಪಃ ಕೃತಸ್ತತ್ರ ಪುನರ್ಲೇಪೇನ ಶುಧ್ಯತಿ ॥೧೮॥


ಯಾವ ಭೂಮಿ (ಜಾಗೆ/ಸ್ಥಳ) ಲೇಪರಹಿತವಾಗಿದ್ದೋ (ಮಲ ಮೂತ್ರಾದಿ ಕೊಳಕ್ಕುರಹಿತವಾಗಿದ್ದೋ) ಅದು ಪವಿತ್ರವಾಗಿರುತ್ತು. ಎಲ್ಲಿ ಮೊದಲೇ ಗೋಮಯ ಲೇಪನವಾಗಿದ್ದೋ ಅಲ್ಲಿ ಪುನಃ ಗೋಮಯ ಬಳುದರೆ ಶುದ್ಧವಾಗುತ್ತದೆ 


ರಾಕ್ಷಸಾಶ್ಚ ಪಿಶಾಚಾಶ್ಚ ಭೂತಾಃ ಪ್ರೇತಾ ಯಮಾನುಗಾಃ ।

ಅಲಿಪ್ತದೇಶೇ ಖಟ್ವಾಯಾಮಂತರಿಕ್ಷೇ ವಿಶಂತಿ ಚ ॥೧೯॥


ರಾಕ್ಷಸರು, ಪಿಶಾಚಿಗಳು  ಭೂತಗಳು ಪ್ರೇತಗಳು ಮತ್ತೆ ಯಮದೂತರು ನೆಲಸಾರಿಸಿದ ಜಾಗೆಯ, ಭೂಮಿಯಿಂದ ಎತ್ತರಲ್ಲಿ ಮಂಚವ ಪ್ರವೇಶಿಸುತ್ತವೆ 


ಅತೋsಗ್ನಿ ಹೋತ್ರಂ ಶ್ರಾದ್ಧಂ ಚ ಬ್ರಹ್ಮಭೋಜ್ಯಂ ಸುರಾರ್ಜನಮ್ ।

ಮಂಡಲೇನ ವಿನಾ ಭೂಮ್ಯಾ ಮಾತುರಂ ನೈವ ಕಾರಯೇತ್ ॥೨೦॥


ಹಾಗಾಗಿ ಅತ್ನಿಹೋತ್ರ, ಶ್ರಾದ್ಧ, ಬ್ರಾಹ್ಮಣ ಭೋಜನ ಮತ್ತೆ ದೇವತಾಪೂಜೆ ಇವುಗಳ ಮಂಡಲ  ಮಾಡದೆ ಇದ್ದ ಭೂಮಿಯ ಮೇಲೆ ಮಾದಿದ ಮರಣ ಹೊಂದಿದವನ ಅಂತಹ ನೆಲದಲಿ ಮಡುಗಿದರೆ 


ಲಿಪ್ತಭೂಮ್ಯಾಮತಃ ಕೃತ್ವಾ ಸ್ವರ್ಣರತ್ನಂ ಮುಖೇ ಕ್ಷಿಪೇತ್ ।

ವಿಷ್ಣೋಃ ಪಾದೋದಕಂ ದದ್ಯಾಚ್ಛಾಲಗ್ರಾಮಸ್ವರೂಪಿಣಃ ॥೨೧॥


ಹಾಗಾಗಿ ಲೇಪಿಸಲ್ಪಟ್ಟ ಭೂಮಿಯ ಮೇಲೆ ಅವನ ಮಲಗಿಸಿ  ಅವನ ತುಟಿಗಳ ಮೇಲೆ ಬಂಗಾರವನ್ನೂ, ರತ್ನವನ್ನಗಲಿ ಇಡಬೇಕು , ಶಾಲಗ್ರಾಮ ಸ್ವರೂಪವಾದ ವಿಷ್ಣುವಿನ ಪಾದೋದಕವ ಬಿಡಬೇಕು.


ಶಾಲಗ್ರಾಮಶಿಲಾತೋಯಂ ಯಃ ಪಿಬೇದ್ಬಿಂದು ಮಾತ್ರಕಮ್ ।

ಸ ಸರ್ವಪಾಪನಿರ್ಮುಕ್ತೋ ವೈಕುಂಠಭುವನಂ ವ್ರಜೇತ್ ॥೨೨॥


ಶಾಲಗ್ರಾಮ ಶಿಲೆಯ ನೀರ ಯಾವಾತನು  ಒಂದು ಬಿಂದುವಾದರೂ ಕುಡಿಯುತ್ತನೋ ಅವನ  ಎಲ್ಲ ಪಾಪಗಳಿಂದ ಮುಕ್ತನಾಗಿ ವೈಕುಂಠಕ್ಕೆ ಹೋವುತ್ತನೆ .


ತತೋ ಗಂಗಾಜಲಂ ದದ್ಯಾನ್ಮಹಾಪಾತಕನಾಶನಮ್ ।

ಸರ್ವತೀರ್ಥಕೃತಸ್ನಾನದಾನಪುಣ್ಯಫಲಪ್ರದಮ್ ॥೨೩॥


ಮತ್ತೆ ಮಹಾಪಾಪಗಳ ನಾಶಮಾಡುವಂತಹ ಗಂಗಾಜಲವ ಕೊಡಬೇಕು. ಅದು ಎಲ್ಲ ತೀರ್ಥಗಳಲ್ಲಿ ಮಾಡಿದ ಸ್ನಾನ, ದಾನಗಳ ಪುಣ್ಯಫಲ  ಕೊಡುವಂತಾದ್ದು.


ಚಾಂದ್ರಾಯಣಂ ಚರೇದ್ಯಸ್ತು ಸಹಸ್ತಂ ಕಾಶಶೋಧನಮ್ ।

ಪಿಬೇದ್ಯಶ್ಚೈವ ಗಂಗಾಂಭಃ ಸಮೌ ಸ್ಯಾತಾಮುಭಾವಪಿ ॥೨೪॥


ಶರೀರವ ಶುದ್ಧಿಮಾಡುವ ಒಂದು ಸಾವಿರ ಚಾಂದ್ರಾಯಣ ವ್ರತವ ಆಚರಿಸುವವ  ಮತ್ತು ಗಂಗಾಜಲವ ಕುಡಿದವರು ಇಬ್ಬರು ಸಮಾನ ಎಂದು ಪರಿಗಣಿಸಲ್ಪಟ್ಟಿದು.


ಅಗ್ನಿಂ ಪ್ರಾಪ್ಯ ಯಥಾ ತಾರ್ಕ್ಷ್ಯ ತೂಲರಾಶಿರ್ವಿನಶ್ಯತಿ ।

ತಥಾ ಗಂಗಾಂಬುಪಾನೇನ ಪಾತಕಂ ಭಸ್ಮಸಾದ್ಭವೇತ್ ॥೨೫॥


ಹೇ ಗರುಡ!, ಏವ ರೀತಿ ಹತ್ತಿಯ ರಾಶಿ ಕಿಚ್ಚಿಗೆ ಸಿಕ್ಕಿ ನಾಶವಾಗುವವೋ , ಅದೇ ರೀತಿ ಗಂಗಾಜಲವ ಕುಡಿವದರಿಂದ ಪಾಪಗಳು  ಭಸ್ಮೀಭೂತವಾಗುವವು 


ಯಸ್ತು ಸೂರ್ಯಾಂಶುಸಂತಪ್ತಂ ಗಾಂಗಂ ಯಃ ಸಲಿಲಂ ಪಿಬೇತ್ ।

ಸ ಸರ್ವಯೋನಿನಿರ್ಮುಕ್ತಃ ಪ್ರಯಾತಿ ಸದನಂ ಹರೇಃ ॥೨೬॥


ಯಾವಾತನು  ಸೂರ್ಯನ ಕಿರಣಗಳಿಂದ ತಪಿಸಲ್ಪಟ್ಟ ಗಂಗಾಜಲವ ಕುಡಿಯುತ್ತನೋ, ಅವ  ಎಲ್ಲ ಜನ್ಮಗಳಿಂದಲೂ ಬಿಡುಗಡೆಹೊಂದಿ ಶ್ರೀ ಹರಿಯ ನಿವಾಸಕ್ಕೆ ಹೋಗುತ್ತನೆ 


ನದ್ಯೋ ಜಲಾವಗಾಹೇನ ಪಾವಯಂತೀತರಾ ಜನಾನ್ ।

ದರ್ಶನಾತ್ಸ್ಪರ್ಶನಾತ್ಪಾನಾತ್ತಥಾ ಗಂಗೇತಿ ಕೀರ್ತನಾತ್ ॥೨೭॥


ಇತರ ನದಿಗಳಿಂದ ಸ್ನಾನ ಮಾಡಿದರಿಂದ ಜನರ ಶುದ್ಧರಾಗುತ್ತಾರೋ ಆದರೆ, ಗಂಗಾನದಿಯ ದರ್ಶನ, ಸ್ಪರ್ಶನ, ಪಾನಗಳಿಂದ ಮತ್ತು ಸಂಕೀರ್ತನೆಯಿಂದ ಪವಿತ್ರವಾಗುತ್ತಾರೆ 


ಪುನಾತ್ಯಪುಣ್ಯಾನ್ಪುರುಷಾನ್ ಶತಶೋsಥ ಸಹಸ್ರಶಃ ।

ಗಂಗಾ ತಸ್ಮಾತ್ಪಿಬೇತ್ತಸ್ಯಾ ಜಲಂ ಸಂಸಾರತಾರಕಮ್ ॥೨೮॥


ನೂರಾರು, ಸಾವಿರಾರು ಪುಣ್ಯಹೀನ ಪುರುಷರ ಗಂಗಾಜಲವು ಪವಿತ್ರರನ್ನಗಿಸುತ್ತದೆ  ಹಾಗಾಗಿ ಈ ಸಂಸಾರವ ದಾಟಿಸುವಂತಹ ಗಂಗಾಜಲವ ಕುಡಿಯಬೇಕು.


ಗಂಗಾ ಗಂಗೇತಿ ಯೋ ಬ್ರೂಯಾತ್ಪ್ರಾಣೈಃ ಕಂಠಗತೈರಪಿ ।

ಮೃತೋ ವಿಷ್ಣುಪುರಂ ಯಾತಿ ನ ಪುನರ್ಜಾಯತೇ ಭುವಿ ॥೨೯॥


ಯಾವಾತನ ಪ್ರಾಣ ಕೊರಳಿಗೆ ಬಂದಗ ಗಂಗಾ-ಗಂಗಾ’ ಎಂದು ಹೇಳುತ್ತನೋ, ಅವ  ಮರಣಾನಂತ್ರ ವಿಷ್ಣುಪುರಕ್ಕೆ ಹೋಗುತ್ತನೆ. ಭೂಮಿಲಿ ಮತ್ತೆ ಹುಟ್ಟುವುದಿಲ್ಲ


ಉತ್ಕ್ರಾಮದ್ಭಿಶ್ಚ ಯಃ ಪ್ರಾಣೈಃ ಪುರುಷಃ ಶ್ರದ್ಧಯಾನ್ವಿತಃ ।

ಚಿಂತಯೇನ್ಮನಸಾ ಗಂಗಾಂ ಸೋsಪಿ ಯಾತಿ ಪರಾಂ ಗತಿಮ್ ॥೩೦॥


ಯಾವಾತನು  ಮನುಷ್ಯ ಪ್ರಾಣ ಹೋಗುವಾಗ  ಶ್ರದ್ಧೆಯಿಂದ ಮನಸ್ಸಿಲ್ಲಿಯೇ ಗಂಗೆಯ ಸ್ಮರಣೆ ಮಾಡುತ್ತನೋ ಅವನೂ ಪರಮಗತಿಯ ಹೊಂದುತ್ತನೆ 

.

ಅತೋ ದ್ಯಾಯೇನ್ನಮೇದ್ಗಂಗಾಂ ಸಂಸ್ಮರೇತ್ತಜ್ಜಲಂ ಪಿಬೇತ್ ।

ತತೋ ಭಾಗವತಂ ಕಿಂಚಿಚ್ಛೃಣುಯಾನ್ಮೋಕ್ಷದಾಯಕಮ್ ॥೩೧॥


ಹಾಗಾಗಿ ಗಂಗೆಯ ಧ್ಯಾನಿಸಬೇಕು. ನಮಸ್ಕರಿಸಬೇಕು. ನಾಮಸ್ಮರಣೆ ಮಾಡಬೇಕು ಮತ್ತು ಅದರ ಜಲವ ಕುಡಿಯಬೇಕು. ಮತ್ತೆ ಮೋಕ್ಷದಾಯಕವಾದ ಭಾಗವತವ ರಜಾರು ಕೇಳಬೇಕು.


ಶ್ಲೋಕಂ ಶ್ಲೋಕಾರ್ಧಪಾದಂ ವಾ ಯೋsಂತೇ ಭಾಗವತಂ ಪಠೇತ್ ।

ನ ತಸ್ಯ ಪುನರಾವೃತ್ತಿ ರ್ಬ್ರಹ್ಮಲೋಕಾತ್ಕದಾಚನ ॥೩೨॥


ಯಾರು ತನ್ನ ಅಂತ್ಯಕಾಲಲ್ಲಿ ಭಾಗವತದ ಒಂದು ಶ್ಲೋಕವನ್ನಾಗಲಿ, ಅರ್ಧಶ್ಲೋಕವನ್ನಾಗಲೀ ಅಥವಾ ನಾಲ್ಕನೇ ಒಂದು ಭಾಗ ಶ್ಲೋಕವನ್ನಾಗಲೀ ಪಠಿಸುತ್ತನೋ ಅವನು

 ಬ್ರಹ್ಮಲೋಕದಿಂದ ಮತ್ತೆ ಎಂದಿಂಗೂ ಹಿಂದಿರಿಗಿ ಬರುವುದಿಲ್ಲ 

.

ವೇದೋಪನಿಷದಾಂ ಪಾಠಾಚ್ಛಿವ ವಿಷ್ಣುಸ್ತವಾದಪಿ ।

ಬ್ರಾಹ್ಮಣಕ್ಷತ್ರಿಯ ವಿಶಾಂ ಮರಣಂ ಮುಕ್ತಿದಾಯಕಮ್ ॥೩೩॥


ಬ್ರಾಹ್ಮಣ ಕ್ಷತ್ರಿಯ ವೈಶ್ಯರಿಗೆ ಮರಣಕಾಲಲ್ಲಿ ವೇದೋಪನಿಷತ್ತು (ಭಗವದ್ಗೀತೆಯ) ಪಠಣ, ಶಿವ ವಿಷ್ಣು ಸ್ತುತಿ ಮುಕ್ತಿದಾಯಕವಾಗಿದ್ದು.


ಪ್ರಾಣಪ್ರಯಾಣಸಮಯೇ ಕುರ್ಯಾದನಶನಂ ಖಗ ।

ದದ್ಯಾದಾತುರಸಂನ್ಯಾಸಂ ವಿರಕ್ತಸ್ಯ ದ್ವಿಜನ್ಮನಃ ॥೩೪॥


ಹೇ ಖಗನೇ! ಪ್ರಾಣ ಹೊರಟು ಹೋಗುವ ಸಮಯಲ್ಲಿ ಉಪವಾಸವ ಮಾಡಬೇಕು. ಮನಸಾ ವಿರಕ್ತನಾದ ದ್ವಿಜನಿಗೆ ಆತುರ ಸಂನ್ಯಾಸವ ಕೊಡಬೇಕು.


ಸಂನ್ಯಸ್ತಮಿತಿ ಯೋ ಬ್ರೂಯಾತ್ಪ್ರಾಣೈಃ ಕಂಠಗತ್ರೈರಪಿ ।

ಮೃತೋ ವಿಷ್ಣುಪುರಂ ಯಾತಿ ನ ಪುನರ್ಜಾಯತೇ ಭುವಿ ॥೩೫॥


ಪ್ರಾಣ ಕೊರಳಿಗೆ ಬಂದರೂ ‘ನಾನು ಸಂನ್ಯಾಸ ತೆಕ್ಕೊಂಡಿದೆ’ ಎಂದು ಯಾವಾತನು ಹೇಳುತ್ತನೋ, ಅವ ಮರಣಹೊಂದಿ 

ವಿಷ್ಣುಪುರಕ್ಕೆ ಹೋಗುತ್ತನೆ  ಭೂಮಿಲಿ ಮತ್ತೆ ಹುಟ್ಟುವುದಿಲ್ಲ 


ಏವಂ ಜಾತವಿಧಾನಸ್ಯ ಧಾರ್ಮಿಕಸ್ಯ ತದಾ ಖಗ ।

ಊರ್ಧ್ವಚ್ಛಿದ್ರೇಣ ಗಚ್ಛಂತಿ ಪ್ರಾಣಾಸ್ತಸ್ಯ ಸುಖೇನ ಹಿ ॥೩೬॥


ಹೇ ಪಕ್ಷಿ!, ಈ ರೀತಿ ವಿಧಿಪೂರ್ವಕವಾಗಿ ಧಾರ್ಮಿಕ ಕ್ರಿಯೆಗಳನ್ನು ಮಾಡಿದರೆ ಅವಾಗ ಅವನ ಪ್ರಾಣವು ಊರ್ಧ್ವ ಮಾರ್ಗವಾಗಿ ಬ್ರಹ್ಮರಂಧ್ರಂದ ಸುಖವಾಗಿ ಹೊರ ಹೋಗುವುದು 


ಮುಖಂ ಚ ಚಕ್ಷುಷೀ ನಾಸೇ ಕರೌ ದ್ವಾರಾಣಿ ಸಪ್ತ ಚ ।

ಏಭ್ಯಃ ಸುಕೃತಿನೋ ಯಾಂತಿ ಯೋಗಿನಸ್ತಾಲುರಂಧ್ರತಃ ॥೩೭॥


ಬಾಯಿ, ಕಣ್ಣು, ಮೂಗಿನ ಹೊಳ್ಳೆ, ಕಿವಿ  – ಇವ್ವೇಳು ಸಪ್ತದ್ವಾರಗಳು . ಈ ದ್ವಾರಗಳಿಂದ ಸುಕೃತಿಗಳ ಪ್ರಾಣವು ಹೋಗುತ್ತದೆ  ಯೋಗಿಯ ಪ್ರಾಣವು ತಾಲುರಂಧ್ರದ (ಗಂಟಲ ಮೇಲ್ಬಾಗ) ಮೂಲಕ ಹೋಗುತ್ತದೆ 


ಅಪಾನಾನ್ಮಿಲಿತಪ್ರಾಣೌ ಯದಾ ಹಿ ಭವತಃ ಪೃಥಕ್ ।

ಸೂಕ್ಷ್ಮೀಭೂತ್ವಾ ತದಾ ವಾಯುರ್ವಿನಿಷ್ಕ್ರಾಮತಿ ಪುತ್ತಲಾತ್ ॥೩೮॥


ಅಪಾನದ ಒಟ್ಟಿಗೆ ಮಿಲಿತವಾಗಿದ್ದ ಪ್ರಾಣವು ಯಾವಾಗ ಬೇರೆ ಆಗುತ್ತವೋ , ಆಗ ಪ್ರಾಣವಾಯುವು ಈ ಜಡ ಶರೀರದ ಸೂಕ್ಷ್ಮ ರೂಪಲ್ಲಿ ನಿರ್ಗಮಿಸುತ್ತದೆ 


ಶರೀರಂ ಪತತೇ ಪಶ್ಚಾನ್ನಿರ್ಗತೇ ಮರುತೀಶ್ವರೇ ।

ಕಾಲಾಹತಂ ಪತತ್ಯೇವಂ ನಿರಾಧಾರೋ ಯಥಾ ದ್ರುಮಃ ॥೩೯॥


ಮುಖ್ಯ ಪ್ರಾಣವು ನಿರ್ಗಮಿಸಿದ ಮತ್ತೆ ಶರೀರ ಕಾಲವಶವಾಗಿ, ನಿರಾಧಾರವಾಗಿ ಮರದ ಹಾಗೆ ಬಿದ್ದು ಹೋಗುತ್ತದೆ 


ನಿರ್ವಿಚೇಷ್ಟಂ ಶರೀರಂ ಪ್ರಾಣೈರ್ಮುಕ್ತಂ ಜುಗುಪ್ಸಿತಮ್ ।

ಅಸ್ಪೃಶ್ಯಂ ಜಾಯತೇ ಸದ್ಯೇ ದುರ್ಗಂಧಂ ಸರ್ವನಿಂದಿತಮ್ ॥೪೦॥


ಪ್ರಾಣವು ಹೊರಟು ಹೋದಮಲೆ  ಶರೀರ ಚೇತನಾರಹಿತವಾಗಿ, ಅಸಹ್ಯವಾಗಿ, ಮುತ್ತಲು  ಯೋಗ್ಯವಲ್ಲದುದಾಗಿ, 

ದುರ್ಗಂಧಯುಕ್ತವಾಗಿ ಎಲ್ಲರಿಂದಲೂ ನಿಂದಿಸಲ್ಪಡುತ್ತದೆ .

ತ್ರಿಧಾವಸ್ಥಾ ಶರೀರಸ್ಯ ಕೃಮಿವಿಡ್ಭಸ್ಮರೂಪತಃ ।

ಕಿಂ ಗರ್ವಃ ಕ್ರಿಯತೇ ದೇಹೇ ಕ್ಷಣವಿಧ್ವಂಸಿಭಿರ್ನರೈಃ ॥೪೧॥


ಕ್ರಿಮಿ, ಮಲ, ಭಸ್ಮ ಇವು ಮೂರು ರೂಪಗಳಲ್ಲಿ ಶರೀರದ ಅವಸ್ಥೆಗಳಿಗೆ  ಒಂದು ಕ್ಷಣಲ್ಲಿ ಧ್ವಂಸವಾಗುವ ಶರೀರದ ಮೇಲೆ ಮನುಷ್ಯರು ಎಂತಕೆ ಗರ್ವ ಪಡುತ್ತರೋ 


ಪೃಥಿವ್ಯಾಂ ಲೀಯತೇ ಪೃಥ್ವೀ ಆಪಶ್ಚೈವ ತಥಾsಪ್ಸು ಚ ।

ತೇಜಸ್ತೇಜಸಿ ಲೀಯೇತ ಸಮೀರಸ್ತು ಸಮೀರಣೇ ॥೪೨॥


ಪೃಥ್ವಿಲಿ ಪೃಥ್ವಿ, ನೀರಿಲ್ಲಿ ನೀರು, ತೇಜಸ್ಸಿಲ್ಲಿ ತೇಜಸ್ಸು ಲೀನ ಆಗುತ್ತದೆ  ಮತ್ತೆ ವಾಯುವಿಲ್ಲಿ ವಾಯು ಲೀನವಾಗುತ್ತದೆ .

ಆಕಾಶಶ್ಚ ತಥಾಕಾಶೇ ಸರ್ವವ್ಯಾಪೀ ಚ ಶಂಕರಃ ।

ನಿತ್ಯಮುಕ್ತೋ ಜಗತ್ಸಾಕ್ಷೀ ಆತ್ಮಾ ದೇಹೇಷ್ವಜೋಮರಃ ॥೪೩॥


ಹಾಗೇ ಆಕಾಶಲ್ಲಿ ಆಕಾಶವು ಲೀನ ಆಗುತ್ತದೆ  ಆದರೆ ಈ ಆತ್ಮ ಸರ್ವವ್ಯಾಪಿ, ಚಿದಾನಂದದಾಯಕ, ನಿತ್ಯಮುಕ್ತ, ಜಗತ್ತಿಗೆ ಸಾಕ್ಷಿ ಮತ್ತು ಹುಟ್ಟು ಸಾವುಗಳು ಇಲ್ಲದ್ದು.


ಸರ್ವೇಂದ್ರಿಯಯುತೋ ಜೀವಃ ಶಬ್ದಾದಿವಿಷಯೈರ್ವೃತಃ ।

ಕಾಮರಾಗಾದಿಭಿರ್ಯುಕ್ತಃ ಕರ್ಮಕೋಶಸಮನ್ವಿತಃ ॥೪೪॥


ಜೀವ  ಸರ್ವೇಂದ್ರಿಯಗಳಿಂದ ಕೂಡಿ, ಶಬ್ದ ಮೊದಲಾದಿ ವಿಷಯಗಳಿಂದ ಸುತ್ತುವರ್ಕೊಂಡು ಕಾಮರಾಗಾದಿಗಳಿಂದ ತುಂಬಿ, ಕರ್ಮಗಳ ಕೋಶದಿಂದ ಒಡಗೂಡಿ

ಪುಣ್ಯವಾಸನಯಾ ಯುಕ್ತೋ ನಿರ್ಮಿತೇ ಸ್ವೇನ ಕರ್ಮಣಾ ।

ಸ ಪ್ರವಿಶ್ಯ ನವೇ ದೇಹೇ ಗೃಹೇ ದಗ್ಧೇ ಯಥಾ ಗೃಹೀ ॥೪೫॥


ಪುಣ್ಯವಾಸೆನೆಯಿಂದ ಕೂಡಿ ತನ್ನ ಮನೆ ಸುಟ್ಟುಹೋದ ಗೃಹಸ್ಥ ಮಾಡುತ್ತಾನೆ  ತನ್ನ ಕರ್ಮಗಳಿಗೆ ಆನುಸಾರವಾಗಿ 

ನಿರ್ಮಿತವಾದ ಹೊಸ ದೇಹವ ಪ್ರವೇಶಿಸುತ್ತನೆ .


ತದಾ ವಿಮಾನಮಾದಾಯ ಕಿಂಕಿಣೀ ಜಾಲಮಾಲಿ ಯತ್ ।

ಆಯಾಂತಿ ದೇವದೂಶ್ಚ ಲಸಚ್ಚಾಮರಶೋಭಿತಾಃ ॥೪೬॥


ಅಷ್ಟರಲ್ಲಿ ಕಿಂಕಿಣಿಯ ಜಾಳಿಗೆಗಳ ಮಾಲೆಗಳಿಂದ ಕೂಡಿದ ವಿಮಾನದಲ್ಲಿ ಕುಡಿಸಿಕೊಂಡು, ಹೊಳವ ಚಾಮರಗಳಿಂದ ಶೋಭಿತರಾಗಿ ದೇವದೂತರು ಬರುತ್ತಾರೆ 


ದರ್ಮತತ್ತ್ವವಿದಃ ಪ್ರಾಜ್ಞಾಃ ಸದಾ ಧಾರ್ಮಿಕವಲ್ಲಭಾಃ ।

ತದೈನಂ ಕೃತಕೃತ್ಯಂ ಸ್ವರ್ವಿಮಾನೇನ ನಯಂತಿ ತೇ ॥೪೭॥


ಧರ್ಮತತ್ವಗಳ ತಿಳಿದಿರುವ  ಪಂಡಿತರಾದ ಮತ್ತು ಯಾವತ್ತೂ ಧಾರ್ಮಿಕವ ಪ್ರೀತುಸುವವರು ಕೃತಕೃತ್ಯನಾದ ಅವನ ವಿಮಾನಲ್ಲಿ ಸ್ವರ್ಗಕ್ಕೆ ಕರಕ್ಕೊಂಡು ಹೋಗುತ್ತಾರೆ

ಸುದಿವ್ಯದೇಹೋ ವಿರಜಾಂಬರಸ್ರಕ್ಸುವರ್ಣರತ್ನಾಭರಣೈರುಪೇತಃ ।

ದಾನಪ್ರಭಾವಾತ್ಸ ಮಹಾನುಭಾವಃ ಪ್ರಾಪ್ನೋತಿ ನಾಕಂ ಸುವಪೂಜ್ಯಮಾನಃ ॥೪೮॥


ದಿವ್ಯವಾದ ದೇಹವ ಪಡೆದು, ಶುಭ್ರವಾದ ವಸ್ತ್ರ ಮತ್ತೆ ಮಾಲೆಗಳ ಧರಿಸಿ, ಸುವರ್ಣ ಮತ್ತೆ ರತ್ನದಿ  ಆಭರಣಗಳಿಂದ ಕೂಡಿದವರಾಗಿ, ದಾನದ ಪ್ರಭಾವದ ಆ ಮಹಾನುಭಾವ ಸ್ವರ್ಗವ ಸೇರಿ, ಅಲ್ಲಿ ದೇವತೆಗಳಿಂದ ಗೌರವಿಸಲ್ಪಡುತ್ತನೆ 

 

ಇತಿ ಶ್ರೀಗರುಡಪುರಾಣೇ ಸಾರೋದ್ಧಾರೇ ಮ್ರಿಯವಾಣ ಕೃತ್ಯ ನಿರೂಪಣಂ ನಾಮ ನವಮೋsಧ್ಯಾಯಃ ॥


ಇಲ್ಲಿಗೆ ಗರುಡಪುರಾಣಲ್ಲಿ ಸಕಲ ಶಾಸ್ತ್ರಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಮರಣಕಾಲದ ವಿಧಿಗಳ ನಿರೂಪಣೆ’ ಹೇಳುವ ಒಂಬತ್ತನೇ ಅಧ್ಯಾಯ ಮುಗಿದದ್ದೂ 


Friday, 26 June 2020

ಗರುಡ ಪುರಾಣ ಅಧ್ಯಾಯ 8 - 2

ಗರುಡ ಪುರಾಣ

ಗರುಡ ಪುರಾಣ ಅಧ್ಯಾಯ 08 – 02



ವಿಷ್ಣೋಃ ಪಾದಾಂಬು ನಾಮಾನಿ ಮರಣೇ ಮುಕ್ತಿದಾನಿ ಚ ॥೨೬॥


ಏಕಾದಶೀವ್ರತ, ಗೀತಾ, ಗಂಗಾಜಲ, ತುಲಸೀದಳ, ವಿಷ್ಣುವಿನ ಪಾದತೀರ್ಥ ಮತ್ತೆ ನಾಮಗಳು ಇವೆಲ್ಲವೂ ಮರಣ ಕಾಲಲ್ಲಿ ಮುಕ್ತಿಯ ಕೊಡುತ್ತವೆ 


ತತಃ ಸಂಕಲ್ಪಯೇದನ್ನಂ ಸಘೃತಂ ಚ ಸಕಾಂಚನಮ್ ।

ಸವತ್ಸಾ ಧೇನವೋ ದೇಯಾಃ ಶ್ರೋತ್ರಿಯಾಯ ದ್ವಿಜಾತಯೇ ॥೨೭॥


ಇದರ ಮತ್ತೆ, ತುಪ್ಪ ಮತ್ತೆ ಸುವರ್ಣ ಸಹಿತ ಅನ್ನದಾನದ ಸಂಕಲ್ಪ ಮಾಡಬೇಕು  ಶ್ರೋತ್ರಿಯನಾದ ದ್ವಿಜನಿಗೆ ಕಂಜಿ ಸಮೇತವಾದ ದನವ ದಾನ ಕೊಡಬೇಕು 


ಅಂತೇ ಜನೋ ಯದ್ದದಾತಿ ಸ್ವಲ್ಪಂ ವಾ ಯದಿ ವಾ ಬಹು ।

ತದಕ್ಷಯಂ ಭವೇತ್ತಾರ್ಕ್ಷ್ಯ ಯತ್ಪುತ್ರಸ್ಚಾನುಮೋದತೇ ॥೨೮॥


ಏ ಗರುಡನೇ!, ಅಂತ್ಯಕಾಲಲ್ಲಿ ಜನರು ರಜಾ ಆಗಲೀ, ಬಹುವಾಗಲೀ, ಯಾವುದನ್ನು  ದಾನ ಮಾಡುತ್ತರೋ ಯಾವುದರ ಮಲೆ ಅನುಮೋದಿಸುತ್ತನೋ ಅದು ಅಕ್ಷಯವಾವಗುವುದು 


ಅಂತಕಾಲೇ ತು ಸತ್ಪುತ್ರಃ ಸರ್ವದಾನಾನಿ ದಾಪಯೇತ್ ।

ಯತ್ತದರ್ಥಂ ಸುತೋ ಲೋಕೇ ಪ್ರಾರ್ಥ್ಯತೇ ಧರ್ಮಕೋವಿದೈಃ ॥೨೯॥


ಅಂತ್ಯಕಾಲಲ್ಲಿ ಸತ್ಪುತ್ರನಾದವ ತನ್ನ ಅಪ್ಪನಿಂದ ಎಲ್ಲ ದಾನಗಳನ್ನು  ಮಾಡಬೇಕು. ಈ ಉದ್ದೇಶಂದಲೇ ಧರ್ಮವ ತಿಳಿದೋರು ಲೋಕಲ್ಲಿ ಪುತ್ರಪ್ರಾಪ್ತಿಗೋಸ್ಕರವಾಗಿ ಪ್ರಾರ್ಥಿಸುತ್ತರೆ 


ಭೂಮಿಷ್ಠಂ ಪಿತರಂ ದೃಷ್ಟ್ವಾ ಅರ್ಧೋನ್ಮೀಲಿತಲೋಚನಮ್ ।

ಪುತ್ರೈಸ್ತೃಷ್ಣಾನ ಕರ್ತವ್ಯಾ ತದ್ಧನೇ ಪೂರ್ವಸಂಚಿತೇ ॥೩೦॥


ಭೂಶಾಯಿಯಾದ, ಅರ್ಧ ಬಿಡುಸಿದ ಕಣ್ಣುಗಳು ಅಪ್ಪನ ನೋಡಿ ಮಕ್ಕಳು  ಅವರು ಹಿಂದೆ ಸಂಪಾದುಸಿದ ಸಂಪತ್ತಿಗೆ ಆಸೆಪಡಬೇಡ 


ಸತದ್ದದಾತಿ ಸತ್ಪುತ್ರೋ ಯಾವಜ್ಜೀವತ್ಯಸೌ ಚಿರಮ್ ।

ಅತಿವಾಹಸ್ತು ತನ್ಮಾರ್ಗೇ ದುಃಖಂ ನ ಲಭತೇ ಯತಃ ॥೩೧॥


ಸತ್ಪುತ್ರ ಬಹುಕಾಲ ಜೀವನಾಧಾರವಪ್ಪ ದಾನವ ಕೊಡುತ್ತ ಮರಣಕಾಲದ ದಾನದಿಂದ ಯಮಮಾರ್ಗಲ್ಲಿ ಪ್ರೇತಕ್ಕೆ ದುಃಖವು  ಉಂಟಾಗಿ 


ಆತುರೇ ಚೋಪರಾಗೇ ಚ ದ್ವಯಂ ದಾನಂ ವಿಶಿಷ್ಯತೇ ।

ಅತೋsವಶ್ಯಂ ಪ್ರತಾತವ್ಯಮಷ್ಟದಾನಂ ತಿಲಾದಿಕಮ್ ॥೩೨॥


ಮರಣಕಾಲ, ಗ್ರಹಣಕಾಲ – ಈ ಎರಡರಲ್ಲಿ ಕೊಡುವ ದಾನಗಳು  ಎಲ್ಲ ದಾನಗಳಿಗಿಂತ ವಿಶೇಷವಾದ್ದು. ಆದ್ದರಿಂದ ಎಳ್ಳು ಮುಂತಾದ ಎಂಟು ದಾನಗಳನ್ನು  ಅವಶ್ಯವಾಗಿ ಕೊಡಲೆ ಬೇಕು.


ತಿಲಾ ಲೋಹಂ ಹಿರಣ್ಯಂ ಚ ಕಾರ್ಪಾಸೋ ಲವಣಂ ತಥಾ ।

ಸಪ್ತದಾನಂ ಕ್ಷಿತಿರ್ಗಾವಂ ಏಕೈಕಂ ಪಾವನಂ ಸ್ಮೃತಮ್ ॥೩೩॥


ಎಳ್ಳು, ಲೋಹ, ಚಿನ್ನ, ಹತ್ತಿಯ ವಸ್ತು, ಉಪ್ಪು, ಸಪ್ತಧಾನ್ಯಗಳು  ಭೂಮಿ, ಗೋವು – ಇವುಗಳು ಒಂದೊಂದು ದಾನವೂ ಪವಿತ್ರ ಎಂದು ಹೇಳಲಾಗುತ್ತದೆ 


ಏತಾದಷ್ಟಮಹಾದಾನಂ ಮಹಾಪಾತಕನಾಶನಮ್ ।

ಅಂತಕಾಲೇ ಪ್ರದಾತವ್ಯಂ ಶ್ರುಣು ತಸ್ಯ ಚ ಸತ್ಫಲಮ್ ॥೩೪॥


ಈ ಎಂಟು ಮಹಾದಾನಗಳು ಮಹಾಪಾಪಗಳ ನಾಶಮಾಡುತ್ತದೆ  ಮರಣ ಕಾಲಲ್ಲಿ ಈ ದಾನಗಳ ಮಾಡಿದರೆ ಉಂಟು ಸತ್ಫಲಗಳ ಬಗ್ಗೆ ಕೇಳು –


ಮಮ ಸ್ವೇದಸಮುದ್ಭೂತಾಃ ಪವಿತ್ರಾಸ್ತ್ರಿವಿಧಾಸ್ತಿಲಾಃ ।

ಅಸುರಾ ದಾನವಾ ದೈತ್ಯಾಸ್ತೃಪ್ಯಂತಿ ತಿಲದಾನತಃ ॥೩೫॥


ನನ್ನ ಬೆವರಿಂದ, ಪವಿತ್ರವಾದ ಮೂರು ವಿಧವಾದ ಎಳ್ಳುಗಳು  ಉತ್ಪನ್ನವಯಿತು ಎಳ್ಳಿನ ದಾನ ಮಾಡುವದರಿಂದ ಅಸುರರು, ದಾನವರು, ದೈತ್ಯರು ತೃಪ್ತಿ ಹೊಂದುತ್ತರೆ 


ತಿಲಾಃ ಶ್ವೇತಾಸ್ತಥಾ ಕೃಷ್ಣಾ ದಾನೇನ ಕಪಿಲಾಸ್ತಿಲಾಃ ।

ಸಂಹರಂತಿ ತ್ರಿಧಾ ಪಾಪಂ ವಾಙ್ಮನಃ ಕಾಯಸಂಚಿತಮ್ ॥೩೬॥


ಬೆಳಿ, ಕಪ್ಪು ಮತ್ತೆ ಕಂದು- ಈ ಮೂರು ವಿಧ ಬಣ್ಣದ ಎಳ್ಳುಗಳ ದಾನಮಾಡುವದರಿಂದ ವಾಚಾ, ಮನಸಾ, ಕಾಯಾ ಮಾಡಿದ ಪಾಪಗಳು ನಾಶವಾಗುವವು 

.

ಲೋಹದಾನಂ ಚ ದಾತವ್ಯಂ ಭೂಮಿಯುಕ್ತೇನ ಪಾಣಿನಾ ।

ಯಮಸೀಮಾಂ ನ ಚಾಪ್ನೋತಿ ನ ಗಚ್ಛೇತ್ತಸ್ಯ ವರ್ತ್ಮನಿ ॥೩೭॥


ಭೂಮಿಯಲ್ಲಿ  ಕೈಯಮಡುಗಿ ಲೋಹದಾನವ ಮಾಡಬೇಕು. ಹಾಗೆ ಮಾಡಿದವ  ಯಮಪುರಿಯ ಸೀಮೆಯೊಳಗೆ ಹೋಗುವುದೀಲ್ಲ ಹಾಗೂ ಯಮನ ಮಾರ್ಗಲ್ಲಿಯೂ ಹೋಗುವುದಿಲ್ಲ 


ಕುಠಾರೋ ಮುಸಲೋ ದಂಡಃ ಖಡ್ಗಶ್ಚ ಛುರಿಕಾ ತಥಾ ।

ಶಸ್ತ್ರಾಣಿ ಯಮಹಸ್ತೇ ಚ ನಿಗ್ರಹೇ ಪಾಪಕರ್ಮಣಾಮ್ ॥೩೮॥


ಕೊಡಲಿ, ಒನಕೆ, ದೊಣ್ಣೆ, ಖಡ್ಗ, ಮತ್ತೆ ಚೂರಿ – ಈ ಶಸ್ತ್ರಗಳ ಪಾಪಿಯ ಪಾಪಕರ್ಮಕ್ಕೆ ಶಿಕ್ಷೆ ವಿದೀಸಲೆ ಯಮಧರ್ಮರಾಜ ತನ್ನ ಹಸ್ತಲ್ಲಿ ಧರಿಸಿರುತ್ತನೆ 


ಯಮಾಯುಧಾನಾಂ ಸಂತುಷ್ಟೈ ದಾನಮೇತದುದಾಹೃತಮ್ ।

ತಸ್ಮಾದ್ದದ್ಯಾಲ್ಲೋಹದಾನಂ ಯಮಲೋಕೇ ಸುಖಾವಹಮ್ ॥೩೯॥


ಯಮನ ಆಯುಧಗಳ ಪ್ರಸನ್ನಗೊಳುಸಲು  ಈ ದಾನವು ಹೇಳಲ್ಪಟ್ಟಿದು. ಹಾಗಾಗಿ ಯಮಲೋಕಲ್ಲಿ ಸುಖವನ್ನುಂಟುಮಾಡುವ ಲೋಹದಾನವ ಮಾಡಬೇಕು 


ಊರಣಃ ಶ್ಯಾಮಸೂತ್ರಶ್ಚ ಶುಂಡಾಮರ್ಕೋsಪ್ಯುದಂಬರಃ ।

ಶೇಷಂಬಲೋ ಮಹಾದೂತಾ ಲೋಹದಾನಾತ್ಸುಖಪ್ರದಾಃ ॥೪೦॥


ಊರುಣ, ಶ್ಯಾಮಸೂತ್ರ, ಶುಂಡಾಮರ್ಕ, ಉದುಂಬರ, ಶೇಷಂಬಲ ಹೇಳುವ  ಯಮನ ಮಹಾದೂತರು ಲೋಹದಾನದಿಂದ ಸುಖಕೊಡುವವಾಗಿದ್ದವೆ 


ಶ್ರುಣು ತಾರ್ಕ್ಷ್ಯ ಪರಂ ಗುಹ್ಯಂ ದಾನಾನಾಂ ದಾನಮುತ್ತಮಮ್ ।

ದತ್ತೇನ ತೇನ ತುಷ್ಯಂತಿ ಭೂರ್ಭುವಃಸ್ವರ್ಗವಾಸಿನಃ ॥೪೧॥


ಏ ಗರುಡನೇ!, ಎಲ್ಲ ದಾನಗಳಲ್ಲಿ ಅತಿ ಉತ್ತಮವೂ, ಅತಿ ಗುಪ್ತವೂ ಆದ ದಾನವ ಕೇಳು. ಆ ದಾನದ ಭೂಲೋಕ, ಭುವರ್ಲೋಕ, ಸ್ವರ್ಗಲೋಕಗಳ ನಿವಾಸಿಗೊ ಸಂತೋಷಪಡುತ್ತರೆ 


ಬ್ರಹ್ಮಾದ್ಯಾ ಋಷಯೋ ದೇವಾ ಧರ್ಮರಾಜಸಭಾಸದಾಃ ।

ಸ್ವರ್ಣದಾನೇನ ಸಂತುಷ್ಟಾ ಭವಂತಿ ವರದಾಯಕಃ ॥೪೨॥


ಬ್ರಹ್ಮಾದಿಗಳು , ಋಷಿಗಳು  ದೇವತೆಗಳು ಮತ್ತೆ ಧರ್ಮರಾಜನ ಸಭಾಸದರು ಸುವರ್ಣದಾನದಿಂದ ಸಂತುಷ್ಟರಾಗಿ ವರದಾಯಕರಾಗುವರು 


ತಸ್ಮಾದ್ದೇಯಂ ಸ್ವರ್ಣದಾನಂ ಪ್ರೇತೋದ್ಧರಣ ಹೇತವೇ ।

ನ ಯಾತಿ ಯಮಲೋಕಂ ಸ ಸ್ವರ್ಗತಿಂ ತಾತ ಗಚ್ಛತಿ ॥೪೩॥


ಏ ಪ್ರಿಯ ಗರುಡನೇ!, ಹಾಗಾಗಿ ಪ್ರೇತದ ಉದ್ದಾರಕ್ಕಾಗಿ ಸುವರ್ಣದಾನವ ಮಾಡಬೇಕು . ಅದರಿಂದ ಅಂವ ಯಮಲೋಕಕ್ಕೆ ಹೋಗದೆ  ಸ್ವರ್ಗಲೋಕಕ್ಕೆ ಹೋಗುತ್ತನೆ 


ಚಿರಂ ವಸೇತ್ಸತ್ಯಲೋಕೇ ತತೋ ರಾಜಾ ಭವೇದಿಹ ।

ರೂಪವಾನ್ಧಾರ್ಮಿಕೋ ವಾಗ್ಮೀ ಶ್ರೀಮಾನತುಲಕ್ರಮಃ ॥೪೪॥


ಅವ ಬಹುಕಾಲದವರೇಗೆ ಸತ್ಯಲೋಕಲ್ಲಿ ವಾಸಮಾಡಿಕೊಂಡಿದ್ದು  ಮತ್ತೆ ಇಹಲೋಕಲ್ಲಿ ರೂಪವಂತನೂ, ಧರ್ಮಾತ್ಮನೂ, ವಾಗ್ಮಿಯೂ, ಶ್ರೀಮಂತನೂ, ಅತಿ ಪರಾಕ್ರಮಶಾಲಿಯೂ ಆದ ರಾಜನಾಗುತ್ತಾನೆ .


ಕಾರ್ಪಾಸಸ್ಯ ತು ದಾನೇನ ದೂತೇಭ್ಯೋ ನ ಭಯಂ ಭವೇತ್ ।

ಲವಣಂ ದೀಯತೇ ಯಚ್ಚ ತೇನ ನೈವ ಭಯಂ ಯಮಾತ್ ॥೪೫॥


ಹತ್ತಿಯ ಸಾಮಾನುಗಳ ದಾನದಿಂದ ಯಮದೂತರ ಭಯ ಇರುವುದಿಲ್ಲ ಮತ್ತೆ ಉಪ್ಪು ದಾನ ಮಾಡುವದರಿಂದ ಯಮಧರ್ಮರಾಜನ ಭಯ ಇರುವುದಿಲ್ಲ 


ಅಯೋಲವಣಕಾರ್ಪಾಸತಿಲಕಾಂ ಚನದಾನತಃ ।

ಚಿತ್ರಗುಪ್ತಾದಯಸ್ತುಷ್ಟಾ ಯಮಸ್ಯ ಪುರವಾಸಿನಃ ॥೪೬॥


ಲೋಹ, ಉಪ್ಪು, ಹತ್ತಿಯ ಸಾಮಾನು, ಎಳ್ಳು, ಬಂಗಾರ ದಾನಗಳಿಂದ ಯಮನ ಪಟ್ಟಣಲ್ಲಿ ವಾಸಮಾಡಿಕೊಂಡಿರುವ ಚಿತ್ರಗುಪ್ತ ಮೊದಲಾದವರು ಸಂತುಷ್ಟರಾಗುವರು 


ಸಪ್ತಧಾನ್ಯ ಪ್ರದಾನೇನ ಪ್ರೀತೋ ಧರ್ಮಧ್ವಜೋ ಭವೇತ್ ।

ತುಷ್ಟಾ ಭವಂತಿ ಯೇsನ್ಯೇsಪಿ ತ್ರಿಷು ದ್ವಾರೇಷ್ವಧಿಷ್ಠಿತಾಃ ॥೪೭॥


ಸಪ್ತಧಾನ್ಯಗಳ ದಾನ ಮಾಡುವದರಿಂದ ಧರ್ಮದ್ವಜ ಪ್ರಸನ್ನನಾಗುತ್ತಾನೆ  ಮತ್ತೆ ಇನ್ನುಳುದ ಮೂರು ದ್ವಾರಗಳಲ್ಲಿರುವವರು ಪ್ರಸನ್ನರಾಗುತ್ತಾರೆ .


ವ್ರೀಹಯೋ ಯವಗೋಧೂಮಾ ಮುದ್ಗಾ ಮಾಷಾಃ ಪ್ರಿಯಂಗವಃ ।

ಚಣಕಾಃ ಸಪ್ತಮಾ ಜ್ಞೇಯಾಃ ಸಪ್ತಧಾನ್ಯಮುದಾಹೃತಮ್ ॥೪೮॥


ಭತ್ತ, ಜವೆಗೋಧಿ, ಗೋಧಿ, ಹಸರು, ಉದ್ದು, ನವಣೆ, ಕಡಲೆ- ಇವೇಳು ಸಪ್ತಧಾನ್ಯಗಳು ಎಂದು ಹೇಳಲ್ಪಟ್ಟಿದೆ 


ಗೋಚರ್ಮಮಾತ್ರಂ ವಸುಧಾ ದತ್ತಾ ಪಾತ್ರೇ ವಿಧಾನತಃ ।

ಪುನಾತಿ ಬ್ರಹ್ಮಹತ್ಯಾಯಾ ದೃಷ್ಟಮೇತನ್ಮುನೀಶ್ವರೈಃ ॥೪೯॥


ಒಂದು ಗೋಚರ್ಮದಷ್ಟು* ಭೂಮಿಯ ಸತ್ಪಾತ್ರಜೆಗೆ ವಿಧಿಪೂರ್ವಕವಾಗಿ ಕೊಟ್ಟ ದಾನವು ಬ್ರಹ್ಮಹತ್ಯಾದೋಷದಿಂದ ಪರಿಶುದ್ಧಗೊಳ್ಳು ವನು ಎಂದು ಮುನೀಶ್ವರರಿಂದ ಕಂಡುಗೊಂಡಿದದು 


ನ ವ್ರತೇಭ್ಯೋ ನ ತೀರ್ಥೇಭ್ಯೋ ನಾನ್ಯದ್ದಾನಾದ್ವಿನಶ್ಯತಿ ।

ರಾಜ್ಯೇ ಕೃತಂ ಮಹಾಪಾಪಂ ಭೂಮಿದಾನಾದ್ವಿಲೀಯತೇ ॥೫೦॥


ರಾಜತ್ವದಲ್ಲಿ ಮಾಡಿದ ಮಹಾಪಾಪಗಳು  ವ್ರತಗಳಿಂದಲಾಗಲೀ, ತೀರ್ಥಗಳಿಂದಾಗಲೀ, ಅನ್ಯ ದಾನಗಳಿಂದಲಾಗಲೀ ನಾಶವಾಗುವುದಿಲ್ಲ . ಆದರೆ ಭೂದಾನದಿಂದ ಅವುಗಳು ನಾಶವಾಗುವವು .


ಪೃಥಿವೀಂ ಸಸ್ಯಸಂಪೂರ್ಣಾಂ ಯೋ ದದಾತಿ ದ್ವಿಜಾತಯೇ ।

ಸ ಪ್ರಯಾತೀಂದ್ರಭುವನೇ ಪೂಜ್ಯಮಾನಃ ಸುರಾಸುರೈಃ ॥೫೧॥


ಯಾವಾತ ಸಸ್ಯಭರಿತವಾದ ಭೂಮಿಯ ದ್ವಿಜನಿಗೆ ದಾನಮಾಡುತ್ತನೋ ಅವನು  ಸುರಾಸುರರಿಂದ ಪೂಜಿತನಾಗಿ ಇಂದ್ರಲೋಕಕ್ಕೆ ಹೋಗುತ್ತಾನೆ 


ಅತ್ಯಲ್ಪಫಲದಾನಿ ಸ್ಯುರನ್ಯದಾನಾನಿ ಕಾಶ್ಯಪ ।

ಪೃಥಿವೀದಾನಜಂ ಪುಣ್ಯಮಹನ್ಯಹನಿ ವರ್ಧತೇ ॥೫೨॥


ಹೇ ಕಾಶ್ಯಪನೇ!, ಇತರ ದಾನಗಳಿಂದ ಅತಿ ಕಮ್ಮಿ ಫಲವು ಬರುವುದು  ಆದರೆ ಭೂದಾನ ಮಾಡುವದರಿಂದ ಮಾಡುವವನ ಪುಣ್ಯವು ದಿನೇ ದಿನೇ ವೃದ್ಧಿಯಾಗುವುದು

Thursday, 25 June 2020

ಗರುಡ ಪುರಾಣ ಅಧ್ಯಾಯ 8

ಗರುಡ ಪುರಾಣ ಅಧ್ಯಾಯ – 8



ಆತುರದಾನನಿರೂಪಣಮ್                                   


ಮರಣಕಾಲದಲ್ಲಿ ಮಾಡಬೇಕಾದ ದಾನಗಳ ನಿರೂಪಣೆ

 

ಗರುಡ ಉವಾಚ


ಆಮುಷ್ಮಿ ಕೀಂ ಕ್ರಿಯಾಂ ಸರ್ವಾಂ ವದ ಸುಕೃತಿನಾಂ ಮಮ ।

ಕರ್ತವ್ಯಾ ಸಾ ಯಥಾ ಪುತ್ರೈಸ್ತಥಾ ಚ ಕಥಯ ಪ್ರಭೋ ॥೦೧॥


ಗರುಡ  ಹೇಳಿದ – ಹೇ ಪ್ರಭೋ!, ಸತ್ಕಾರ್ಯಗಳ ಮಾಡಿದವರ ಪರಲೋಕ ಕ್ರಿಯೆಗಳು  ಎಲ್ಲವನ್ನೂ ನನಗೆ ಹೇಳು. ಅವರ ಮಕ್ಕಳಿಂದ ಆ ಕ್ರಿಯೆಗಳನ್ನು ಯಾವರೀತಿಯೆಲ್ಲ ಮಾಡಬೇಕು ಹೇಳುವುದೆಲ್ಲವನ್ನೂ  ಯಥಾವತ್ತಾಗಿ ಎನಗೆ ಹೇಳು.


ಶ್ರೀ ಭಗವಾನುವಾಚ


ಸಾಧು ಪೃಷ್ಟಂ ತ್ವಯಾ ತಾರ್ಕ್ಷ್ಯ ಮಾನುಷಾಣಾಂ ಹಿತಾಯ ವೈ ।

ಧಾರ್ಮಿಕಾರ್ಹಂ ಚ ಯತ್ಕೃತ್ಯಂ ತತ್ಸರ್ವಂ ಕಥಯಾಮಿ ತೇ ॥೦೨॥


ಭಗವಂತ  ಹೇಳಿದ – ಏ ಗರುಡನೇ!, ಮಾನವರ ಹಿತಕ್ಕಾಗಿ ನಿನ್ನಂದ ಒಳ್ಳೆದನ್ನೇ ಕೇಳಿದ್ದಿಯ  ಯಾವ ಕಾರ್ಯಗಳನ್ನು ಧರ್ಮಾತ್ಮನಾದವ ಮಾಡಲು ಯೋಗ್ಯವೋ ಅವುಗಳೆಲ್ಲವನ್ನೂ ನಿನಗೆ ಹೇಳುತ್ತೆನೆ 


ಸುಕೃತೀ ವಾರ್ದ್ಧಕೇ ದೃಷ್ಟ್ವಾ ಶರೀರಂ ವ್ಯಾಧಿ ಸಂಯುತಮ್ ।

ಪ್ರತಿಕೂಲನ್ದ್ರಹಾಂಶ್ಚೈವ ಪ್ರಾಣಘೋಷಸ್ಯ ಚಾಶ್ರುತಿಮ್ ॥೦೩॥


ಧರ್ಮಾತ್ಮನು ಮುಪ್ಪಿಲ್ಲಿ ರೋಗಪೀಡಿತವಾದ ತನ್ನ ಶರೀರವ ನೋಡಿ ಗ್ರಹಗಳ ಪ್ರತಿಕೂಲವಾಗಿದರ ಅರಿತು ಪ್ರಾಣವಾಯುವಿನ ನಾದ ಕೇಳಿದೆ 


ತದಾ ಸ್ವಮರಣಂ ಜ್ಞಾತ್ವಾ ನಿರ್ಭಯಃ ಸ್ಯಾದತಂದ್ರಿತಃ ।

ಅಜ್ಞಾತಜ್ಞಾತಪಾಪಾನಂ ಪ್ರಾಯಶ್ಚಿತ್ತಂ ಸಮಾಚರೇತ್ ॥೦೪॥


ಆವಾಗ, ತನ್ನ ಮರಣ ಸಮೀಪಿಸಿದ್ದರ ತಿಳಿದು ನಿರ್ಭಯನಾಗಿ, ಆಲಸ್ಯ ರಹಿತನಾಗಿ, ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳ ಪ್ರಾಯಶ್ಚಿತ್ತವ ಮಾಡಿಕೊಳ್ಳಬೇಕು.


ಯದಾ ಸ್ಯಾದಾತುರಃ ಕಾಲಸ್ತದಾ ಸ್ನಾನಂ ಸಮಾರಭೇತ್ ।

ಪೂಜನಂ ಕಾರಯೇದ್ವಿಷ್ಣೋಃ ಶಾಲಗ್ರಾಮಸ್ವರೂಪಿಣಃ ॥೦೫॥


ಏವಾಗ ಅವನ ಅಂತ್ಯಕಾಲ ಸಮೀಪಿಸುತ್ತೋ ಅವಗ ಶಾಲಗ್ರಾಮ ಸ್ವರೂಪನಾದ ವಿಷ್ಣುವ ಪೂಜೆಯ ಮಾಡಿಸಬೇಕು.


ಅರ್ಚಯೇದ್ಗಂಧಪುಷ್ಪೈಶ್ಚ ಕುಂಕುಮೈಸ್ತುಲಸೀದಲೈಃ ।

ಧೂಪೈರ್ದೀಪೈಶ್ಚ ನೈವೇದ್ಯೈರ್ಬಹುಭಿರ್ಮೋದಕಾದಿಭಿಃ ॥೦೬॥


ಗಂಧಪುಷ್ಪಗಳಿಂದ, ಕುಂಕುಮ ತುಳಸೀದಳಗಳಿಂದ, ಧೂಪದೀಪಗಳಿಂದ, ವಿವಿಧ ಮೋದಕಾದಿ ನೈವೇದ್ಯಗಳಿಂದ ಪೂಜಿಸಬೇಕು.


ದತ್ವಾ ಚ ದಕ್ಷಿಣಾಂ ವಿಪ್ರಾನ್ನೈ ವೇದ್ಯಾದೇವ ಭೋಜಯೇತ್ ।

ಅಷ್ಟಾಕ್ಷರಂ ಜಪೇನ್ಮಂತ್ರಂ ದ್ವಾದಶಾಕ್ಷರಮೇವ ಚ ॥೦೭॥


ಬ್ರಾಹ್ಮಣರಿಗೆ ದಕ್ಷಿಣೆಯ ಕೊಟ್ಟು, ನೈವೇದ್ಯದಲ್ಲೇ ಭೋಜನಮಾಡಿಸಿ, ಅಷ್ಟಾಕ್ಷರೀ ಮಂತ್ರ (ಓಂ ನಮೋ ನಾರಾಯಣಾಯ)ವ ಮತ್ತು ದ್ವಾದಶಾಕ್ಷರೀ ಮಂತ್ರ (ಓಂ ನಮೋ ಭಗವತೇ ವಾಸುದೇವಾಯ)ವನ್ನೂ ಜಪಿಸಬೇಕು.


ಸಂಸ್ಮರೇಚ್ಛೃಣುಯಾಚ್ಚೈವ ವಿಷ್ಣೋರ್ನಾಮ ಶಿವಸ್ಯ ಚ ।

ಹರೇರ್ನಾಮ ಹರೇತ್ಪಾಪಂ ನೃಣಾಂ ಶ್ರವಣಗೋಚರಮ್ ॥೦೮॥


ವಿಷ್ಣುವಿನ ಮತ್ತು ಶಿವನ ನಾಮಗಳನ್ನು  ಸ್ಮರಿಸಬೇಕು ಮತ್ತು ಕೇಳಬೇಕು ಹರಿಯ ನಾಮವು ಮನುಷ್ಯರ ಕಿವಿಗೆ  ಬಿದ್ದರೆ ಸಾಕು ಅವರ ಪಾಪಗಳೆಲ್ಲವೂ ನಾಶವಾಗುತ್ತವೆ 

.

ರೋಗಿಣೋಂsತಿಕಮಾಸಾದ್ಯ ಶೋಚನೀಯಂ ನ ಬಾಂಧವೈಃ ।

ಸ್ಮರಣೀಯಂ ಪವಿತ್ರಂ ಮೇ ನಾಮ ಧ್ಯೇಯಂ ಮುಹುರ್ಮುಹುಃ ॥೦೯॥


ರೋಗಿಯ ಹತ್ತಿರ  ಬಂದು ಅವನ ಬಂಧುಗಳು  ದುಃಖಿಸಲಾಗಿ . ಎನ್ನ ಪವಿತ್ರವಾದ ನಾಮವ ಮತ್ತೆ ಮತ್ತೆ ಸ್ಮರಿಸಬೇಕು


ಮತ್ಸ್ಯಃ ಕೂರ್ಮೋ ವರಾಹಶ್ಚ ನರಸಿಂಹಶ್ಚ ವಾಮನಃ ।

ರಾಮೋ ರಾಮಶ್ಚ ಕೃಷ್ಣಶ್ಚ ಬುದ್ಧಃ ಕಲ್ಕೀ ತಥೈವ ಚ ॥೧೦॥


ಮರ್ತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಹಾಗೂ ಕಲ್ಕಿ


ಏತಾನಿ ದಶ ನಾಮಾನಿ ಸ್ಮರ್ತವ್ಯಾನಿ ಸದಾ ಬುಧೈಃ ।

ಸಮೀಪೇ ರೋಗಿಣೋ ಬ್ರೂಯುರ್ಬಾಂಧವಾಸ್ತೇ ಪ್ರಕೀರ್ತಿತಾಃ ॥೧೧॥


ಈ ಹತ್ತು ನಾಮಗಳ ಬುದ್ಧಿವಂತರು ಯಾವತ್ತೂ ಸ್ಮರಿಸುತ್ತಿರಬೇಕು. ರೋಗಿಯ ಸಮೀಪಲ್ಲಿ ಈ ನಾಮಗಳನ್ನು  ಹೇಳುವ ಬಾಂಧವರು ಎಂದು ಹೇಳಲ್ಪಡುತ್ತಿರಬೇಕು 


ಕೃಷ್ಣೇತಿ ಮಂಗಲಂ ನಾಮ ಯಸ್ಯ ವಾಚಿ ಪ್ರವರ್ತತೇ ।

ತಸ್ಯ ಭಸ್ಮೀಭವಂತ್ಯಾಶು ಮಹಾಪಾತಕಕೋಟಯಃ ॥೧೨॥


ಕೃಷ್ಣ  ಹೇಳುವ ಮಂಗಳ ನಾಮವು ಯಾರ ಬಾಯಿಂದ ಹೊರಡುತ್ತೋ ಅವನ ಕೋಟಿ ಮಹಾ ಪಾತಕಗಳು ಸುಟ್ಟು ಭಸ್ಮವಾಗುವವು 


ಮ್ರಿಯಮಾಣೋ ಹರೇರ್ನಾಮ ಗೃಣನ್ಪುತ್ರೋಪಚಾರಿತಮ್ ।

ಅಜಾಮಿಲೋsಪ್ಯಗಾದ್ಧಾಮ ಕಿಂ ಪುನಃ ಶ್ರದ್ಧಯಾ ಗೃಣನ್ ॥೧೩॥


ಸಾಯುತಲಿದ್ದ ಅಜಾಮಿಳ  ತನ್ನ ಮಗನ ಹೆಸರಾದ ಹರಿಯ ನಾಮವ ಉಚ್ಛರಿಸಿ ಸ್ವರ್ಗವ ಸೇರಿದ. ಮತ್ತೆ ಶ್ರದ್ಧೆಯಿಂದ ಉಚ್ಛರಿಸಿರೆ ಅದರ ಫಲ (ಶಕ್ತಿ) ಎಷ್ಟ!


ಹರಿರ್ಹರತಿ ಪಾಪಾನಿ ದುಷ್ಟಚಿತ್ತೈರಪಿಸ್ಮೃತಃ ।

ಅನಿಚ್ಛಯಾಪಿ ಸಂಸ್ಪೃಷ್ಟೋ ದಹತ್ಯೇವ ಹಿ ಪಾವಕಃ ॥೧೪॥


ದುಷ್ಟಚಿತ್ತನೂ ಹರಿನಾಮವ ಸ್ಮರಿಸಿರೆ ಹರಿ ಅವನ ಪಾಪಗಳೆಲ್ಲವ ನಾಶ ಮಾಡುತ್ತದೆ . ಅಗ್ನಿಯ ಇಚ್ಛೆಯಿಲ್ಲದ್ದೆ ಮುಟ್ಟಿದರೂ  ಅದು ಸುಟ್ಟೇ ಸುಡುತ್ತದೆ 

.

ಹರೇರ್ನಾಮಶ್ಚ ಯಾ ಶಕ್ತಿಃ ಪಾಪನಿರ್ಹರಣೇ ದ್ವಿಜ ।

ತಾವತ್ಕರ್ಮ ಸಮರ್ಥೋ ನ ಪಾತಕಂ ಪಾತಕೀ ಜನಃ ॥೧೫॥


ಎಲೈ ಗರುಡನೇ!, ಹರಿಯ ನಾಮದಲ್ಲಿ ಪಾಪಗಳ ನಾಶಮಾಡುವ ಶಕ್ತಿ ಎಷ್ಟು ಇದ್ದೋ ಅಷ್ಟು ಪಾಪಗಳ ಮಾಡಲು ಪಾಪಿಗಳು  ಅಸಮರ್ಥರಾಗಿದ್ದವು.


ಕಿಂಕರೇಭ್ಯೋ ಯಮಃ ಪ್ರಾಹಾನಯಧ್ವಂ ನಾಸ್ತಿ ಕಂ ಜನಮ್ ।

ನೈವಾನಯತ ಭೋ ದೂತಾಃ ಹರಿನಾಮಸ್ಮರಂ ನರಮ್ ॥೧೬॥


ಯಮಧರ್ಮರಾಜ ತನ್ನ ದೂತರಿಗೆ ಹೇಳಿದ್ದ – “ಎಲೈ ದೂತರೇ, ನಾಸ್ತಿಕ ಜನರ ಇಲ್ಲಿಗೆ ಕರದುಕ್ಕೊಂಡು ಬನ್ನಿ ಮತ್ತೆ ಹರಿನಾಮಸ್ಮರಣೆ ಮಾಡದ  ಜನರ ಇಲ್ಲಿಗೆ ಕರೆದುಕೋಂಡು ಬನ್ನಿ .


ಅಚ್ಯುತಂ ಕೇಶವಂ ರಾಮನಾರಾಯಣಂ ಕೃಷ್ಣದಾಮೋದರಂ ವಾಸುದೇವಂ ಹರಿಮ್ ।

ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕೀನಾಯಕಂ ರಾಮಚಂದ್ರಂ ಭಜೇ ॥೧೭॥


ಅಚ್ಯುತ, ಕೇಶವ, ರಾಮ, ನಾರಾಯಣ, ಕೃಷ್ಣ, ದಾಮೋದರ, ವಾಸುದೇವ, ಹರಿ, ಶ್ರೀಧರ, ಮಾಧವ, ಗೋಪಿಕಾವಲ್ಲಭ, ಜಾನಕೀನಾಯಕ, ಶ್ರೀರಾಮಚಂದ್ರ ಹೀಂಗೆ ಭಜಿಸಬೇಕು 


ಕಮಲನಯನ ವಾಸುದೇವ ವಿಷ್ಣೋ ಧರಣೀಧರಾಚ್ಯುತ ಶಂಖಚಕ್ರಪಾಣೇ ।

ಭವ ಶರಣಮಿತೀರಯಂತಿ ಯೇ ವೈ ತ್ಯಜ ಭಟ ದೂರತರೇಣ ತಾನಪಾಪಾನ್ ॥೧೮॥


ಎಲೈ ಭಟರೇ, ಯಾವ ಮನುಷ್ಯರು “ಹೇ ಕಮಲನಯನ, ಹೇ ವಾಸುದೇವ, ಹೇ ವಿಷ್ಣೋ, ಹೇ ಧರಣೀಧರ, ಹೇ ಅಚ್ಯುತ, ಹೇ ಶಂಖಚಕ್ರಧಾರಿ, ಈ ಸಂಸಾರಲ್ಲಿ ಎನ್ನ ರಕ್ಷಕನೇ ಎಂದು ಸ್ತುತಿಸಿಗೊಂಡು ಇರುತ್ತರೋ  ಅಂತಹ ಪಾಪಹೀನರ ದೂರದಲೇ ಬಿಟ್ಟ ಬಿಡಿ 


ತಾನಾನಯಧ್ವಮಸತೋ ವಿಮುಖಾನ್ಮುಕುಂದಪಾದಾರವಿಂದ ಮಕರಂದರಸಾದಜಸ್ರಮ್ ।

ನಿಷ್ಕಿಂಚನೈಃ ಪರಮಹಂಸಕುಲೈ ರಸಜ್ಞೈರ್ಜುಷ್ಟಾದ್ಗೃಹೇ ನಿರಯವರ್ತ್ಮನಿ ಬದ್ಧತೃಷ್ಣಾನ್ ॥೧೯॥


ಪಾಪಕರ್ಮಗಳಿಂದ ವಿಮುಖರಾಗಿ ಸರ್ವವನ್ನೂ ಪರಿತ್ಯಜಿಸಿ, ಬ್ರಹ್ಮರಸಾನುಭವಿಗಳಾದ ಪರಮಹಂಸರ ಕುಲದವರಿಂದ ಸೇವಿಸಲ್ಪಟ್ಟ ಮುಕುಂದನ ಪಾದಾರವಿಂದಗಳ ಮಕರಂದದ ಆಸ್ವಾದನೆಂದ ವಿಮುಖರಾಗಿ  ಮತ್ತೆ ನರಕದ ದಾರಿಯಾದ ಸಂಸಾರದ ತೃಷ್ಣೆಯಿಂದ ಬಂಧಿತರಾದ ಆ ಪಾಪಿಗಳ ಕರಕ್ಕೊಂಡು ಬನ್ನಿ.


ಜಿಹ್ವಾ ನ ವಕ್ತಿ ಭಗವದ್ಗುಣನಾಮಧೇಯಂ ಚೇತಶ್ಚನ ಸ್ಮರತಿ ತಚ್ಚರಣಾರವಿಂದಮ್ ।

ಕೃಷ್ಣಾಯ ನೋ ನಮತಿ ಯಚ್ಚಿರ ಏಕದಾಪಿ ತಾನನಯಧ್ವಮಸತೋsಕೃತವಿಷ್ಣುಕೃತ್ಯಾನ್ ॥೨೦॥


ಯಾರ ನಾಲಗೆ ಭಗವಂತನ ಗುಣಗಳನ್ನೂ ನಾಮಗಳನ್ನೂ ಹೇಳುತ್ತಿಲ್ಲವೆಯೋ, ಯಾರ ಮನಸ್ಸು ಆ ಭಗವಂತನ ಚರಣಾರವಿಂದಗಳ ಸ್ಮರಿಸುತ್ತಿಲ್ಲವೊ , ಯಾರ ಶಿರವು ಒಂದು ಸರ್ತಿಯೂ ತಲೆಬಾಗಿ ಕೃಷ್ಣನ ನಮಸ್ಕರಿಸುತ್ತಿಲ್ಲವೊ , ಯಾರು ಈ ವಿಷ್ಣುವಿನ (ಪೂಜಾದಿ) ಕಾರ್ಯಗಳ ಮಾಡುತ್ತಿಲ್ಲವೊ ಅಂತಹ ಪಾಪಿಗಳ ಕರಕ್ಕೊಂಡು ಬನ್ನಿ”.


ತಸ್ಮಾತ್ಸಂಕೀರ್ತನಂ ವಿಷ್ಣೋರ್ಜಗನ್ಮಂಗಲಮಂಹಸಾಮ್ ।

ಮಹತಾಮಪಿ ಪಕ್ಷೀಂದ್ರ ವಿದ್ಧೈಕಾಂತಿಕನಿಷ್ಕೃತಿಮ್ ॥೨೧॥


ಎಲೈ ಪಕ್ಷೀಂದ್ರನೇ!, ಹಾಗಾಗಿ ಭಗವಾನ್ ವಿಷ್ಣುವಿನ ನಾಮ ಸಂಕೀರ್ತನೆ ಜಗತ್ತಿಲ್ಲಿ ಮಂಗಳಕರವಾದ್ದು ಹಾಗೂ ಅತಿ ದೊಡ್ಡ ಪಾಪಕ್ಕೂ ಏಕಮಾತ್ರ ಪ್ರಾಯಶ್ಚಿತ್ತರೂಪವಾದ್ದು.


ಪ್ರಾಯಶ್ಚಿತ್ತಾನಿ ಚೀರ್ಣಾನಿ ನಾರಾಯಣಪರಾಙ್ಮುಖಮ್ ।

ನ ನಿಷ್ಪುನಂತಿ ದುರ್ಬುದ್ಧಿಂ ಸುರಾಕುಂಭಮಿವಾಪಗಾಃ ॥೨೨॥


ಹೆಂಡದ ಗಡಿಗೆ  ಹೇಗೆ ನದಿಯುನ್ನು   ಪ್ರವಿತ್ರಗೊಳಿಸದೋ, ಹಾಗೇ, ಪಾಪಗಳು ಮಾಡಲ್ಪಟ್ಟ ಪ್ರಾಯಶ್ಚಿತ್ತಗಳೂ ನಾರಾಯಣನಿಂದ ವಿಮುಖನಾದ ದುಷ್ಟಬುದ್ಧಿಯ ಮನುಷ್ಯನ ಪವಿತ್ರತೆಯನ್ನು  ಮಾಡಲಾರ 


ಕೃಷ್ಣನಾಮ್ನಾ ನ ನರಕಂ ಪಶ್ಯಂತಿ ಗತಕಿಲ್ಬಿಷಾಃ ।

ಯಮಂ ಚ ತದ್ಭಟಾಶ್ಚೈವ ಸ್ವಪ್ನೇsಪಿ ನ ಕದಾಚನ ॥೨೩॥


ಕೃಷ್ಣನ ನಾಮಸ್ಮರಣೆಯಿಂದ ಪಾಪಗಳು ಕಳದು ಹೋಗಿ . ಮತ್ತೆ ಅಂತವು ನರಕವನ್ನ  ಆಗಲೀ, ಯಮನನ್ನ ಆಗಲೀ ಅಥವ ಅವನ ಭಟರನ್ನಾಗಲೀ ಏವತ್ತೂ ಸ್ವಪ್ನಲ್ಲಿಯೂ ಕೂಡ ನೋಡುದಿಲ್ಲ 


ಮಾಂಸಾಸ್ಥಿ ರಕ್ತವತ್ಕಾಯೇ ವೈತರಣ್ಯಾಂ ಪತೇನ್ನ ಸಃ ।

ಯೋಂsತೇ ದದ್ಯಾದ್ದ್ವಿಜೇಭ್ಯಶ್ಚ ನಂದನಂದನ ಗಾಮಿತಿ ॥೨೪॥


ಯಾರು ಅಂತ್ಯಕಾಲದಲ್ಲಿ ಗೋವಿನ ನಂದನಂದನಗೆ ಎಂದು ದ್ವಿಜನಿಗೆ ದಾನ ಮಾಡುತ್ತರೋ  ಅವು ಮಾಂಸ, ಮೂಳೆ, ರಕ್ತಗಳಿಂದ ಉಂಟಾದ ದೇಹವೆಂಬ ವೈತರಿಣಿಲಿ ಬೀಳುವುದಿಲ್ಲ 


ಅತಃ ಸ್ಮರೇನ್ಮಹಾವಿಷ್ಣೋರ್ನಾಮ ಪಾಪೌಘನಾಶನಮ್ ।

ಗೀತಾ ಸಹಸ್ರನಾಮಾನಿ ಪಠೇದ್ವಾ ಶ್ರುಣುಯಾದಪಿ ॥೨೫॥


ಹಾಗಾಗಿ, ಪಾಪಗಳ ಸಮೂಹವನ್ನೇ ನಾಶಮಾಡುವಂತಹ ಮಹಾವಿಷ್ಣುವಿನ ನಾಮಗಳನ್ನು  ಸ್ಮರಿಸಬೇಕು ಗೀತೆ ಮತ್ತೆ ಸಹಸ್ರನಾಮಗಳ ಪಠಿಸಬೇಕು ಅಥವಾ ಕೇಳಬೇಕು 



ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...